ಮಂಗಳೂರು, ಮೇ 31: ಮಂಜನಾಡಿ ಬಳಿಯ ಮೊಂಟೆಪದುವಿನಲ್ಲಿ ನಿನ್ನೆ ಸಂಭವಿಸಿದ ಭಾರೀ ಗುಡ್ಡ ಕುಸಿತದ ದುರಂತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಈಘಟ್ಟನೆಯ ಆಘಾತಕರ ದೃಶ್ಯಗಳು ಎಲ್ಲರ ಮನತಣಿಸುತ್ತಿವೆ. ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಮೃತಪಟ್ಟವರು ಇಬ್ಬರು ಮಕ್ಕಳು ಮತ್ತು ಅವರ ಅಮ್ಮ. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳ ತಾಯಿ ಅಶ್ವಿನಿ ಇದೀಗ ತೀವ್ರ ಪೀಡೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಅಶ್ವಿನಿಗೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯಕೀಯ ತಪಾಸಣೆಯ ನಂತರ ಎರಡು ಕಾಲುಗಳನ್ನು ತೆಗೆದಿದ್ದಾರೆ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಒಂದು ಕಾಲಿನ ಪಾದದ ಭಾಗವನ್ನು ಮತ್ತು ಮತ್ತೊಂದು ಕಾಲನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ. ಪರಿಣಾಮವಾಗಿ, ಅಶ್ವಿನಿ ಇದೀಗ ತನ್ನ ದೈನಂದಿನ ಜೀವನವನ್ನೂ ಸಹ ಇನ್ನೊಬ್ಬರ ನೆರವಿಲ್ಲದೆ ನಿರ್ವಹಿಸಲು ಅಸಾಧ್ಯ ಸ್ಥಿತಿಗೆ ತಲುಪಿದ್ದಾರೆ.

ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿರುವ ಅಶ್ವಿನಿಗೆ ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯು ನಡೆಯುತ್ತಿದ್ದು, ವೈದ್ಯರು 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಣೆಯ ಹಾದಿಯಲ್ಲಿದೆ ಎಂಬ ಮಾಹಿತಿ ವೈದ್ಯಕೀಯ ಮೂಲಗಳಿಂದ ಲಭ್ಯವಾಗಿದೆ.

 

 

Related News

error: Content is protected !!