Crime

ಚಿಕನ್ ಪೀಸ್ ಜಗಳಕ್ಕೆ ಯುವಕನ ಹತ್ಯೆ: ಯರಗಟ್ಟಿ ಬಳಿ ಭೀಕರ ಘಟನೆ

ಬೆಳಗಾವಿ, ಜುಲೈ 14: ಬಡವಳೊಬ್ಬನ ಸಂಸಾರವೂ ಕತ್ತಲಾಯಿತು, ಸ್ನೇಹಿತನ ಎಣ್ಣೆ ಪಾರ್ಟಿಯ ಜಗಳ ಜೀವ ಕಿತ್ತುಕೊಂಡ ಘಟನೆ ಯರಗಟ್ಟಿಯ ಸೊಪಡ್ಲ ಗ್ರಾಮದಲ್ಲಿ ರವಿವಾರ (ಜು.13) ರಾತ್ರಿ ನಡೆದಿದೆ. ಚಿಕ್ಕ ವಿಷಯದಲ್ಲಿ ಹುಟ್ಟಿದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಗ್ರಾಮದವರೆಗೂ ಹೃದಯವಿದ್ರಾವಕವಾಗಿದಂತಾಗಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ವಿನೋದ್ ಮಲಶಟ್ಟಿ (30) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನೆರವೇರಿಸುತ್ತಿದ್ದ ಅವನು, ಆತನ ಸ್ನೇಹಿತ ಅಭಿಷೇಕ ಕೊಪ್ಪದ ರವಿವಾರ ತನ್ನ ವಿವಾಹದ ಸಂಭ್ರಮದಲ್ಲಿ ಆತ್ಮೀಯ ಸ್ನೇಹಿತರಿಗಾಗಿ ಎಣ್ಣೆ ಪಾರ್ಟಿಯನ್ನು ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ.

ಪಾರ್ಟಿಯಲ್ಲಿ ವಿನೋದ್ ಮತ್ತು ವಿಠ್ಠಲ್ ಹಾರಗೊಪ್ಪ ನಡುವೆ ಚಿಕನ್ ಪೀಸ್ಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ಶುರುವಾಯಿತು. ಈ ಚಿಕ್ಕ ಜಗಳ ಕ್ಷಣಾರ್ಧದಲ್ಲಿ ತೀವ್ರ ರೂಪ ಪಡೆದು, ಕ್ರೋಧಕ್ಕೆ ಒಳಗಾದ ವಿಠ್ಠಲ್ ಅಡುಗೆಗೆ ಬಳಸುತ್ತಿದ್ದ ಚಾಕುವಿನಿಂದ ವಿನೋದ್ ಎದೆಗೆ ಇರಿದು ತೀವ್ರವಾಗಿ ಗಾಯಗೊಳಿಸಿದನು. ಗಾಯದಿಂದ ಸ್ಥಳದಲ್ಲಿಯೇ ವಿನೋದ್ ಮೃತಪಟ್ಟನು.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಎಸ್ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಚುರುಕುಗೊಳಿಸಿದರು. ವಿಠ್ಠಲ್ ಹಾರಗೊಪ್ಪನನ್ನು ಬಂಧಿಸಿ, ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಮುಗಿದ ಮೇಲೆ ಹಲವಾರು ಪ್ರಶ್ನೆಗಳು ಮೂಡಿವೆ. ಪಾರ್ಟಿಯಲ್ಲಿ 30ಕ್ಕೂ ಹೆಚ್ಚು ಮಂದಿ ಇದ್ದಾಗ ಹತ್ಯೆಯನ್ನು ತಡೆಯಲಾಗಲಿಲ್ಲವೇ? ಜಗಳಕ್ಕೆ ನಿಜವಾಗಿಯೂ ಚಿಕನ್ ಪೀಸ್ ಕಾರಣವೇ? ಅಥವಾ ಇನ್ನುಳಿದ ದ್ವೇಷಗಳ ಸ್ಪೋಟವಿತೇ? ಎಂಬುದರ ಬಗ್ಗೆ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸ್ನೇಹ ಮತ್ತು ಸಂಭ್ರಮದ ನಡುವೆ ಈ ಬುದ್ಧಿವಿಲ್ಲದ ಕ್ರೂರತೆ ಈಗ ಸ್ಥಳೀಯರಲ್ಲಿ ಭಯ ಮತ್ತು ಬೇಸರ ಮೂಡಿಸಿದೆ.

nazeer ahamad

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago