ಯಲ್ಲಾಪುರ ತಾಲೂಕು ವ್ಯಾಪ್ತಿಯ ಇಡಗುಂದಿ ಗ್ರಾ.ಪಂ ನ ದೋಣಗಾರ ಗ್ರಾಮದ ಶ್ರೀ ಸುಬ್ರಾಯ್ ನಾಗಪ್ಪ ತುಂಬಳ್ಳಿ ರವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಣ ಆಭರಣ ಬೆಲೆಬಾಳುವ ಬಟ್ಟೆ ಕಂಪ್ಯೂಟರ್ ಅಲಮಾರ್ ಇತರೆ ವಸ್ತುಗಳು ಹಾನಿಯಾಗಿದೆ. ವಿಷಯ ತಿಳಿದ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು ಮತ್ತು ಗ್ರಾ.ಪಂ ಸದಸ್ಯರಾದ ವಿ ಎನ್ ಭಟ್ಟ ಗ್ರಾ.ಪಂ ನ ಪಂಚಾಯತ ಅಭಿವೃದ್ಧಿ ಅಧಿಕಾರಿ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಸ್ತಳಕ್ಕೆ ಬೇಟಿ ನೀಡಿದರು. ಈ ಸಮಯದಲ್ಲಿ ಗ್ರಾಮಸ್ಥರು ಉಪಸ್ಥಿತಿತರಿದ್ದರು.

Related News

error: Content is protected !!