
ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಚಬನೂರ್ ಗ್ರಾಮದ ಸರಕಾರಿ ಶಾಲೆಯಲ್ಲಿ ಶನಿವಾರ ರಾತ್ರಿ ಯಾರೋ ಕಿಡಗೆಡಿಗಳು ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹಜರತ್ ಟಿಪ್ಪು ಸುಲ್ತಾನರ ಭಾವಚಿತ್ರಗಳಿಗೆ ವಿರೂಪ ಗೊಳಿಸುವದರ ಮುಖಾಂತರ ಅವಮಾನ ವೆಸಗಿದ ಘಟನೆ ಬೆಳಕಿಗೆ ಬಂದಿದೆ .
ಅಲ್ಲದೆ ಟಿಪ್ಪುಸುಲ್ತಾನ ರ ಭಾವಚಿತ್ರದ ಕೆಳಗಡೆ ಇದ್ದ ಅವರ ಹೆಸರಿಗೂ ಸಹಿತ ಕೊಳಚೆ ಮಣ್ಣಿನಿಂದ ಬಳಿದು ಅದರ ಕೆಳಗೆ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ಇಂತಹ ಕೃತ್ಯ ಎಸಗಿ ಶ್ರೀ ರಾಮನಿಗೆ ಕಳಂಕ ತರುವದು ಎಷ್ಟು ಸರಿ?
ಭಾರತ ದೇಶ ಕಂಡ ಮಹಾನ್ ವ್ಯಕ್ತಿ ಗಳಾದ ಸಂವಿದಾನ ಶಿಲ್ಪಿ ಡಾ: ಬಾಬಾಸಾಹೇಬ್ ಅಂಬೇಡ್ಕರ ಹಾಗೂ ದೇಶಕ್ಕಾಗಿ ತನ್ನ ಇಬ್ಬರ ಮಕ್ಕಳ ಒತ್ತೆಯಾಳನ್ನಾಗಿ ಇಟ್ಟು ಹೋರಾಡಿದ ಟಿಪ್ಪು ಸುಲ್ತಾನ ರ ಭಾವಚಿತ್ರಗಳಿಗೆ ಅಪಮಾನ ಮಾಡಿದ್ದು ಇದು ಯಾರೋ ಅವಿವೇಕಿನೇ ಇರಬಹುದು ಎಂದನಿಸುತ್ತದೆ ಯಾಕೆಂದರೆ ನಿಜವಾದ ಪ್ರಜ್ಞಾವಂತರು ಈ ಕೃತ್ಯ ಮಾಡಲಾರರು
ಜಿಲ್ಲಾಡಳಿತ , ಸಂಬಂಧ ಪಟ್ಟ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅತೀ ಶೀಘ್ರದಲ್ಲಿ ಬಂದಿಸಿಬೇಕೆಂದು ಗ್ರಾಮಸ್ಥರು ದಲಿತ ಪರ ಸಂಘಟನೆಗಳು ಆಗ್ರಹಿಸಿದ್ದಾರೆ