ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೊಪ್ಪದಲ್ಲಿ ಮನುಷ್ಯತ್ವಕ್ಕೆ ಮುಳುಗುವಂತಹ ಘೋರ ಘಟನೆೊಂದರ ಮಾಹಿತಿ ಹೊರಬಿದ್ದಿದೆ. ಕೇವಲ ಎರಡು ದಿನದ ಹಸುಗೂಸನ್ನು ರೂ.1 ಲಕ್ಷಕ್ಕೆ ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ವಿವರವಾಗಿ ತಿಳಿದಿರುವಂತೆ, ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನ ಎಂಬ ಮಹಿಳೆಗೆ ಹೆರಿಗೆ ಆಗಿತ್ತು. ಆದರೆ ಮಗುವು ಹುಟ್ಟಿದ ಕೆಲವೇ ದಿನಗಳಲ್ಲೇ, ಈ ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಲು ನರ್ಸ್ ಹಾಗೂ ನಿವೃತ್ತ ಆರೋಗ್ಯ ಸಿಬ್ಬಂದಿ ಸೇರಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಸ್ಪತ್ರೆಯ ನಿವೃತ್ತ ನರ್ಸ್ ಕುಸುಮಾ ಎಂಬವರು, ಮಗು ಹುಟ್ಟಿದ ಎರಡನೇ ದಿನವೇ ರೂ.5,000 ಮೊತ್ತವನ್ನು ಅಡ್ವಾನ್ಸ್ ರೂಪದಲ್ಲಿ ಪಡೆದು, ಉಳಿದ ಮೊತ್ತದ ಜೊತೆ ಶಿಶುವನ್ನು ತನ್ನ ಕಾರ್ಕಳ ಮೂಲದ ಸಹೋದರ ರಾಘವೇಂದ್ರಗೆ ನೀಡಲು ಯತ್ನಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಸ್ಥಳೀಯರ ಶಂಕೆಯಿಂದ ಪ್ರಕರಣ ಬಯಲಿಗೆ ಬಂದು, ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೀಗ ಪೊಲೀಸರು ಮಗುವನ್ನು ರಕ್ಷಣೆ ಮಾಡಿ ತಾತ್ಕಾಲಿಕ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!