ಬೆಂಗಳೂರು ನಗರದ ವೈಟ್ಫೀಲ್ಡ್ ಬಳಿ ನಗೋಂಡನಹಳ್ಳಿ ಪ್ರದೇಶದಲ್ಲಿ ಮನಕಲಕಿಸುವ ದುರಂತವೊಂದು ವರದಿಯಾಗಿದೆ. ತಾಯಿ ಮತ್ತು ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಆತ್ಮಹತ್ಯೆ ಮಾಡಿಕೊಂಡವರು ಆಂಧ್ರ ಪ್ರದೇಶ ಮೂಲದ ರಚಿತಾ ರೆಡ್ಡಿ (46) ಮತ್ತು ಅವರ ಮಗಳು ಶ್ರೀಜಾ ರೆಡ್ಡಿ (24) ಎಂದು ಗುರುತಿಸಲಾಗಿದೆ. ಇಬ್ಬರು ನಗೋಂಡನಹಳ್ಳಿಯ ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಮಗಳು ಶ್ರೀಜಾ ಖಾಸಗಿ ಕಂಪನಿಯೊಂದರಲ್ಲಿ ಡೇಟಾ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.
ಪ್ರಾಥಮಿಕ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಮೊದಲು ಶ್ರೀಜಾ ನೇಣುಬಿಗಿದು ಆತ್ಮಹತ್ಯೆಗೆ ಶರಣಾದರು. ಇದನ್ನು ಕಂಡ ತಾಯಿ ರಚಿತಾ ತೀವ್ರ ಆಘಾತಕ್ಕೆ ಒಳಗಾಗಿದ್ದು, ಈ ಸುದ್ದಿಯನ್ನು ತಮ್ಮ ಅಳಿಯನಿಗೆ ತಿಳಿಸಿದ ತಕ್ಷಣವೇ “ಬದುಕಲು ಇಚ್ಛೆ ಇಲ್ಲ” ಎಂದು ಹೇಳಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ ತಿಳಿಯುತ್ತಿದ್ದಂತೆಯೇ ವೈಟ್ಫೀಲ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರೂ ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ದುರಂತದಿಂದ ಸ್ಥಳೀಯರಲ್ಲೂ ಬೇಸರ ಮತ್ತು ತೀವ್ರ ಬೇಧನೆ ಮೂಡಿದೆ. ತಾಯಿ–ಮಗಳ ನಡುವೆ ಏನಾದರೂ ಸಮಸ್ಯೆ ಇದೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ.
ನಂದ್ಯಾಲ್ (ಆಂಧ್ರಪ್ರದೇಶ), ಆಗಸ್ಟ್ 1: ಆಂಧ್ರಪ್ರದೇಶದ ರಸ್ತೆ ಮತ್ತು ಕಟ್ಟಡ ಇಲಾಖೆ ಸಚಿವ ಬಿ.ಸಿ. ಜನಾರ್ದನ ರೆಡ್ಡಿಯವರ ಸಹೋದರ ಮದನ್…
ಬೆಂಗಳೂರು, ಜುಲೈ 31: ಸಿಲಿಕಾನ್ ಸಿಟಿ ಬೆಂಗಳೂರು ಈಚೆಗೆ ಮತ್ತೊಂದು ಬೆಚ್ಚಿಬೀಳಿಸುವ ಹೃದಯವಿದ್ರಾವಕ ಘಟನೆಯನ್ನು ಕಂಡಿದೆ. ಕೇವಲ 5 ಲಕ್ಷ…
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನರ್ಬಯಾ ಪ್ರಕರಣವನ್ನು ನೆನಪಿಸುವಂತೆಯೇ ಒಂದು ಹೃದಯವಿದ್ರಾವಕ ಅಪರಾಧ ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಪ್ರೇಮಿಕೆಯನ್ನು…
ಹೈದರಾಬಾದ್, ಜುಲೈ 31: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಸಂಸ್ಕೃತಿಯ ಕುರಿತಂತೆ ಆತಂಕ ಹೆಚ್ಚಿಸುವ ಘಟನೆ ಬೆಳಕಿಗೆ ಬಂದಿದೆ. ಕೇವಲ…
ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ…
ಮುಂಡಗೋಡ: ತಾಲೂಕಿನ ಕಾತೂರ ವಲಯದ ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಹೊಲದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು…