
ವಿಜಯಪುರದ ಆಲಕುಂಟೆ ನಗರದಲ್ಲಿ ಪತ್ನಿ, ಪತಿ ಮೇಲೆ ಕೊಲೆ ಮಾಡಲು ಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತೇಜು ರಾಠೋಡ್ ಎಂಬ ಮಹಿಳೆ, ತನ್ನ ಪತಿ ಅಜೀತ್ ರಾಠೋಡ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.
ಘಟನೆಯ ವಿವರಗಳಲ್ಲಿ, ಅಜೀತ್ ಗಾಢ ನಿದ್ರೆಯಲ್ಲಿ ಇದ್ದ ಸಂದರ್ಭದಲ್ಲಿ ತೇಜು ಅವರು ಚಾಕುವಿನಿಂದ ಅವರ ಕತ್ತಿಗೆ ಇರಿದಿದ್ದಾರೆ. ತಕ್ಷಣವೇ ನೋವಿನಿಂದ ಕಿರುಚಿದ ಅಜೀತ್ ಶಬ್ದ ಕೇಳಿ, ಮನೆಯವರ ಗಮನ ಸೆಳೆದಿದ್ದು, ಅವರು ಕೂಡಲೇ ಅಜೀತ್ ರನ್ನು ನಗರ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ ಅಜೀತ್ ರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ.
ಘಟನೆಗೆ ಹಿನ್ನಲೆಯಲ್ಲಿ, ಪತಿ ಅಜೀತ್ ತೇಜುಗೆ ಆಕೆಯ ಮೊಬೈಲ್ ಬಳಕೆ ಕುರಿತಾಗಿ ಬುದ್ಧಿವಾದ ನೀಡಿದ್ದ ಹಿನ್ನೆಲೆಯಲ್ಲಿ ಕೋಪಗೊಂಡ ತೇಜು ಈ ದಾಳಿಗೆ ಮುಂದಾಗಿದ್ದಾಳೆ ಎನ್ನಲಾಗಿದೆ. ತೇಜು ತಮ್ಮ ಮೊಬೈಲಿನಲ್ಲಿ ಅನ್ಯ ವ್ಯಕ್ತಿಗಳೊಂದಿಗೆ ನಿರಂತರ ಚಾಟಿಂಗ್ ಮಾಡುತ್ತಿದ್ದರಂತೆ. ಇದಕ್ಕೆ ತಡೆಯೊಡ್ಡಿದ ಅಜೀತ್ ರ ಕ್ರಮಕ್ಕೆ ತೇಜು ಆಕ್ರೋಶಗೊಂಡು ಈ ವಿಚಿತ್ರ ಕೃತ್ಯಕ್ಕೆ ಕೈ ಹಾಕಿದ್ದಾಳೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.