
ಕುಂದಗೋಳ: ಗ್ರಾಮ ಅಂದಮೇಲೆ ಮೂಲ ಸೌಕರ್ಯಗಳು ಇರಬೇಕು. ರಸ್ತೆ ಚರಂಡಿ. ಶುದ್ದ ಕುಡಿಯುವ ನೀರು ಇರಲೇಬೇಕು ಆದರೆ ಇಲ್ಲೊಂದು ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲದೆ ಜನರು ಪರಿತಪ್ಪಿಸುತ್ತಿದ್ದಾರೆ.
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳೊಳ್ಳಿ ಗ್ರಾಮದಲ್ಲಿ ಸಮರ್ಪಕ ರಸ್ತೆ, ಚರಂಡಿ ಇಲ್ಲದೆ ಜನ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರಕಾರ ಹಳ್ಳಿಗಳ ಉದ್ಧಾರಕ್ಕಾಗಿ ಕೋಟ್ಯಾಂತರ ಹಣ ಖರ್ಚು ಮಾಡುತ್ತದೆ. ಆದರೆ ಆ ಹಣ ಈ ಗ್ರಾಮಕ್ಕೆ ತಲುಪಿತ್ತಿಲ್ಲ. ಇದಕ್ಕೆ ಉದಾಹರಣೆ ಮುಳ್ಳೊಳ್ಳಿ ಗ್ರಾಮ.
2009 -10ರ ಸಾಲಿನಲ್ಲಿ ಪುನರ್ವಸತಿ ಗ್ರಾಮವಾಗಿ ಮಾರ್ಪಾಡು ಹೊಂದಿ 15 ವರ್ಷ ಕಳೆದರೂ ಸಹ ಇಂದಿಗೂ ಬೆರಳೆಣಿಕೆಯಷ್ಟು ರಸ್ತೆ ಮಾತ್ರ ಇದೆ. ಮಳೆ ಬಂದ ಸಂದರ್ಭದಲ್ಲಿ ಅಂತು ಗ್ರಾಮಸ್ಥರು ತಮ್ಮ ವಾಹನಗಳನ್ನು ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿ ತೆರಳುತ್ತಾರೆ. ಇಂದಿಗೂ ಈ ಕುಗ್ರಾಮದಲ್ಲಿ ಅಭಿವೃದ್ಧಿ ಭಾಗ್ಯ ಒಲಿದು ಬಂದಿಲ್ಲ. ಎರಡ್ಮೂರು ಕಾಲೋನಿಯಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಇದೀಗ ಆ ರಸ್ತೆಗಳು ಬಿರುಕು ಬಿಟ್ಟು ಅವ್ಯವಸ್ಥೆ ಹಾದಿ ಹಿಡಿದಿದೆ. ಜನಪ್ರತಿನಿಧಿಗಳೇ ಈ ಭಾಗಕ್ಕೆ ಬೇಟೆ ನೀಡಿ ಅಭಿವೃದ್ಧಿಗೆ ಮುಂದಾಗಿ. ಎನ್ನುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.
ಕುಡಿಯಲು ಶುದ್ದ ನೀರಿಲ್ಲ: ಲಕ್ಷಾಂತರ ವೆಚ್ಚ ಭರಸಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಇಂದಿಗೂ ಶುದ್ದ ನೀರು ಗ್ರಾಮಸ್ಥರಿಗೆ ಒದಗಿಸಿಲ್ಲ. ಮಲಪ್ರಭಾ ನೀರು ಮಾತ್ರ ಪೂರೈಸಿಲಾಗುತ್ತದೆ. ಶುದ್ದ ನೀರು ಒದಗಿಸಿ ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ರಸ್ತೆ ನಿರ್ಮಾಣ ಮಾಡಿ: ನವಗ್ರಾಮವಾಗಿ ಸುಮಾರು ಹದಿನೈದು ವರ್ಷಗಳೆ ಕಳಿದಿವೆ. ನಿತ್ಯ ನೂರಾರು ಕುಟುಂಬಗಳು ಜನಜೀವನ ನಡೆಸುತ್ತಾರೆ. ಮಳೆ ಬಂದ ಸಂದರ್ಭದಲ್ಲಿ ಅಂತು ಪರದಾಟಕ್ಕೀಡಾಗಿ ಹಪಹಪಿಸುತ್ತಾರೆ. ನಮ್ಮ ಕಷ್ಟ ದೇವರೇ ಬಲ್ಲ ಚುನಾವಣೆ ಮತ ಕೇಳಲು ದುಂಬಾಲು ಬಿಳ್ಳುತ್ತಾರೆ. ಆದರೆ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಸುನೀಲ ನಾಯ್ಕರ ತಿಳಿಸಿದರು.
ಒಟ್ಟಾರೆ ಗ್ರಾಮದಲ್ಲಿ ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರ, ಶುದ್ದ ನೀರಿನ ಘಟಕ, ಸಮಸ್ಯೆಗಳು ಇದ್ದರು ತಾಲೂಕ ಆಡಳಿತ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಈಗಲಾದರೋ ಎಚ್ಚೆತ್ತು ಅಭಿವೃದ್ಧಿಗೆ ಮುಂದಾಗಬೇಕಾಗಿದೆ. ವರದಿ: ಶಾನು ಯಲಿಗಾರ