ಕುಂದಗೋಳ; ಪಟ್ಟಣದ ಜೆ. ಎಮ್. ಎಫ್. ಸಿ ನ್ಯಾಯಾಲಯ ಪೀಠದಲ್ಲಿ ಮಾರ್ಚ್ 16 ರಂದು ಜರುಗಿದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಒಟ್ಟು 92 ರಾಜಿ ಸಂಧಾನ ಪ್ರಕರಣಗಳನ್ನು ಎರಡು ನ್ಯಾಯಾಲಯದಲ್ಲಿ ಒಟ್ಟು ರೂ 3,888,248 ಮೊತ್ತಕ್ಕೆ ಇತ್ಯರ್ಥಪಡಿಸಿಲಾಯಿತು.
ಕುಂದಗೋಳ ಪಟ್ಟಣದ ಜೆ. ಎಮ್. ಎಫ್. ಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಚಕ್ ಬೌನ್ಸ್ 4, ವೈವಾಹಿಕ 4, ಆಸ್ತಿ 13, ಒಟ್ಟು ಪ್ರಕರಣಗಳು 21 ರಾಜಿಯಾಗಿದ್ದು, ರಾಜಿ ಮೊತ್ತ 17,55,437 ಪರಿಹಾರ ಹಣವನ್ನು ವಸೂಲಿ ಮಾಡಲಾಗಿದೆ. ಅದರಂತೆ ದಿವಾಣಿ ನ್ಯಾಯಾಲಯದಲ್ಲಿ ಆಸ್ತಿ ಪ್ರಕರಣ 31, ಅಂತಿಮ ಡಿಕ್ರಿ 1, ಅಮಲ್ಮಾರಿ 1, ಚಕ್ ಬೌನ್ಸ್ 14, ಕಂಪೋಡೆಂಟ್ 4, ಲಘು ಪ್ರಕರಣ 12, ಕ್ರಿಮಿನಲ್ ಮಿಸಲಾನಿಸ್ 8 ಒಟ್ಟು 71 ಪ್ರಕರಣಗಳು ರಾಜಿಯಾಗಿದ್ದು, ರಾಜಿ ಸಂದಾನದಲ್ಲಿ ಮೊತ್ತ 21,32,811 ಪರಿಹಾರ ಒದಗಿಸಲಾಗಿದೆ.
ಇನ್ನೂ ದಾಂಪತ್ಯದಲ್ಲಿ ಜೀವನ ನಡೆಸಬೇಕಾದ ಕುಟುಂಬದಲ್ಲಿನ ಮನಸ್ತಾಪದಿಂದ ದೂರವಾಗಿ ವಿವಾಹ ವಿಚ್ಛೇದನ ಬಯಸಿ ತಾಲೂಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಜೋಡಿಗಳು ಮೇಘಾ ಲೋಕ ಆದಾಲತ್ ನ ರಾಜಿ ಸಂಧಾನ ಮೂಲಕ ಒಂದಾದರು. ನ್ಯಾಯಾಲಯದ ಆವರಣದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡರು ಮರಳಿ ನಿಮ್ಮ ದಾಂಪತ್ಯ ಜೀವನ ಸುಖಕರವಾಗಲಿ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯದೀಶರು ಪಿ. ಜೆ ಪರಮೇಶ್ವರ ಶುಭ ಹಾರೈಸಿದರು. ಈ ಲೋಕ ಆದಾಲತ್ ನಲ್ಲಿ ಹಿರಿಯ ದಿವಾಣಿ ನ್ಯಾಯಾಲಯ, ದಿವಾಣಿ ನ್ಯಾಯಾಲಯದಲ್ಲಿ ಒಟ್ಟು 92 ಪ್ರಕರಣಗಳು ಇತ್ಯರ್ಥಗೊಂಡಿವೆ. ನ್ಯಾಯಾಧೀಶರಾದ ಪಿ. ಜೆ. ಪರಮೇಶ್ವರ, ಶ್ರೀಮತಿ ಗಾಯತ್ರೀ ಮೇಡಂ ರಾಷ್ಟ್ರೀಯ ಲೋಕ ಆದಾಲತ್ ಯಶಸ್ವಿಗೊಳಿಸಿದರು.
ವರದಿ: ಶಾನು ಯಲಿಗಾರ
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…