ದೆಹಲಿ, ಜುಲೈ 25: ರಾಜಧಾನಿ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿಗಳ ನಡುವೆ ಉಲ್ಬಣಗೊಂಡ ವಾದ-ವಿವಾದ ಈಗ ಖಾಸಗಿ ನಾಟಕವನ್ನು ಬಿಟ್ಟು ಅಧಿಕೃತ ದೂರು ಹಂತಕ್ಕೆ ತಲುಪಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿ ಆಂಜನೇಯ, ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಿ ಮೋಹನ್ ಕುಮಾರ್ ವಿರುದ್ಧ ಗಂಭೀರ ದೂರನ್ನು ದಾಖಲಿಸಿದ್ದಾರೆ.
ಆಂಜನೇಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಿವಾಸಿ ಆಯುಕ್ತರಿಗೆ ನೀಡಿದ ದೂರುದಲ್ಲಿ, ಸಿಎಂ ಅಧಿಕಾರಿಯ ವರ್ತನೆ ತನ್ನ ಕಾರ್ಯನಿರ್ವಹಣೆಗೆ ತೀವ್ರ ಅಡಚಣೆ ಉಂಟುಮಾಡಿದುದಾಗಿ ಆರೋಪಿಸಿದ್ದಾರೆ. “ಮೋಹನ್ ಕುಮಾರ್ ಅವರು ಅಧಿಕಾರದ ಹೆಮ್ಮೆಯೊಂದಿಗೆ ಮಾತನಾಡುತ್ತಾ, ನನ್ನನ್ನು ಬೂಟು ಕಳಚಿಕೊಂಡು ಹೊಡೆಯುತ್ತೇನೆ ಎಂದು ಸಾರ್ವಜನಿಕವಾಗಿ ಬೆದರಿಸಿದ್ದಾರೆ,” ಎಂದು ಆಂಜನೇಯ ದೂರಿನಲ್ಲಿ ತಿಳಿಸಿದ್ದಾರೆ.
ದೂರುದಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳು ಹೀಗಿವೆ:
ಸಿಎಂ ಅಧಿಕಾರಿ ಮೋಹನ್ ಕುಮಾರ್ ಅವರಿಂದ ನಿರಂತರ ಅವಮಾನ.
“ಬೂಟು ಕಳಚಿಕೊಂಡು ಹೊಡೆಯುತ್ತೇನೆ” ಎಂಬ ಬೆದರಿಕೆ ಅವರದೇ ಚೇಂಬರ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ.
ಪ್ರಮೀಳಾ ಎಂಬ ಮತ್ತೊಬ್ಬ ಸಿಬ್ಬಂದಿಯ ಸಮ್ಮುಖದಲ್ಲಿಯೂ ಅಪಮಾನಿತಸ್ಥಿತಿ.
ಸೇವಾ ದಾಖಲೆಯನ್ನು ಪರಿಶೀಲಿಸಿದರೆ, ಈ ಮೊದಲು ಕೂಡಾ ಹಿರಿಯ ಅಧಿಕಾರಿ ಎಂ.ಎಂ. ಜೋಷಿಗೆ ಹಲ್ಲೆ ಮಾಡಿದ ವರದಿ ಇದೆ.
ಹಿರಿಯತೆ ಹೊಂದಿದ್ದರೂ, ತಮ್ಮನ್ನು ಲೆಕ್ಕಾಧಿಕಾರಿ ಹುದ್ದೆಗೆ ವರ್ಗಾಯಿಸದಂತೆ ತಡೆಯಲಾಗುತ್ತಿದೆ ಎಂಬ ಆರೋಪ.
ನ್ಯಾಯಕ್ಕಾಗಿ ಅರ್ಜಿ:
“ನಾನು ಒಬ್ಬ ಗ್ರೂಪ್ ಬಿ ಅಧಿಕಾರಿಯಾಗಿದ್ದು, ಉಪ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಮೇಲೆ ಇಂತಹ ನಿಂದನೆ ಹಾಗೂ ಬೆದರಿಕೆಗಳು ನನ್ನ ಮಾನಸಿಕ ಸ್ಥಿತಿಗೆ ಭಾರೀ ಆಘಾತ ತಂದಿದೆ. ಮೋಹನ್ ಕುಮಾರ್ ವಿರುದ್ಧ ತಕ್ಷಣ ಇಲಾಖಾ ವಿಚಾರಣೆ ನಡೆಸಿ, ನ್ಯಾಯ ಒದಗಿಸಬೇಕು,” ಎಂಬುದು ಆಂಜನೇಯ ಅವರ ವಿನಂತಿಯ ಸಾರಾಂಶ.
ಈ ಘಟನೆ ಸಿಎಂ-ಡಿಸಿಎಂ ಲೈನಿನಲ್ಲಿರುವ ಅಧಿಕಾರಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಬಹಿರಂಗಪಡಿಸಿದ್ದು, ಸರಕಾರದೊಳಗಿನ ಆಡಳಿತ ಶಿಸ್ತು ಪ್ರಶ್ನೆಗೆ ಒಳಪಡಿಸಿದೆ. ಇಲಾಖಾ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರ ತರಲಾಗುತ್ತದೆಯೇ ಎನ್ನುವುದು ಮುಂದೆ ಗಮನಿಸಬೇಕಾದ ವಿಷಯ.
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್ಐಆರ್…