Latest

ನದಿಗೆ ನೂಕಿದ ಪತ್ನಿ? ಸೇತುವೆಯಿಂದ ನದಿಗೆ ಬಿದ್ದ ಪತಿಯನ್ನು ರಕ್ಷಿಸಿದ ಸಾರ್ವಜನಿಕರು

ರಾಯಚೂರು, ಜುಲೈ 12: ರಾಯಚೂರು ತಾಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿಗೆ ಸೇತುವೆಯ ಮೇಲಿಂದ ಬಿದ್ದು ಜೀವಭಯದಲ್ಲಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಸಾಹಸಿಕವಾಗಿ ರಕ್ಷಿಸಿದ ಘಟನೆ ನಡೆದಿದೆ. ಘಟನೆಯು ಶನಿವಾರ ಸಂಜೆ ನಡೆದಿದ್ದು, ಪತಿ ನದಿಗೆ ಬಿದ್ದ ಹಿನ್ನಲೆಯಲ್ಲಿ ಪತ್ನಿಯ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ನವದಂಪತಿ ಸೇರಿ ಸೇತುವೆಯ ಹತ್ತಿರ ಫೋಟೋ ಸೆಶನ್‌ಗೆ ಆಗಮಿಸಿದ್ದರು. ಮೊದಲು ಪತ್ನಿಯ ಫೋಟೋ ತೆಗೆದ ಪತಿ, ಬಳಿಕ ತನ್ನ ಫೋಟೋ ತೆಗೆದುಕೊಳ್ಳಲು ಪತ್ನಿಯನ್ನು ಬೇಡಿಕೊಂಡಿದ್ದ. ಈ ಸಂದರ್ಭ ಪತಿ ಸೇತುವೆಯ ತುದಿಯಲ್ಲಿ ನಿಂತಾಗ, ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ನೂಕಿದ್ದಾಳೆ ಎಂಬ ಆರೋಪ ಪತಿ ಮಾಡಿದ್ದಾರೆ.

ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದರೂ, ಪತಿ ಈಜುತ್ತಾ ಮುಂದೆ ಹೋಗಿ ನದಿಯ ಮಧ್ಯಭಾಗದ ಕಲ್ಲು ಬಂಡೆಯಲ್ಲಿ ಆಶ್ರಯ ಪಡೆದುಕೊಂಡು ಜೀವ ಉಳಿಸಿಕೊಂಡಿದ್ದಾರೆ. ಅನಂತರ ಸಹಾಯಕ್ಕಾಗಿ ಕೂಗಾಡುತ್ತಿದ್ದ ಪತಿಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಹಗ್ಗದ ಸಹಾಯದಿಂದ ಸುಮಾರು ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದರು.

ಈ ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ಸ್ಪಷ್ಟತೆ ಬಂದಿಲ್ಲ. ದಂಪತಿ ಯಾರು, ಎಲ್ಲಿಯವರು ಎಂಬ ವಿವರಗಳೂ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಸ್ಥಳೀಯ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.

nazeer ahamad

Recent Posts

ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು.!

ಪಾಟ್ನಾ, ಜುಲೈ 31 – ಬಿಹಾರ ರಾಜಧಾನಿ ಪಾಟ್ನಾದ ಜಾನಿಪುರ ಪ್ರದೇಶದಲ್ಲಿ ನಡೆದಿರುವ ಒಂದು ಕ್ರೂರ ಮತ್ತು ಮನುಷ್ಯತ್ವವಿರೋಧಿ ಘಟನೆ…

3 minutes ago

ಡೆಂಗ್ಯೂ ಸೋಂಕಿನಿಂದ ನಟಿ ರಾಧಿಕಾ ಶರತ್ ಕುಮಾರ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ?

ಚೆನ್ನೈ: ಕಲಾವಿದರ ಜಗತ್ತಿನಲ್ಲಿ ಒಂದು ದುಃಖದ ಸುದ್ದಿ – ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ರಾಧಿಕಾ ಶರತ್ ಕುಮಾರ್…

55 minutes ago

“ತುಮಕೂರಿನಲ್ಲಿ ವಿದ್ಯಾರ್ಥಿಗೆ 10 ಸಾವಿರ ಆಮಿಷ ನೀಡಿ ಲೈಂಗಿಕ ಕಿರುಕುಳ: ಪ್ರಿನ್ಸಿಪಾಲ್‌ ಬಂಧನ”

ತುಮಕೂರು: ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್‌ ಎನ್ನುವವನು ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿ, “ನಾನು 10 ಸಾವಿರ ರೂಪಾಯಿ ಕೊಡ್ತೀನಿ, ಬಾ”…

2 hours ago

ಆರ್ಥಿಕ ಸಂಕಷ್ಟದಿಂದ ಆಘಾತಕರ ನಿರ್ಧಾರ: ಮಗುವಿಗೆ ಇಲಿ ಪಾಷಾಣವಿಲ್ಲಿ ಟೀ ಕುಡಿಸಿ ತಾಯಿಯ ಆತ್ಮಹತ್ಯೆ ಯತ್ನ”

ಬೆಂಗಳೂರು: ಮನೆಗೂಟದ ಕಲಹ, ಆರ್ಥಿಕ ಸಂಕಷ್ಟಗಳು ಇನ್ನೊಂದು ಭೀಕರ ಘಟನೆಗೆ ಕಾರಣವಾಗಿವೆ. ತಾಯಿಯೊಬ್ಬಳು ತನ್ನ ಮಗುಗೂ ಸಹ ಇಲಿ ಪಾಷಾಣ…

2 hours ago

ವಿವಾಹೇತರ ಸಂಬಂಧದ ದುರಂತ ಅಂತ್ಯ: ನೆಲ್ಲೂರಿನಲ್ಲಿ ಪ್ರೇಮಿಯ ಹತ್ಯೆ.!

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಒಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆ ಪ್ರಕರಣದ ಹಿಂದೆ…

3 hours ago

ಧರ್ಮಸ್ಥಳ: ಆರನೇ ಪಾಯಿಂಟ್ ನಲ್ಲಿ ಅಸ್ತಿಪಂಜರ ಪತ್ತೆ.

ಬೆಳ್ತಂಗಡಿ, ಜುಲೈ 31: ಧರ್ಮಸ್ಥಳದ ನಿಗೂಢ ಶವ ಹೂತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT)ಕ್ಕೆ…

4 hours ago