Latest

ಹೋಗಿದ್ದು ಪೊಲೀಸರ ಜೊತೆ; ಸಿಕ್ಕಿದ್ದು ಫುಟ್ಪಾತ್ ನಲ್ಲಿ ಹೆಣವಾಗಿ!

ಮಕ್ಕಳ ಕಳ್ಳರ ಬಗ್ಗೆ ಸಾಕಷ್ಟು ಜಿಲ್ಲೆಗಳಲ್ಲಿ ವದಂತಿ ಎದ್ದಿದ್ದು ಬೆಂಗಳೂರಿನಲ್ಲೂ ಸಹ ಇದು ಹಬ್ಬಿದೆ. ಕಳೆದ ತಿಂಗಳು ರಾಮ್ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಓಡಾಡುತ್ತಿದ್ದ ಕುಡುಕನೋರವನಿಗೆ ಸ್ಥಳೀಯರೆಲ್ಲ ಸೇರಿ ಮಕ್ಕಳ ಕಳ್ಳನೆಂದು ಹಿಗ್ಗ ಮುಗ್ಗ ತಳಿಸಿರುತ್ತಾರೆ. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿರುತ್ತಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಇದರ ಮುಂದುವರಿದ ಭಾಗವೇನೆಂದರೆ ಪೊಲೀಸರ ವಶಕ್ಕೆ ಒಪ್ಪಿಸಿದ ಮುಂದಿನ ದಿನ ಆತ ಫುಟ್ಬಾತ್ ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಸ್ಥಳೀಯರು ಆತನಿಗೆ ಹಿಗ್ಗ ಮುಗ್ಗ ತಳಿಸಿದ ನಂತರ ರಾಮ್ ಮೂರ್ತಿ ನಗರ ಪೊಲೀಸರ ಹೊಯ್ಸಳ ವಾಹನದೊಳಕ್ಕೆ ಹತ್ತಿಸಿರುವ ವಿಡಿಯೋ ಸ್ಥಳೀಯರು ಚಿತ್ರಿಸಿಕೊಂಡಿರುತ್ತಾರೆ. ಅಂದರೆ ಇಲ್ಲಿ ಸ್ಪಷ್ಟವಾಗುವುದೇನೆಂದರೆ ಆತನನ್ನು ಪೊಲೀಸರು ಕರೆದುಕೊಂಡು ಹೋಗಿರುತ್ತಾರೆ. ಪೊಲೀಸರ ವಾಹನದೊಳಕ್ಕೆ ಅವನೇ ನಡೆದುಕೊಂಡು ಹೋಗಿ ಹತ್ತಿರುತ್ತಾನೆ.

ಆಚಾರ್ಯ ವಿಚಾರವೇನೆಂದರೆ ಅವರು ಕರೆದುಕೊಂಡು ಹೋದ ಮುಂದಿನ ದಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಟ್ ಬಾತ್ ಒಂದರ ಮೇಲೆ ಅನಾಮ ದೇಹ ವ್ಯಕ್ತಿಯ ಹೆಣ ಸಿಕ್ಕಿರುತ್ತದೆ ಎಂದು ಪ್ರಕಟಣೆ ನೀಡಿರುತ್ತಾರೆ. ಅ ಹೆಣವು ರಾಮಮೂರ್ತಿ ನಗರ ಪೊಲೀಸರು ಕರೆದುಕೊಂಡು ಹೋಗಿದ್ದಂತವನದ್ದೇ ಆಗಿರುತ್ತದೆ. ಪೊಲೀಸರು ಹೇಳುವ ಪ್ರಕಾರ ಅವನು ಮಕ್ಕಳ ಕಳ್ಳನಲ್ಲ ಕುಡಿದು ಓಡಾಡುತ್ತಿದ್ದ, ಸ್ಥಳೀಯರು ತಪ್ಪಾಗಿ ತಿಳಿದು ಹೊಡೆದಿದ್ದರೂ ಅದಕ್ಕಾಗಿ ಅವನನ್ನು ಬಿಟ್ಟು ಕಳುಹಿಸಿದ್ದೇವೆ ಎಂದು ಹೇಳಿರುತ್ತಾರೆ. ಯಾವುದಾದರೂ ಅನಾಮದೇಯ ಹೆಣ ಸಿಕ್ಕ ಬಳಿಕ ಪೊಲೀಸರು ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡುತ್ತಾರೆ ಹಾಗೂ ಪ್ರಕಟಣೆಗಳನ್ನು ನೀಡುತ್ತಾರೆ.

ಹೀಗೆ ಮಾಹಿತಿ ನೀಡಿದ ನಂತರವೂ ಸಹ ಬೆಂಗಳೂರಿನಲ್ಲೇ ಇರುವಂತಹ ಮತ್ತೊಂದು ಠಾಣೆಯ ಪೊಲೀಸರಿಗೆ ತಲುಪಲಿಲ್ಲವ? ಅಥವಾ ಪೊಲೀಸರೇ ಈತನನ್ನು ಅನಾಮದೇಯ ವ್ಯಕ್ತಿಯ ಹೆಣವೆಂದು ಬಿಂಬಿಸಲು ಮುಂದಾದಾರ? ಈ ಎಲ್ಲಾ ಪ್ರಶ್ನೆಗಳು ಮೂಡಲು ಕಾರಣ ಒಂದಿದೆ ಅದೇನೆಂದರೆ ಇ ಘಟನೆ ನಡೆದು ಸುಮಾರು 14 ರಿಂದ 15 ದಿನಗಳು ಕಳೆದಿವೆ ಆದರೂ ಸಹ ಅಂದಿನ ದಿನ ಆತನನ್ನು ತಳಿಸಿದ ಸಾರ್ವಜನಿಕರನ್ನು ಸಹ ಪ್ರಶ್ನಿಸಿರುವುದಿಲ್ಲ ಹಾಗೂ ಕರೆದುಕೊಂಡ ಹೋದ ಪೊಲೀಸರ ವಿರುದ್ಧವು ಯಾವುದೇ ರೀತಿಯ ತನಿಖೆ ನಡೆದಿರುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಆತನದ್ದು ಅನಾಥ ಶವವೆಂದು ಬಿಂಬಿಸಲು ಮುಂದಾಗಿದ್ದಾರೆ ಎಂಬುದು ತಿಳಿಯುತ್ತದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಹೋರಾಟಗಾರರು ಹಾಗೂ ಕೆಲವು ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕೋರ್ಟಿನ ಮೊರೆ ಹೋದಂತಹ ಸಂದರ್ಭದಲ್ಲಿ ಪೊಲೀಸರು ಅಂದಿನ ದಿನ ಆತನಿಗೆ ತಳಿಸಿರುವಂತಹ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇಷ್ಟು ದಿನ ಪೊಲೀಸರು ಸುಮ್ಮನಿದ್ದು ಈ ರೀತಿ ದಿಡೀರನೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು. ಆ ದಿನ ಪೊಲೀಸರು ಆತನನ್ನು ಕರೆದುಕೊಂಡ ಹೋದ ಮೇಲೆ ಮಾಡಿದ್ದಾದರೂ ಏನು? ನಿಜಕ್ಕೂ ಆ ದಿನ ಸಾಯುವ ಹಾಗೆ ಒದೆ ತಿಂದವನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರಾ? ಸಾಯುವ ಸ್ಥಿತಿಯಲ್ಲಿ ಇದ್ದವನನ್ನು ಪೊಲೀಸರು ಆಸ್ಪತ್ರೆಗೆ ಏಕೆ ಸೇರಿಸಿರುವುದಿಲ್ಲ? ಪೊಲೀಸರಿಗೆ ಮನುಷ್ಯತ್ವ ಇಲ್ಲವಾ? ಅಥವಾ ಹಿಂದೆ ನಡೆದಿರುವ ಕಥೆಯೇ ಬೇರೆನಾ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕರು ಸಿಗದಿದ್ದರೂ ಹೋದ ಅಮಾಯಕನ ಜೀವ ಹಿಂತಿರುಗಿ ಬರುವುದಿಲ್ಲ. ಸ್ಥಳೀಯ ಜನರ ಮುಂದೆ ತಮ್ಮ ಪೌರುಷವನ್ನು ತೋರಿಸಲು ಹೋಗಿ ಅಮಾಯಕನೋರವನಿಗೆ ತಳಿಸಿದ ಮೂವರು ಈಗ ಕೊಲೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ.
ನ್ಯಾಯಾಲಯದಲ್ಲಾದರೂ ಈ ಪ್ರಕರಣದ ಅಸಲಿ ಸತ್ಯ ಹೊರಬರುತ್ತದೆಯೋ ಅಥವಾ ಸಾಕಷ್ಟು ಪ್ರಕರಣಗಳಂತೆ ಇದು ಸಹ ಮೂಲೆಗುಂಪಾಗುತ್ತದೆಯೋ ಕಾದು ನೋಡಬೇಕು.

ಭ್ರಷ್ಟರ ಬೇಟೆ

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

4 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

4 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

4 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

4 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

4 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

24 hours ago