
ಚಿಕ್ಕಮಗಳೂರು ಜಿಲ್ಲೆಯ ಕಾಫಿನಾಡು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಇಂದು ಅಂತಿಮ ತೆರೆಬಿದ್ದಿದೆ. ಶೃಂಗೇರಿಯ ಕೋಟೆಹೊಂಡ ಗ್ರಾಮದ ನಿವಾಸಿ ರವೀಂದ್ರ, ಕೆಂಪು ಉಗ್ರರ ಕೊನೆಯ ಪ್ರತಿನಿಧಿಯಾಗಿ, ಸ್ವಯಂ ಪ್ರೇರಿತವಾಗಿ ಪೊಲೀಸರು ಮುಂದೆ ಶರಣಾಗಿದ್ದಾರೆ.
ರವೀಂದ್ರ ಅವರು ನಾಗರಿಕ ಶಾಂತಿ ವೇದಿಕೆ ಸದಸ್ಯರ ಜತೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಎದುರು ಶರಣಾಗಿದ್ದು, ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಸಮಾಧಾನಕರ ಜೀವನಕ್ಕೆ ಮರಳಲು ನಿರ್ಧಾರ ಮಾಡಿರುವುದು ಮಹತ್ವದ್ದಾಗಿದೆ.
ಜನವರಿ 8 ರಂದು, ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ 6 ಜನ ನಕ್ಸಲರು ಶರಣಾಗಿದ್ದರು. ಇದರಿಂದಾಗಿ, ಜಿಲ್ಲೆಯಲ್ಲಿ ನಕ್ಸಲ್ ಪ್ರಭಾವ ಕಡಿಮೆಯಾಗಿದ್ದು, ಕಾಡಿನೊಳಗಿನ ಮುಟ್ಟಿಯಾಗಿದ್ದ ಕೊನೆಯ ನಕ್ಸಲ್ ರವೀಂದ್ರನ ಶರಣಾಗತಿಯೊಂದಿಗೆ ಈ ಚಳುವಳಿ ಸಂಪೂರ್ಣ ಕೊನೆಗೊಂಡಂತಾಗಿದೆ.
ಈ ಬೆಳವಣಿಗೆಯಿಂದ, ಚಿಕ್ಕಮಗಳೂರಿನ ಜನತೆ ನಿರಾಳತೆ ಅನುಭವಿಸುವ ನಿರೀಕ್ಷೆ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಸಹ ಶಾಂತಿ ಸ್ಥಾಪನೆಗಾಗಿ ಮತ್ತಷ್ಟು ಕ್ರಮ ಕೈಗೊಳ್ಳಲಿದೆ.