ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕೇರಿಯಲ್ಲಿ (ಸರ್ವೇ ನಂಬರ್ 49) ನೂರಾರು ಮೀನುಗಳ ಸಾವನ್ನಪ್ಪಿವೆ.
ವಿಷ ಹಾಕಿದ್ರಾ ಕೀಚಕರು…?
ಹೌದು, ಸಧ್ಯ ಆ ಕೆರೆಯಲ್ಲಿ ಮೀನುಗಳ ಸಾಲು ಸಾಲು ಸಾವು ನೋಡಿದರೆ ಇಡೀ ಕೆರೆಗೆ ವಿಷ ಹಾಕಿದ್ರಾ ಅನ್ನುವ ಅನುಮಾನ ವ್ಯಕ್ತವಾಗಿದೆ ..ಅದೇ ಗ್ರಾಮದ ಮೌಲಾಲಿ ಮಕಾಂದರ ಎನ್ನುವವರು ಗ್ರಾಮ ಪಂಚಾಯಿತಿಯ ಟೆಂಡರ್ ಅಲ್ಲಿ ಕೆರೆಯನ್ನು ಹರಾಜಿಗೆ ತೆಗೆದುಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಮರಿಗಳನ್ನು ಬಿಟ್ಟಿದ್ದರು.ಮೀನುಗಳು ಇನ್ನೇನು ಹಿಡಿಯುವ ಹಂತಕ್ಕೆ ಬಂದು ಹಾಕಿದ ಬಂಡವಾಳ ಬಂದು ಸ್ವಲ್ಪವಾದರೂ ಸಂಸಾರದ ಬಂಡಿ ಸಾಗಿಸಬಹುದು ಎನ್ನುವ ಆಲೋಚನೆಯಲ್ಲಿದ್ದರು ಆದರೆ ಅದ್ಯಾವ ದುರುಳರ ಕಣ್ಣು ಬಿತ್ತೋ ಕಳೆದೆರಡು ದಿನಗಳಿಂದ ನೂರಾರು ಮೀನುಗಳ ಸಾವು ಮೌಲಾಲಿ ಕುಟುಂಬಕ್ಕೆ ಸಂಕಷ್ಟ ತಂದೊಡ್ಡಿದೆ.
ಇಂತಹ ದುಷ್ಕೃತ್ಯ ಮಾಡುವ ದುರುಳರಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.

Related News

error: Content is protected !!