ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ದನಗಳ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬಂದಿಸಿದ್ದಾರೆ.
ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಯವರ ಮಾರ್ಗದರ್ಶನದಲ್ಲಿ ಸಿಪಿಐ ದುರುಗಪ್ಪ, ಪಿಎಸ್ಐ ಗೀತಾಂಜಲಿ ಶಿಂಧೆ, ಯವರ ನೇತೃತ್ವದ ಸಿಬ್ಬಂದಿ ವರ್ಗದವರಾದ ಹೆಚ್. ಬಸವರಾಜ್, ಶಶಿದರ್, ನಾಗಪ್ಪ, ತಂಡ ರಚಿಸಿ ಸುಂಕದಕಲ್ಲು ಗ್ರಾಮದ ಇಬ್ಬರು ಆರೋಪಿಗಳು ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನ ಸುಮಾರು 1ಲಕ್ಷದ 20 ಸಾವಿರ ಬೆಲೆ ಬಾಳುವ ಎರಡು ಆಕಳುಗಳ ಜೊತೆಗೆ 20 ಸಾವಿರ ರೂಪಾಯಿ ಹಣವನ್ನು ಜಪ್ತಿ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಈ ಪತ್ತೆ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಎಸ್. ಜಾನ್ಹವಿ ಯವರು ಪ್ರಸಂಶೆ ವ್ಯಕ್ತಪಡಿಸಿದರು.
ವರದಿ :ಮಣಿಕಂಠ ಬಿ
