ಮುಂಬೈ: ಪತಿಯ ಹತ್ಯೆಗೆ ತಾನೇ ಶಡ್ಯಂತ್ರ ರೂಪಿಸಿ, ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳ ಸಹಾಯದಿಂದ ಶವವನ್ನು ನಾಶಪಡಿಸಿದ ಭೀಕರ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿದು ಬೆಳಕಿಗೆ ಬಂದಿದೆ. ಪ್ರಾಂಶುಪಾಲೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ, ವೈಯಕ್ತಿಕ ವೈಷಮ್ಯದಿಂದ ಪತಿಯನ್ನು ನಷ್ಠಕಾರಿ ಮಾರ್ಗದಲ್ಲಿ ಕೊಂದಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ನಾಗ್ಪುರ ಮೂಲದ ಶಾಂತನು ದೇಶಮುಖ್ (32) ಎಂದು ಗುರುತಿಸಲಾಗಿದೆ. ಈತನ ಪತ್ನಿ ನಿಧಿ ದೇಶಮುಖ್ (24) ಮುಂಬೈನ ಸನ್‌ರೈಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸುತ್ತಿದ್ದಳು. ಮೇ 15 ರಂದು ಚೌಸಲಾ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯ ಶವವೊಂದು ಪತ್ತೆಯಾಗಿದ್ದು, ಕೊನೆಯದಾಗಿ DNA ಪರೀಕ್ಷೆಯಿಂದ ಶಾಂತನು ಎಂಬುದು ದೃಢಪಟ್ಟಿತು.

ಆರೋಪ ಪ್ರಕಾರ, ಪತಿಗೆ ಊಟದಲ್ಲಿ ವಿಷ ನೀಡಿದ ನಿಧಿ, ಬಳಿಕ ಪತಿ ಮೃತಪಟ್ಟ ಬಳಿಕ ಶವವನ್ನು ಬೆಂಕಿ ಹಚ್ಚಿದಳು. ಈ ಭೀಕರ ಕಾರ್ಯದಲ್ಲಿ ಶಾಲೆಯ ಕೆಲ ಅಪ್ರಾಪ್ತ ವಿದ್ಯಾರ್ಥಿಗಳ ಸಹಕಾರ ಪಡೆದಿದ್ದಾಳೆ ಎನ್ನಲಾಗಿದೆ. ಶಿಕ್ಷಕರಂಥವರಿಂದ ಇದೇನೂ ನಿರೀಕ್ಷಿಸದ ಮಕ್ಕಳು ಈ ಕ್ರೂರ ಕೃತ್ಯದ ಭಾಗಿಯಾಗಿದ್ದ ವಿಷಯ ಸ್ಥಳೀಯರಲ್ಲಿ ತೀವ್ರ ಆಘಾತ ಉಂಟುಮಾಡಿದೆ.

ಪೊಲೀಸರು ಸ್ಥಳೀಯರ ಸಹಾಯದಿಂದ ಗಂಭೀರ ತನಿಖೆ ನಡೆಸಿದ್ದು, ಶಂಕೆಯುತವಾಗಿ ಕಂಡುಬಂದ ಪತ್ನಿಯ ವಿರುದ್ಧ ಸಾಕ್ಷ್ಯಗಳನ್ನು ಕಲೆಹಾಕಿದರು. ವಿಚಾರಣೆ ವೇಳೆ ನಿಧಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಪ್ರಕರಣದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಭೀಕರ ಘಟನೆಯು ಶಿಕ್ಷಣ ಕ್ಷೇತ್ರದ ನೈತಿಕತೆಗೆ ಗಬ್ಬೆ ತರುತ್ತಿರುವುದರೊಂದಿಗೆ, ಬಾಲಮನಸ್ಸಿನಲ್ಲಿ ನಾಪತ್ತೆಯಾದ ಮಾನವೀಯತೆ ಕುರಿತು ಚಿಂತೆ ಉಂಟುಮಾಡಿದೆ.

ಪೊಲೀಸರು ಹೆಚ್ಚಿನ ಮಾಹಿತಿ ಹಾಗೂ ಹಿನ್ನೆಲೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರೆಸಿದ್ದಾರೆ.

Related News

error: Content is protected !!