ಬಂಗಾರಪೇಟೆ: ದಿನಾಂಕ 05.04.2025 ರಂದು ಮಧ್ಯ ರಾತ್ರಿ 12.30 ಗಂಟೆ ಸಮಯದಲ್ಲಿ ಹುದುಕುಳ ಗೇಟ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಮಾಹಿತಿಯ ಮೇರೆಗೆ ಇ. ಆರ್. ಎಸ್. ಸಿಬ್ಬಂದಿ 3 ಜನರನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿ ಠಾಣಾ ಪಿ.ಐ ಶದಯಾನಂದ್.ಆರ್ ರವರು ಕೂಲಂಕೂಷ ವಿಚಾರಣೆ ನಡೆಸಿ ಈ ವ್ಯಕ್ತಿಗಳು ಗಾಂಜಾ ಮಾರಾಟಕ್ಕೆ ಬಂದಿರುವುದಾಗಿ ಹುದುಕುಳ ಸಮೀಪ ಆಟೋ ರಿಕ್ಷಾದಲ್ಲಿ ಗಾಂಜಾ ಇಟ್ಟಿರುವುದನ್ನು ತಿಳಿಸಿದಾಗ ಈ ವಿಷಯವನ್ನು ಮೇಲಾಧಿಕಾರಿಗಳಾದ ಎಸ್.ಪಿ. ಶಾಂತರಾಜು ಕೆ.ಎಂ ಐ.ಪಿ.ಎಸ್ ಮತ್ತು ಡಿವೈ.ಎಸ್.ಪಿ. ಪಾಂಡುರಂಗ ಕೆ.ಎಸ್.ಪಿ.ಎಸ್ ಕೆಜಿಎಫ್ ರವರ ಗಮನಕ್ಕೆ ತಂದಾಗ ಮೇಲಾಧಿಕಾರಗಳ ಆದೇಶದ ಮೇರೆಗೆ ಪತ್ರಾಂಕಿತ ಅಧಿಕಾರಿ ಯುವರಾಜ್ ಮತ್ತು ಸರ್ಕಾರಿ ಸಾಕ್ಷಿದಾರರೊಂದಿಗೆ ದಾಳಿ ನಡೆಸಿದಾಗ ಆಟೋ ಸಂಖ್ಯೆ ಕೆಎ.03.ಎಎಂ.6052 ರಲ್ಲಿ 2 ಕೆಜಿ 735 ಗ್ರಾಂ ಗಾಂಜಾ ಮಾರಾಟಕ್ಕಾಗಿ ಇಟ್ಟುಕೊಂಡಿರುವುದು ಧೃಡಪಟ್ಟಿದ್ದು ಪಿ.ಐ ದಯಾನಂದ್.ಆರ್ ರವರು ಅಮಾನತ್ತು ಪಡಿಸಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿತರು ಬೆಂಗಳೂರು ವಾಸಿಗಳೆಂದು ಮತ್ತೊಬ್ಬ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ಆತನ ಪತ್ತೆ ಕಾರ್ಯವನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಬಂಗಾರಪೇಟೆ ಪಿ.ಐ ದಯಾನಂದ್.ಆರ್, ರಾಜಣ್ಣ ಪಿ.ಎಸ್.ಐ, ಪ್ರಕಾಶ್ ನರಸಿಂಗ್ ಪಿ.ಎಸ್.ಐ, ರಮೇಶ್ ಎ.ಎಸ್.ಐ ಮತ್ತು ಸಿಬ್ಬಂದಿ ಯವರಾದ ನಾಗೇಶ್, ಚಲಪತಿ, ವೆಂಕಟೇಶ್, ಮಧುಕುಮಾರ್ ಮುನೇಂದ್ರ, ಶಿವರಾಜು ರವರ ಕಾರ್ಯವನ್ನು ಮೆಚ್ಚಿ ಶಾಂತರಾಜು ಕೆ.ಎಂ ಪೊಲೀಸ್ ಅಧೀಕ್ಷಕರು ಕೆ.ಜಿ.ಎಪ್ ರವರು ಪ್ರಶಂಸಿಸಿದ್ದಾರೆ. ವರದಿ: ರೋಶನ್ ಜಮೀರ್

Related News

error: Content is protected !!