
ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿರುವ ಭೀಕರ ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪಟ್ಟಣದ ಸಂತೆಯ ದಿನದ ಮಧ್ಯಾಹ್ನ, ಜನಸಂದಣಿ ನಡುವೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ಸಾಮಾನ್ಯವಾಗಿ ಜನಸಂಚಾರದಿಂದ ಕಿಕ್ಕಿರಿದ ಸಂತೆಯ ವಾತಾವರಣ, ಈ ದಾಳಿಯಿಂದ ಕೆಲ ಕ್ಷಣಗಳಲ್ಲಿ ಭೀತಿಗೊಳಪಟ್ಟಿತು. ದಾಳಿಗೆ ಗುರಿಯಾದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತನನ್ನು ಹುಸೇನ ಕಿಲ್ಲೇದಾರ (25) ಎಂದು ಗುರುತಿಸಲಾಗಿದೆ. ಅವರು ಹುಕ್ಕೇರಿಯ ಅವರಗೋಳ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಹತ್ಯೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ನಡೆದ ತಕ್ಷಣ ಹುಕ್ಕೇರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಸಂತೆಯ ದಿನದ ನಡುಬೀದಿಯಲ್ಲಿ ನಡೆದಿರುವ ಈ ಕೊಲೆ ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಉಂಟುಮಾಡಿದೆ. ವರದಿ: ಶಿವು ಕುಂಬಾರ
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392