Latest

ಗಂಡನ ಕೊಲೆಗೆ ಪ್ಲಾನ್ ಹಾಕಿದ ಪತ್ನಿ: ಪ್ರೇಮ ಸಂಬಂಧದ ಅಸಲಿ ಸತ್ಯ ಬಯಲು

ಚಿಕ್ಕಮಗಳೂರು, ಆಗಸ್ಟ್ 16: ಪತಿಯ ಹತ್ಯೆಯ ಹಿಂದೆ ಪತ್ನಿಯೇ ಸ್ಕೆಚ್ ಹಾಕಿದ್ದಾಳೆ ಎಂಬ ಚಕಿತಗೊಳಿಸುವ ಸತ್ಯ ಹೊರಬಿದ್ದಿದೆ. ಅನೈತಿಕ ಸಂಬಂಧವನ್ನು ಮರೆಮಾಚಿಕೊಳ್ಳಲು ಗಂಡನನ್ನೇ ಕೊಲ್ಲುವ ಪ್ಲಾನ್ ಹಾಕಿದ ಮೀನಾಕ್ಷಿ ಎಂಬ ಮಹಿಳೆಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಹತ್ಯೆ ಪ್ಲಾನ್ ಹಿಂದೆ ಪ್ರೇಮ ಪ್ರಹಸನ

55 ವರ್ಷದ ಮೀನಾಕ್ಷಿ ಮತ್ತು 33 ವರ್ಷದ ಪ್ರದೀಪ್ ನಡುವೆ ಅಕ್ರಮ ಸಂಬಂಧವಿತ್ತು. ಈ ಸಂಬಂಧ ಬಹಿರಂಗವಾಗುವ ಭಯದಿಂದ ಮೀನಾಕ್ಷಿ ತನ್ನ ಗಂಡ ಸುಬ್ರಹ್ಮಣ್ಯನನ್ನು ಕೊಲ್ಲಲು ಪ್ರದೀಪ್‌ಗೆ ಸೂಚಿಸಿದ್ದಳು. ಪ್ರದೀಪ್ ತನ್ನ ಸ್ನೇಹಿತರಾದ ಸಿದ್ದೇಶ್ ಹಾಗೂ ವಿಶ್ವಾಸ್ ಜೊತೆಗೂಡಿ ಹತ್ಯೆ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ನಾಪತ್ತೆ ದೂರು ಕೊಟ್ಟು ಬಚಾವ್ ಪ್ರಯತ್ನ

ಗಂಡನನ್ನು ಕೊಲ್ಲಿಸಿದ ಮೀನಾಕ್ಷಿ, ಪೊಲೀಸರಿಗೆ ತಲೆಕೆಡಿಸದಂತೆ ಜೂನ್ 2 ರಂದು “ಗಂಡ ನಾಪತ್ತೆಯಾಗಿದೆ” ಎಂದು ದೂರು ನೀಡಿದ್ದಳು. ಈ ಅವಧಿಯಲ್ಲಿ ಪ್ರದೀಪ್ ತಾಯಿಯ ಫೋನ್ ಬಳಸಿ ಪ್ರೇಮಿಯೊಂದಿಗೆ ಸಂಪರ್ಕದಲ್ಲಿದ್ದಳು. ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಬುದ್ಧಿವಂತಿಕೆಯಿಂದ ನಡೆಯುತ್ತಿದ್ದರೂ, ಕಡೂರು ಠಾಣೆಯ ನಿರಂತರ ತನಿಖೆಯಿಂದ ಆಕೆಯ ಸುಳ್ಳು ಬಯಲಿಗೆ ಬಂತು.

ಇಬ್ಬರು ತಿಂಗಳ ಹಿಂದೆ ಬಯಲಾಗಿದ್ದ ಹಂತಕರು

ಈ ಪ್ರಕರಣದಲ್ಲಿ ಮೊದಲ ಹಂತದಲ್ಲಿ ಜೂನ್ 8 ರಂದು ಪ್ರದೀಪ್, ಸಿದ್ದೇಶ್ ಮತ್ತು ವಿಶ್ವಾಸ್ ಬಂಧಿತರಾಗಿದ್ದರು. ವಿಚಾರಣೆ ವೇಳೆ ಪ್ರದೀಪ್ “ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಹಣದ ವ್ಯವಹಾರ ಸಂಬಂಧಿ ಕಲಹವೇ ಹತ್ಯೆಗೆ ಕಾರಣ” ಎಂದು ಒಪ್ಪಿಕೊಂಡಿದ್ದ. ಆ ಬಳಿಕ ಪ್ಲಾನ್ ಹಾಕಿದ ಮೂಲ ಸೂತ್ರಧಾರಿ ಮೀನಾಕ್ಷಿಯ ಬಂಧನ ಬಾಕಿಯೇ ಉಳಿದುಕೊಂಡಿತ್ತು. ಕೊನೆಗೆ ಈಗ ಆಕೆಯನ್ನೂ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.

ಹತ್ಯೆಯ ರಾತ್ರಿ ಭೀಕರ ಘಟನೆ

ಮೇ 31ರ ರಾತ್ರಿ ಕಡೂರು ಪಟ್ಟಣದ ಕೋಟೆ ಬಡಾವಣೆಯ ನಿವಾಸಿ ಸುಬ್ರಹ್ಮಣ್ಯನನ್ನು ಪ್ರಲೋಭನೆ ನೀಡಿ ಚಿಕ್ಕಮಗಳೂರಿಗೆ ಕರೆತಂದು ದಾರಿ ಮಧ್ಯೆ ಹತ್ಯೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಸುಟ್ಟು ಹಾಕುವ ಮೂಲಕ ಗುರುತು ಅಡಗಿಸಲು ಆರೋಪಿಗಳು ಪ್ರಯತ್ನಿಸಿದ್ದರು.

ಸುಬ್ರಹ್ಮಣ್ಯ ಟೈಲರ್ ಕೆಲಸ ಮಾಡುತ್ತಿದ್ದು, ಆತನ ಅಂಗಡಿಯ ಕೀ ಮೂಲಕವೇ ಹತ್ಯೆ ರಹಸ್ಯದ ಕೊಂಡಿ ಪೊಲೀಸರಿಗೆ ಸಿಕ್ಕಿತು. ನಿರಂತರ ತನಿಖೆಯ ಫಲವಾಗಿ, ಎರಡು ತಿಂಗಳ ಬಳಿಕ ಪತ್ನಿಯೇ ಕೊಲೆ ಸ್ಕೆಚ್ ಹಾಕಿದ್ದಾಳೆ ಎಂಬ ನಿಜ ಬೆಳಕಿಗೆ ಬಂದಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

nazeer ahamad

Recent Posts

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

2 weeks ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

3 weeks ago

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

3 months ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

3 months ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

5 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

5 months ago