ಬೆಂಗಳೂರು: ನಗರದ ಎಸ್‌ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಮತ್ತೊಂದು ಭಾಷಾ ವಿವಾದವೇ ಉಲ್ಕಿಯಂತೆ ಸಿಡಿದಿದೆ. ಆಟೋ ಚಾಲಕನೊಬ್ಬ ಹಾಗೂ ಹಿಂದಿ ಮಾತನಾಡುವ ವ್ಯಕ್ತಿಯ ನಡುವೆ ನಡೆದ ಮಾತಿನ ಗಲಾಟೆಯ ದೃಶ್ಯಗಳು ಆಗಿದ್ದು, ಕನ್ನಡಿಗರ ಮನಸಿನಲ್ಲಿ ಆಕ್ರೋಶ ಎಬ್ಬಿಸಿದೆ.

ವೈರಲ್ ವಿಡಿಯೋದಲ್ಲಿ, ಆಟೋ ಚಾಲಕನು “ಇಲ್ಲಿ ಕನ್ನಡ ಮಾತನಾಡಬೇಕು” ಎಂಬ ಧಿಟ್ಟಾದ ಮಾತು ಆಡುತ್ತಾನೆ. ಪ್ರತಿಸ್ಪಂದಿಸಿದ ಹಿಂದಿ ಭಾಷಿಕ ಯುವಕನು, “ಇಲ್ಲಿ ಬದುಕಬೇಕಾದರೆ ಹಿಂದಿ ಕಲಿಯಬೇಕು” ಎಂಬ ಧಮ್ಮಿಗೆ ಇಳಿಯುತ್ತಾನೆ. ಇಬ್ಬರ ನಡುವೆ ಮಾತಿನ ಪಟ್ಟು ತೀವ್ರಗೊಂಡಿದ್ದು, ಸ್ಥಳದಲ್ಲಿದ್ದ ಯುವತಿಯೊಬ್ಬಳು ಹಿಂದಿ ಭಾಷಿಕನನ್ನು ಹಿಡಿದು ಎಳೆದೊಯ್ಯುತ್ತಿರುವ ದೃಶ್ಯವೂ ದಾಖಲಾಗಿದೆ.

ಈ ಘಟನೆ ರಾಜ್ಯಾದ್ಯಂತ ಭಾರೀ ಪ್ರತಿಕ್ರಿಯೆ ಹುಟ್ಟುಹಾಕಿದ್ದು, “ಬೆಂಗಳೂರು ಕನ್ನಡಿಗರ ನಗರ, ಇಲ್ಲಿ ಸ್ಥಳೀಯ ಭಾಷೆಗೆ ಗೌರವವಿರಬೇಕು” ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಂತಹೆಡೆ, ಕನ್ನಡ ಮಾತಾಡಿದ ಆಟೋ ಚಾಲಕನ ಧೈರ್ಯಕ್ಕೆ ಬಹುತೆಕ ಜನರು ಬೆನ್ನೆಲುಬು ಕೊಟ್ಟಿದ್ದಾರೆ. ಈ ಘಟನೆಯು ನಗರದಲ್ಲಿ ಭಾಷಾ ಸಂವೇದನೆ ಮತ್ತು ಸ್ಥಳೀಯ ಅಸ್ಮಿತೆಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗುತ್ತಿದೆ.

error: Content is protected !!