ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ನಗರದ ಮೆಟ್ರೋ ಮೂರನೇ ಹಂತ ಹಾಗೂ ವಂದೇ ಭಾರತ್ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟನೆ ನೆರವೇರಿಸಿದರು. ಈ ವೇಳೆ, ಭದ್ರತಾ ವಲಯದಲ್ಲಿ ಒಂದು ಅಸಹಜ ಘಟನೆ ನಡೆದು ಕೆಲ ಕ್ಷಣ ಗೊಂದಲ ಉಂಟಾಯಿತು.

ಸೌತ್ ಎಂಡ್ ಸರ್ಕಲ್ ಬಳಿ ಪ್ರಧಾನಿಯ ವಾಹನದ ಪಥಸಂಚಲನ ಸಾಗುತ್ತಿರುವ ಸಮಯದಲ್ಲಿ, ಯುವಕನೊಬ್ಬ ಅಕಸ್ಮಾತ್ ಬ್ಯಾರಿಕೇಡ್ ಹಾರಿ ರಸ್ತೆಯತ್ತ ಓಡುವ ಪ್ರಯತ್ನ ಮಾಡಿದ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಎಚ್ಚರಗೊಂಡು ಅವನನ್ನು ತಡೆದರು.

ಘಟನೆ ಸಂಭವಿಸುವ ವೇಳೆಗೆ ಪ್ರಧಾನಿಯ ವಾಹನ ಅಲ್ಲಿತೆರಳಿತ್ತು. ಆದರೆ, ಪ್ರಧಾನಿಯ ಆಗಮನದ ಸಮಯಕ್ಕೆ ಸಮೀಪವೇ ನಡೆದ ಈ ಘಟನೆ ಸ್ಥಳದಲ್ಲಿ ಕ್ಷಣಿಕ ಆತಂಕವನ್ನು ಉಂಟುಮಾಡಿತು. ಪೊಲೀಸರು ಯುವಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದು, ಅವನು ಬ್ಯಾರಿಕೇಡ್ ಹಾರಿ ಹೋಗಲು ಯತ್ನಿಸಿದ ಕಾರಣವನ್ನು ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!