ಶಂಭುಖನಗರ ಗ್ರಾಮದಲ್ಲಿ ಕಳೆದ 4 ದಿನಗಳಿಂದ ನೀರಿಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ, ಇಷ್ಟಾದರೂ ಈ ಬಗ್ಗೆ ಯಾವುದೇ ಅಧಿಕಾರಿಗಳು, ತಲೆ ಕೆಡಿಸಿಕೊಳ್ಳುತ್ತಿಲ್ಲ, ನಮ್ಮ ಗೋಳು ಕೇಳುವರು ಯಾರು ಎಂದು ಗ್ರಾಮಸ್ಥರು ಸಸಂಭಂದ ಪಟ್ಟ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಹೌದು ವೀಕ್ಷಕರೇ ಇದೇ ಗೌರಿಬಿದನೂರು ತಾಲೂಕಿಗೆ ಸೇರಿದ ಇಡಗೂರು ಗ್ರಾಮ ಪಂಚಾಯತಿಗೆ ಶಂಭುಖ ನಗರ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನರ ಪರದಾಟ ಆಂಧ್ರಪ್ರದೇಶದ ಚೌಳೂರಿನಿಂದ ಬರುವಂತಹ ಟ್ಯಾಂಕರ್ ನಲ್ಲಿ ಒಂದು ಬಿಂದಿಗೆಗೆ 15 ರೂಗಳಂತೆ ಖರೀದಿಸಿ ಗ್ರಾಮಸ್ಥರು ನೀರು ಕುಡಿಯುವ ಹಾಗಾಗಿದೆ, ಮತ್ತು ಚರಂಡಿ ಸ್ವಚ್ಛತೆ ಮಾಡಿ ಸುಮಾರು ಎರಡು ಮೂರು ವರ್ಷ ಆಗಿದೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ ಮತ್ತು ವಾರ್ಡ್ ನ ಸದಸ್ಯ ಕೂಡ ಇದರ ಬಗ್ಗೆ ಯಾವುದೇ ರೀತಿಯ ಕ್ರಮ ವಹಿಸಿಲ್ಲ, ಎಂದು ಬೇಕೇ ಬೇಕು ನೀರು ಬೇಕು ಎಂದು ಘೋಷಣೆ ಗಳನ್ನು ಕೂಗಿ ಶಂಭುಖ ನಗರದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಫೋನ್ ಮಾಡಿ ನೀರಿನ ಬಗ್ಗೆ ಮಾಹಿತಿ ತಿಳಿಸಿದರೆ ನಾನು ರಜೆಯಲ್ಲಿದ್ದೀನಿ, ಇದೀನಿ ನನಗೆ ಹುಷಾರಿಲ್ಲ ಎಂದು  ಹೇಳುತ್ತಾರೆ, ಶಂಭುನಗರ ಜನತೆಗೆ ನೀರು ಕೊಡುವುದು ಯಾರು ಮತ್ತು ಚರಂಡಿ ಕ್ಲೀನಿಂಗ್ ಆಗುವುದು ಯಾವಾಗ? ಇಡುಗೂರು ಗ್ರಾಮ ಪಂಚಾಯತಿ ಅಧಿಕಾರಿಗಳು ಇದರ ಬಗ್ಗೆ ಆದಷ್ಟು ಬೇಗ ಕ್ರಮ ವಹಿಸದೆ ಇದ್ದಲ್ಲಿ, ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.  ವರದಿ:ಅವಿನಾಶ್ 

Related News

error: Content is protected !!