ಸವದತ್ತಿ (ಬೆಳಗಾವಿ ಜಿಲ್ಲೆ): ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ರೋಗಿ ತಪಾಸಣೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಬೆಳಕಿಗೆ ಬಂದಿದೆ. ಡಾ. ಸುರೇಶ್ ಹಿತ್ತಲಮನಿ ಎಂಬ ವೈದ್ಯ ಎಣ್ಣೆ ಕುಡಿದು ಡ್ಯೂಟಿಗೆ ಬಂದು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಂದರ ಪರೀಕ್ಷೆ ನಡೆಸಿರುವ ಆರೋಪ ಕೇಳಿ ಬಂದಿದೆ.

ವೈದ್ಯನ ಅಸಭ್ಯ ನಡವಳಿಕೆಯಿಂದ ಅಸಹನೆಯಾದ ರೋಗಿಯ ಕುಟುಂಬದವರು ಈ ತಕ್ಷಣ ವೈದ್ಯನ ತಪಾಸನೆ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ವೈದ್ಯ ಅವರ ಮಾತಿಗೆ ಕಿವಿಯೊಡ್ಡದೇ ತುರಟತನದಿಂದ ರೋಗಿಯನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ಎದ್ದು ನಿಲ್ಲಲಾಗದಷ್ಟರ ಮಟ್ಟಿಗೆ ಟೈಟಾಗಿ ಇದ್ದ ವೈದ್ಯ, ಕಣ್ಣು ಕಣ್ಣಿಗೆ ಬೀಳದಂತೆ ತೇಲಾಡುತ್ತಲೇ ರೋಗಿಯನ್ನು ನೋಡಿದ್ದಾರೆ.

ಈ ಅಸಾಧಾರಣ ಘಟನೆಯ ವೇಳೆ ರೋಗಿಯ ಸಂಬಂಧಿಕರು ವೈದ್ಯನ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿ, ಮಾತನಾಡಿ ತೀರ್ಥಿಸಿ, ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಆಸ್ಪತ್ರೆಯ ನರ್ಸ್ ಮಧ್ಯಪ್ರವೇಶ ಮಾಡಿ ರೋಗಿಯನ್ನು ತಾನೇ ತಪಾಸಿಸುತ್ತೇನೆ ಎಂದು ಮುಂದಾಗಿದ್ದಾರೆ.

ಸ್ಥಳೀಯರು ಮತ್ತು ರೋಗಿಗಳು ನೀಡಿದ ಮಾಹಿತಿಯ ಪ್ರಕಾರ, ಡಾ. ಸುರೇಶ್ ಹಿತ್ತಲಮನಿ ಈ ಹಿಂದೆಯೂ ಅನೇಕ ಬಾರಿ ಮದ್ಯಪಾನದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದು ರೋಗಿಗಳನ್ನು ಪರೀಕ್ಷಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿತ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂಬ ದೂರಿವೆ. ಆದರೆ ಈ ತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಮರ್ಪಕ ತನಿಖೆ ಹಾಗೂ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Related News

error: Content is protected !!