Categories: CrimeLatest

ಮದುವೆಯ ಭರವಸೆ ನೀಡಿ ಯುವತಿಯನ್ನು ಲೈಂಗಿಕ ಕ್ರಿಯೆಗೆ ಬಳಕೆ; ಬೆಂಗಳೂರಿನಲ್ಲಿ ಯುವಕ ಬಂಧನ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು, ಬಳಿಕ ಗರ್ಭಪಾತಕ್ಕೂ ಒತ್ತಾಯಿಸಿದ ಆರೋಪದ ಮೇಲೆ ಯುವಕನನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಚೇತನ್ ಎಂದು ಗುರುತಿಸಲಾಗಿದ್ದು, ಆತ ಬೆಂಗಳೂರಿನ ಹಲವು ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಿಗೆ ಯುವತಿಯನ್ನು ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯ ದೂರಿನ ಪ್ರಕಾರ, 2023ರಿಂದ ಇಬ್ಬರ ನಡುವೆ ಪರಿಚಯ ಬೆಳೆದಿದ್ದು, ಮದುವೆಯಾಗುವ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. 2025ರ ಜೂನ್‌ನಲ್ಲಿ ತಾನು ಗರ್ಭಿಣಿಯಾಗಿದ್ದಾಗ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದ ಹಿನ್ನೆಲೆದಲ್ಲಿ, ಮದುವೆಯ ಭರವಸೆ ನೀಡಿ ವಂಚನೆ ಮಾಡುವಂತಹ ಪ್ರಕರಣಗಳ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ. ಮಕ್ಕಳಿಗೆ ಸಂಬಂಧಗಳ ಜವಾಬ್ದಾರಿ, ಕಾನೂನು ಹಾಗೂ ಮೌಲ್ಯಗಳ ಕುರಿತು ಪೋಷಕರು ಸರಿಯಾದ ಮಾರ್ಗದರ್ಶನ ನೀಡಬೇಕಾದ ಅಗತ್ಯವೂ ಇದೆ ಎಂದು ಸಾಮಾಜಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಭ್ರಷ್ಟರ ಬೇಟೆ

Recent Posts

ಉಗಾಂಡಾದಲ್ಲಿ ವಿಜಯನಗರ ಮೂಲದ ಯುವತಿ ಆತ್ಮಹತ್ಯೆ; ಕುಟುಂಬದವರಲ್ಲಿ ಆಘಾತ

ವಿಜಯನಗರ: ಉತ್ತಮ ಜೀವನದ ಕನಸೊಂದಿಗೆ ವಿದೇಶಕ್ಕೆ ತೆರಳಿದ್ದ ವಿಜಯನಗರ ಜಿಲ್ಲೆಯ ಯುವತಿಯೊಬ್ಬರು ಉಗಾಂಡಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಟುಂಬದವರಲ್ಲಿ ಹಾಗೂ…

9 hours ago

ಜಮೀನು ಪೋಡಿ-ದುರಸ್ತಿಗೆ ಲಂಚ ಬೇಡಿಕೆ; ನಂಜನಗೂಡಿನ ಸರ್ವೆಯರ್ ಲೋಕಾಯುಕ್ತ ಬಲೆಗೆ

ನಂಜನಗೂಡು: ಜಮೀನು ಪೋಡಿ ಹಾಗೂ ದುರಸ್ತಿಗಾಗಿ ಲಂಚ ಪಡೆಯುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಂಜನಗೂಡಿನಲ್ಲಿ…

9 hours ago

ಮದುವೆಯಾಗಿಲ್ಲವೆಂದು ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಖಾಸಗಿ ಕಾಲೇಜು ಉಪನ್ಯಾಸಕ ಬಂಧನ

ಬಳ್ಳಾರಿ: ನಗರದ ಹೊರವಲಯದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ಉಪನ್ಯಾಸಕನೊಬ್ಬ ತಾನು ಮದುವೆಯಾಗಿಲ್ಲ ಎಂದು ನಂಬಿಸಿ ವಿದ್ಯಾರ್ಥಿನಿಯೊಂದಿಗೆ ಆತ್ಮೀಯತೆ ಬೆಳೆಸಿ, ಬಳಿಕ…

14 hours ago

‘ಕೋಟಿ ರೂ. ಆಮಿಷಕ್ಕೂ ಜಗ್ಗಲ್ಲ, ಪ್ರಾಣ ಹೋದರೂ ಹೋರಾಟ ನಿಲ್ಲಲ್ಲ’: ಶರಾವತಿ ಯೋಜನೆ ವಿರುದ್ಧ ಮಾರುತಿ ಗುರೂಜಿ ಗರಂ

ಹೊನ್ನಾವರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯುವಂತೆ ತಮ್ಮ ಮೇಲೆ ಬೆದರಿಕೆಗಳು, ಒತ್ತಡಗಳು ಹಾಗೂ…

1 day ago

ಚಲಿಸುತ್ತಿದ್ದ ಬಸ್ಸಿನ ಕಿಟಕಿಯಿಂದ ತಲೆ ಹೊರಹಾಕಿದ ವಿದ್ಯಾರ್ಥಿಗೆ ಟಿಪ್ಪರ್ ಡಿಕ್ಕಿ: ರಸ್ತೆಗೆ ಬಿತ್ತು ರುಂಡ

ಹುಬ್ಬಳ್ಳಿ/ಕುಂದಗೋಳ: ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಕಿಟಕಿಯಿಂದ ತಲೆ ಅಥವಾ ಕೈ ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದನ್ನು ಧಾರವಾಡ ಜಿಲ್ಲೆಯ ಕುಂದಗೋಳ…

1 day ago

ಇರಾಕ್ ಸಂಸದೆಯ ಮನೆಯಲ್ಲಿ 27 ಕೆಜಿ ಚಿನ್ನದ ಒಳಉಡುಪು, ₹927 ಕೋಟಿ ನಗದು ಜಪ್ತಿ ಎಂಬ ಸುದ್ದಿ ಫೇಕ್: ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಯ್ತು ಸತ್ಯ

ಬಾಗ್ದಾದ್: ಇರಾಕ್‌ನ ಮಹಿಳಾ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ಮನೆಯಲ್ಲಿ ₹927 ಕೋಟಿ ಮೌಲ್ಯದ ನಗದು, 27 ಕಿಲೋಗ್ರಾಂ ಚಿನ್ನ…

1 day ago