ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಕಸಯಾ ಪ್ರದೇಶದಲ್ಲಿ ನಡೆದ ಈಚಿನ ಅಘಾತಕಾರಿ ಘಟನೆ ಮಾನವೀಯತೆಯ ಮೌಲ್ಯಗಳನ್ನು ಪ್ರಶ್ನೆ ಎತ್ತುವಂತಿದೆ. ಮಲ್ಲುಡೀ ಗ್ರಾಮದ ಕೃಷಕ್ ಇಂಟರ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕನೊಬ್ಬ ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಎದುರಾಗಿದೆ.

ಈ ಘಟನೆ ಸಂಬಂಧಿಸಿದ ದ್ರುಶ್ಯಗಳು ವೈರಲ್ ಆಗಿದ್ದರಿಂದ, ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಯಿತು. ವಿದ್ಯಾಭ್ಯಾಸ ಕೊಡಬೇಕಾದವರು ಈ ರೀತಿ ಅಸಭ್ಯ ಕೃತ್ಯದಲ್ಲಿ ತೊಡಗಿರುವುದು ಜನರಲ್ಲಿ ಆಘಾತ ಉಂಟುಮಾಡಿದೆ. ಆರೋಪಿಯನ್ನು ಮೈನುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಗ್ರಾಮಸ್ಥರ ಪ್ರಕಾರ, ಹಿಂದೂ ಸಮುದಾಯದ ಬಾಲಕಿಯರನ್ನು ತನ್ನ ಕಚೇರಿಗೆ ಕರೆಸಿ ಹೀಗುವೆಲ್ಲಾ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.

ವೀಡಿಯೊ ವೈರಲ್ ಆದ ಬೆನ್ನಲ್ಲೇ ಸ್ಥಳೀಯರು ಕಾಲೇಜು ಆವರಣದಲ್ಲಿ ಜಮಾಯಿಸಿ ಶಿಕ್ಷಕ ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ಕುಶಿನಗರ ಜಿಲ್ಲೆಯ ಕಸಯಾ ಪೊಲೀಸ್ ವೃತ್ತಾಧಿಕಾರಿ ಕುಂದನ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡುತ್ತಾ, “ ಬಾಲಕಿಯೊಂದಿಗಿನ ಅಶ್ಲೀಲ ದೃಶ್ಯವೊಂದು ವೈರಲ್ ಆದ ಬಳಿಕ, ತಕ್ಷಣವೇ ತನಿಖೆ ನಡೆಸಲಾಯಿತು. ಈ ವೀಡಿಯೊ ಕೃಷಕ್ ಇಂಟರ್ ಕಾಲೇಜಿನದ್ದೇ ಎಂದು ದೃಢಪಟ್ಟಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

ಇಂತಹ ಘಟನೆಗಳು ಶಿಕ್ಷಣ ಸಂಸ್ಥೆಗಳ ಪವಿತ್ರತೆಯನ್ನೇ ಮಸಲುವಂತಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Related News

error: Content is protected !!