ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಸದ್ಬಳಕೆ ಮಾಡಿಕೊಂಡು ಬಾಗಿಲು ಮುರಿದು ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡಿದ್ದ ಕಳ್ಳನನ್ನು ಹುಬ್ಬಳ್ಳಿಯ ಕಸಬಾಪೇಟೆ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಇಸ್ಲಾಂಪೂರ್‌ನ ಗದಗಪುರ ಲೇಔಟ್ ಪ್ರದೇಶದಲ್ಲಿ ವಾಸವಿರುವ ಶಬೀರ್ ಗದಗಕರ್ ಅವರ ಮನೆಯಲ್ಲಿ ನಡೆದಿದ್ದ ಈ ಕಳ್ಳತನದ ಪ್ರಕರಣದಲ್ಲಿ ಸುಮಾರು 190 ಗ್ರಾಂ ಬಂಗಾರದ ಆಭರಣಗಳು ಕಳ್ಳತನವಾಗಿದ್ದವು. ಪ್ರಕರಣದ ತನಿಖೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡ ಕಸಬಾಪೇಟೆ ಠಾಣೆಯ ಪೊಲೀಸರು, ವಿಶೇಷ ತಂಡ ರಚಿಸಿ ಹತ್ತಿರದ ವರದಿಗಳನ್ನು ಶೋಧಿಸಿ ಆರೋಪಿಯನ್ನು ಪತ್ತೆ ಹಚ್ಚಿದರು.

ಇನ್ಸಪೆಕ್ಟರ್ ರಾಘವೇಂದ್ರ ಹೆಚ್. ಹಳ್ಳೂರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, 20 ವರ್ಷದ ಮುನ್ಸಬ್ಬಿರ್ ಗದಗಕರ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಕಳವುಗೊಂಡಿದ್ದ ಸುಮಾರು 18 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಎಸ್ಪಿ ಉಮೇಶ್ ಚಿಕ್ಕಮಠ್ ಅವರ ಮಾರ್ಗದರ್ಶನ ಇದ್ದು, ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ಜೊತೆಗೆ ಎಎಸ್‌ಐ ಸಿ.ಎಸ್. ಅಂಗಡಿ ಮತ್ತು ಸಿಬ್ಬಂದಿಗಳಾದ ಐ.ಕೆ. ಧಾರವಾಡ, ಬಿ.ಎಫ್. ಬೆಳಗಾವಿ, ಎಲ್.ವೈ. ಪಾಟೀಲ್, ಆರ್.ಎಸ್. ರಾಠೋಡ್, ಎಚ್.ಆರ್. ರಾಮಾಪುರ್, ಎಚ್.ಟಿ. ಬ್ಯಾಡಗಿ ಹಾಗೂ ಪಾಲಯ್ಯ ಎನ್ ಅವರು ಚುರುಕಾಗಿ ಭಾಗವಹಿಸಿದ್ದರು.

Related News

error: Content is protected !!