
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ಭಾನುವಾರ (ಏಪ್ರಿಲ್ 20) ದುರಂತ ಘಟನೆ ಸಂಭವಿಸಿದ್ದು, ಮಗನನ್ನು ರಕ್ಷಿಸಲು ಹೋಗಿ ತಂದೆಯೂ ನೀರುಪಾಲಾದಿದ್ದಾರೆ.
ಭದ್ರಾವತಿ ಪಟ್ಟಣದ ಭೂತನಗುಡಿಯ ನಿವಾಸಿ ಮಹಮ್ಮದ್ ಜಾಬಿರ್ ಅವರು ತಮ್ಮ 14 ವರ್ಷದ ಮಗ ಮಹಮ್ಮದ್ ಜವಾದ್ ಹಾಗೂ ಕುಟುಂಬದೊಂದಿಗೆ ಭದ್ರಾ ಜಲಾಶಯಕ್ಕೆ ವಿಹಾರಕ್ಕೆ ಬಂದಿದ್ದರು. ಊಟದ ಬಳಿಕ ಜವಾದ್ ಜಲಾಶಯದ ಹಿನ್ನೀರಿನಲ್ಲಿ ಈಜಲು ಇಳಿದಿದ್ದ. ಆದರೆ ನೀರಿನ ಆಳತೆಯನ್ನು ಗಮನಿಸದ ಕಾರಣ, ಅವನು ನೀರಲ್ಲಿ ಮುಳುಗಿದನು.
ಆತನನ್ನು ರಕ್ಷಿಸಲು ತಂದೆ ಜಾಬಿರ್ ಕೂಡ ನೀರಿಗೆ ಜಿಗಿದರೂ, ಆವರಿಗೂ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಸ್ಥಳೀಯರು ಮತ್ತು ರಕ್ಷಕ ತಂಡಗಳು ಧಾವಿಸಿ ಜವಾದ್ ಶವವನ್ನು ಮಧ್ಯರಾತ್ರಿಯಲ್ಲಿ ಪತ್ತೆ ಹಚ್ಚಿದರೆ, ತಂದೆ ಜಾಬಿರ್ ಇನ್ನೂ ಪತ್ತೆಯಾಗಿಲ್ಲ.
ಘಟನೆಯ ಬಳಿಕ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಬಿರ್ ಪತ್ತೆಯಾಗಿ ಹೊರಬರುವವರೆಗೆ ಶೋಧ ಕಾರ್ಯ ಮುಂದುವರೆದಿದೆ.