Crime

ಖಾಲಿ ರೈಲು ಬೋಗಿಯಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್.

ಪಾಣಿಪತ್ (ಹರಿಯಾಣ), ಜುಲೈ 7: ಹರಿಯಾಣದ ಪಾಣಿಪತ್ ನಗರದಲ್ಲಿ ಮನ ಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ನಿಂತಿದ್ದ ಖಾಲಿ ರೈಲು ಬೋಗಿಯಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಜೂನ್ 24 ರಂದು ತನ್ನ ಪತಿಯೊಂದಿಗೆ ಜಗಳವಾಡಿದ ಬಳಿಕ ಮನೆಯಿಂದ ನಿರ್ಗಮಿಸಿದ್ದರು. ಆಗಾಗ್ ಜಗಳವಾಗಿ ಮನೆ ಬಿಟ್ಟು ಹೋಗುತ್ತಿದ್ದ ಈ ಮಹಿಳೆ ಪ್ರತೀಬಾರಿಯಂತೆಯೇ ಹಿಂದಿರುಗುತ್ತಿದ್ದರು. ಆದರೆ ಈ ಬಾರಿ ಎರಡು ದಿನ ಕಳೆದರೂ ಮನೆಗೆ ಮರಳದ ಕಾರಣ ಪತಿ ಜೂನ್ 26 ರಂದು ಪೊಲೀಸರಿಗೆ ಪತ್ನಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು.

ಪೀಡಿತೆಯ ಹೇಳಿಕೆಯಂತೆ, ಜೂನ್ 26 ರಂದು ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಬಳಿ ಬಂದು, “ನಿನ್ನ ಪತಿ ನನ್ನನ್ನು ಕಳುಹಿಸಿದ್ದಾರೆ” ಎಂದು ಹೇಳಿದ. ಅವನ ಮಾತು ನಂಬಿದ ನಾನು ಆತನೊಂದಿಗೆ ಹೋಗಿದ್ದು, ಬಳಿಕ ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಬೋಗಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ. ನಂತರ, ಇನ್ನುಿಬ್ಬರು ವ್ಯಕ್ತಿಗಳು ಬಂದು ಅವರು ಕೂಡ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಮಹಿಳೆ ದೂರು ನೀಡಿದ್ದಾರೆ.

ಅಪರಾಧಕ್ಕೆ ಒಳಗಾದ ಬಳಿಕ ಮಹಿಳೆಯನ್ನು ಸೋನಿಪತ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆರೋಪಿಗಳು ಮಹಿಳೆಯನ್ನು ರೈಲು ಹಳಿಗಳ ಮೇಲೆ ಎಸೆದಿದ್ದಾರೆ. ದುರ್ಘಟನೆಯಂತೆ ರೈಲು ಹರಿದ ಪರಿಣಾಮಾಗಿ ಮಹಿಳೆಯೊಬ್ಬಳು ತೀವ್ರ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕ್ವಿಲ್ಲಾ ಠಾಣೆ ಇನ್‌ಚಾರ್ಜ್ ಎಸ್‌ಎಚ್‌ಒ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸಾಮೂಹಿಕ ಅತ್ಯಾಚಾರದ ಕಾನೂನು ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಪಾಣಿಪತ್‌ನ ಸರ್ಕಾರಿ ರೈಲ್ವೆ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಹೃದಯವಿದ್ರಾವಕ ಈ ಘಟನೆಯಿಂದ ಮಹಿಳೆಯ ಭದ್ರತೆ ಪ್ರಶ್ನೆಗೆ ಒಳಗಾಗಿದೆ. ಆರೋಪಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

nazeer ahamad

Recent Posts

ಧರ್ಮಸ್ಥಳ: ಆರನೇ ಪಾಯಿಂಟ್ ನಲ್ಲಿ ಅಸ್ತಿಪಂಜರ ಪತ್ತೆ.

ಬೆಳ್ತಂಗಡಿ, ಜುಲೈ 31: ಧರ್ಮಸ್ಥಳದ ನಿಗೂಢ ಶವ ಹೂತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT)ಕ್ಕೆ…

1 hour ago

ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ: ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ವಿರುದ್ಧ ಅಕ್ರಮ ಆಸ್ತಿ ಪತ್ತೆ

ಕೊಪ್ಪಳ, ಜುಲೈ 31: ರಾಜ್ಯದ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಹಿಂದೆ ಹೊರಗುತ್ತಿಗೆ ಆಧಾರಿತ ಕೆಲಸ ಮಾಡುತ್ತಿದ್ದ ಕಳಕಪ್ಪ…

2 hours ago

ಶಾವಂತಗೇರಾ ಪಿಡಿಒ ಅಮಾನತು: ಮನರೇಗಾ ಬಿಲ್ ಪಾವತಿಯಲ್ಲಿ ನಿರ್ಲಕ್ಷ್ಯ ಆರೋಪ

ದೇವದುರ್ಗ: ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಪ್ರಭಾರದಲ್ಲಿದ್ದ ಗ್ರೇಡ್-2 ಕಾರ್ಯದರ್ಶಿ ಶಂಶುದ್ದೀನ್ ಅವರನ್ನು ಕರ್ತವ್ಯ ಲೋಪ ಮತ್ತು ಕಾರ್ಯನಿರ್ವಹಣೆಯಲ್ಲಿ ತೋರಿದ…

3 hours ago

ಧರ್ಮಸ್ಥಳ ಶವ ಹೂತು ಪ್ರಕರಣ: ಎಸ್‌ಐಟಿಗೆ ಮತ್ತಷ್ಟು ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ಬಹಿರಂಗವಾದ ಶವ ಹೂತು ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ವೇಗವರ್ಧನೆಗಾಗಿ ವಿಶೇಷ ತನಿಖಾ ತಂಡಕ್ಕೆ…

3 hours ago

ಧರ್ಮಸ್ಥಳ ನದಿ ತಟದಲ್ಲಿ ಹೂತ ಶವಗಳ ಬೇಟೆ: ಎಸ್ಐಟಿ ಉತ್ಖನನ ಕಾರ್ಯಾಚರಣೆಗೂ ವೇಗ

ಬೆಳ್ತಂಗಡಿ, ಜುಲೈ 31 – ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಿಗೂಢವಾಗಿ ಹೂತ ಶವಗಳ ಮಾಹಿತಿ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ…

3 hours ago

ಕುಡಿಯಲು ಹಣ ನೀಡದ ತಾಯಿಯನ್ನು ಮಗನೇ ಕೊಂದ ಭೀಕರ ಘಟನೆ : ಶವ ಪಕ್ಕದಲ್ಲೇ ಮಲಗಿದ ಹಂತಕ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲ್ಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕುಡಿಯಲು ಹಣ ಕೇಳಿದ ಮಗನಿಗೆ ತಾಯಿ ನಿಷೇಧಿಸಿದ್ದಕ್ಕೆ…

5 hours ago