
ಬೆಂಗಳೂರು: ಕರ್ನಾಟಕ ಬಿಜೆಪಿ ಶಿಬಿರದಲ್ಲಿ ಆಂತರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದ್ದು, ನಾಯಕತ್ವದ ವಿರುದ್ ಸಮಾಧಾನ ದಿನದಿಂದ ದಿನಕ್ಕೆ ಗರಿಷ್ಠಕ್ಕೇರಿ ಬಿರುಕು ಹೆಚ್ಚಿಸುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡ ಬಳಿಕವೇ ಈ ಬಿರುಕುಗಳು ಪ್ರಕಟವಾಗಿ ಹೊರಬರುತ್ತಿದ್ದರೆ, ಇತ್ತೀಚಿನ ಬೆಳವಣಿಗೆಗಳು ಪಕ್ಷದ ಅಂತರಾಳದಲ್ಲಿ ಚರ್ಚೆಗೆ ಕಾರಣವಾಗಿವೆ.
ಪಕ್ಷದಿಂದ ಉಚ್ಚಾಟನೆಗೊಳಗಾದ ಬಿಜೇಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ಯತ್ನಾಳ್, “ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ನಿಂತಿದ್ದು ಬಿವೈ ವಿಜಯೇಂದ್ರ. ಇಂತಹ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ ಪಕ್ಷದ ನೇತೃತ್ವ ವಹಿಸುವುದೇ ಶೋಚನೀಯ” ಎಂದು ಕಿಡಿಕಾರಿದ್ದಾರೆ.
ಅಷ್ಟಕ್ಕೆ ನಿಲ್ಲದೆ, ಡಿಕೆ ಶಿವಕುಮಾರ್ ಮತ್ತು ವಿಜಯೇಂದ್ರ ಸೇರಿಕೊಂಡು ಜಾರಕಿಹೊಳಿ ಅವರ ರಾಜಕೀಯ ಬದುಕು ಹಾಳು ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಯತ್ನಾಳ್ ಮಾಡಿದ್ದಾರೆ. ಈ ಹೇಳಿಕೆಗಳು ಈಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿವಾದದ ತಿರುಳನ್ನು ಹುಟ್ಟುಹಾಕಿವೆ.
ಇದರಿಂದಾಗಿ, ಯತ್ನಾಳ್ ಪದೇ ಪದೇ ವಿಜಯೇಂದ್ರನನ್ನು ಟಾರ್ಗೆಟ್ ಮಾಡುತ್ತಿರುವುದು ಹೈಕಮಾಂಡ್ನಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆ ಇದೆ. ಇತ್ತ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ನಡೆಯುವವೋ ಎಂಬ ಮಾತುಗಳು ಕೂಡ ಕಿವಿಗುತ್ತಿವೆ.
ಒಟ್ಟಾರೆ, ಕರ್ನಾಟಕ ಬಿಜೆಪಿ ಈಗ ಗಂಭೀರ ಆಂತರಿಕ ಬಿಕ್ಕಟ್ಟಿನಲ್ಲಿದ್ದು, ನಾಯಕತ್ವದ ವಿರೋಧಿ ಧ್ವನಿ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿರುವುದು ಪಕ್ಷದ ಭವಿಷ್ಯಕ್ಕೇ ಸವಾಲಾಗಿ ಪರಿಣಮಿಸಲಿದೆ.