ಕೊಪ್ಪ ತಾಲೂಕಿನ ಜಯಪುರದಲ್ಲಿ ಭಾರಿ ಮಳೆಗೆ ನಾಡಕಚೇರಿ ಕಟ್ಟಡ ಕುಸಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಕಟ್ಟಡ ಕುಸಿತದ ವೇಳೆ ಒಳಗಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಲ್ಪಕಾಲದೊಳಗೆ ಹೊರಬಂದದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಈ ಕಟ್ಟಡವನ್ನು ಕೇವಲ ಒಂದು ವರ್ಷದ ಹಿಂದಷ್ಟೇ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿತ್ತು. ಆದರೂ ಸುರಿಯುತ್ತಿರುವ ಮಳೆಗೆ ಕಟ್ಟಡ ತಡೆಯಲಾಗದೇ ಸಂಪೂರ್ಣವಾಗಿ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಪ್ರಶ್ನೆ ಎತ್ತಿದೆ.

ಘಟನೆಯ ಸಮಯದಲ್ಲಿ ಕಚೇರಿಯೊಳಗೆ ಕೆಲ ಅಧಿಕಾರಿಗಳು ಮತ್ತು ಜನರು ಇದ್ದರು. ಕಟ್ಟಡವೇ ಅಜ್ಞಾತವಾಗಿ ಬಿದ್ದಿದ್ದರಿಂದ ಗಭೀರ ಅಪಾಯ ಸಂಭವಿಸಬಹುದಾಗಿತ್ತು. ನಾಡಕಚೇರಿಯಲ್ಲಿದ್ದ ಅನೇಕ ಪ್ರಮುಖ ದಾಖಲೆಗಳು ಮಣ್ಣುಪಾಲಾಗಿವೆ.

ಈ ಕಟ್ಟಡವು ಮೂಲತಃ ಸುಮಾರು 50 ವರ್ಷ ಹಳೆಯ ಶಾಲಾ ಕಟ್ಟಡವಾಗಿದ್ದು, ನಿರ್ವಹಣೆಯಿಲ್ಲದೆ ಪಾಳು ಬಿದ್ದಿರುವುದನ್ನು ನಾಡಕಚೇರಿ ಕಾರ್ಯಲಯವಾಗಿ ಬಳಸಲಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಮುಗಿಲು ಮುರಿದು ಬೀಳುತ್ತಿರುವ ಮಳೆಯ ಕಾರಣವಾಗಿ ಕಟ್ಟಡದ ಗೋಡೆಗಳು ತೇವದಿಂದ ಬಡಬಡಿಹೋಗಿ ಕೊನೆಗೆ ಧರೆಗುರುಳಿವೆ.

ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಕಾರ್ಯಲಯದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.ಜನತೆ ಸುರಕ್ಷಿತ ಮತ್ತು ಶಾಶ್ವತ ನಾಡಕಚೇರಿ ಕಟ್ಟಡಕ್ಕಾಗಿ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

 

error: Content is protected !!