ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಖಳಿ ಗ್ರಾಮ ಪಂಚಾಯತಿ ಯಲ್ಲಿ 30% ಪರ್ಸಂಟೇಜ್ ದಂಧೆ ನಡಿಯುತ್ತಿದು ಅಭಿವೃದ್ಧಿ ಅಧಿಕಾರಿ 10%, ಇಂಜಿನಿಯರ್ 10%, ತಾಲೂಕು ಪಂಚಾಯತ್ ಅಧಿಕಾರಿಗಳು 7%, ಟೆಕ್ನಿಕಲ್ 3% ಹೀಗೆ ಪಿಡಿಒ ಮಂಜುನಾಥ್ ದಳವಾಯಿ ನಿಂದ ಒಟ್ಟು 30% ಲಂಚದ ಬೇಡಿಕೆ ಇಡಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ವಿಡಿಯೋ ಹಂಚಿಕೊಂಡು ತೀವ್ರವಾಗಿ ಖಂಡಿಸಿ ತಮ್ಮ ಸದಸ್ಯೆತ್ವಕ್ಕೆ ಸುಧಾ ಸಿದ್ದಪ್ಪ ರವರು ರಾಜೀನಾಮೆ ಸಲ್ಲಿಸಿದ್ದಾರೆ.

ಕಚೇರಿಯಲ್ಲಿ ಈ ರೀತಿಯಾದಂತಹ ಪರ್ಸೆಂಟೇಜ್ ದಂಧೆ ನಡೆಯುತ್ತಿದ್ದು 14ನೇ ಹಣಕಾಸು, 15ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಅನುದಾನಗಳನ್ನು ಪಡೆಯಬೇಕಾದಲ್ಲಿ ಪರ್ಸೆಂಟ್ ಕೊಡಬೇಕೆಂದು ಕೇಳುತ್ತಿದ್ದಾರೆ ಈ ರೀತಿ ಕೊಡಲು ನನಗೆ ಸಾಧ್ಯವಿಲ್ಲ. ಒಟ್ಟಾರೆಯಾಗಿ 30% ಕಮಿಷನ್ ಕೇಳುತ್ತಿದ್ದು ಅದನ್ನು ನನ್ನಿಂದ ಕೊಡಲು ಸಾಧ್ಯವಿಲ್ಲ ಅದೇ ಕಾರಣಕ್ಕಾಗಿ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಹಾಗೂ ಪೂರಕವಾದ ದಾಖಲೆಗಳು ಬೇಕಿದ್ದಲ್ಲಿ ನನ್ನ ಹತ್ತಿರ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ಗಳು ಲಭ್ಯವಿದ್ದು ಒದಗಿಸಲು ಸಿದ್ಧನಿದ್ದೇನೆ ಎಂದು ರಾಜಿನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Related News

error: Content is protected !!