Latest

ಮಳೆಗಾಗಿ ಕಪ್ಪೆ ಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು.

ಕುಂದಗೋಳ; ತಾಲೂಕಿನ ಎಲ್ಲೆಡೆ ಮುಂಗಾರು ಪೂರ್ವ ಮಳೆ ಕೈಕೊಟ್ಟಿದೆ. ಇದೀಗ ಮುಂಗಾರು ಕೂಡ ವಿಳಂಬವಾದ ಹಿನ್ನೆಲೆಯಲ್ಲಿ ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ, ಇನ್ನೂ ಕೆಲವಡೆ ರೈತರು ಮಳೆಗಾಗಿ ವಿಶೇಷ ಪೊಜೆಗಳನ್ನು ಮಾಡುತ್ತಲ್ಲೆ ಇದ್ದಾರೆ. ಹಾಗೇ ಕುಂದಗೋಳ ಪಟ್ಟಣದ ಕಾಳಿದಾಸ ನಗರದ ನಿವಾಸಿಗಳು ಕಪ್ಪೆಗಳಿಗೆ ಮದುವೆ ಮಾಡಿದ ಘಟನೆಯೂ ನಡೆದಿದೆ.

ಹೌದು..! ಜೂನ ತಿಂಗಳು ಬಂದರೆ ಸಾಕು ರೈತರು ಮಳೆ ಬರುತ್ತೆದೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ ಇದೀಗ ಹದಿನೈದು ದಿನಗಳು ಕಳೆದರೂ ಮಳೆ ಮಾತ್ರ ಇನ್ನು ಪ್ರವೇಶ ಮಾಡಿಲ್ಲಿ. ಆದ್ದರಿಂದ ಕೆಲವೆಡೆ ರೈತರು ದೇವರು ಮೊರೆ ಹೋಗಿ ವಿಶೇಷ ಪೊಜಿಗಳು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕುಂದಗೋಳ ಪಟ್ಟಣದ ಕಾಳಿದಾಸ ನಗರದ ನಿವಾಸಿಗಳು ಮಳೆ ಬರಲಿ ಅಂತ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದು, ಇಲ್ಲಿ ವಿಶೇಷವಾಗಿತ್ತು.

ಮಳೆ ಆಗಿಲ್ಲ ಅಂದರೆ ಆಗಿನ ಪೂರ್ವಜರು ಕಪ್ಪೆಗಳಿಗೆ ಮದುವೆ ಮಾಡುತ್ತಿದ್ದರು, ಇಂದು ಕೂಡ ಅದೇ ಕಾರ್ಯ ಮುಂದುವರಿತ್ತೂ ಬಂದಿದೆ ಅದರಂತೆ ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ಕಪ್ಪೆಗಳಿಗೆ ಮದುವೆ ಮಾಡಲಾಯಿತ್ತು. ಮನುಷ್ಯರ ಮದುವೆ ಹೇಗೆ ನಡೆಯಿತ್ತು ಹಾಗೆ ಮುತ್ತೈದೆಯ ರಿಗೆ ಉಡಿ ತುಂಬುವುದು, ಮನುಷ್ಯರ ಕೈಗಳಿಗೆ ಕಂಕಣ ಕಟುತ್ತಾರೂ ಹಾಗೇ ಕಪ್ಪೆಗಳಿಗೆ ಕಂಕಣ ಕಟ್ಟಿ, ಕೆರೆ ನಿರ್ಮಿಸಿ, ಕಡಪಟ್ಟ ರಸ್ತೆಯಲ್ಲಿರುವ ಯಲ್ಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ. ಮಳೆಗಾಗಿ ಪ್ರಾಥಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ ರೈತಾಪಿ ವರ್ಗದ ಈ ಪ್ರಾರ್ಥನೆಯಿಂದ ವರುಣ ದೇವ ನಾಡಿನ ತುಂಬೆಲ್ಲಾ ಕೃಪೆ ತೋರೆಲಿ ಅನ್ನುವುದು ರೈತಾರ ಆಶಯ.

ವರದಿ; ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

DCREಯಲ್ಲೇ ದಲಿತ ಅಧಿಕಾರಿಗೆ ಕಿರುಕುಳ ಆರೋಪ: SP, DySP ವಿರುದ್ಧ ಇನ್ಸ್ಪೆಕ್ಟರ್ ದೂರು

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE)ದಲ್ಲಿಯೇ ದಲಿತ…

2 hours ago

ರೀಲ್ಸ್ ಹುಚ್ಚು ಜೀವ ಬಲಿ: ಸ್ಟಂಟ್ ವೇಳೆ ಬೈಕ್ ಟ್ರಕ್‌ಗೆ ಡಿಕ್ಕಿ, ಮೂವರು ಯುವಕರ ಸಾವು

ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಲು ಅಪಾಯಕಾರಿ ಸ್ಟಂಟ್‌ಗೆ ಮುಂದಾದ ಮೂವರು ಯುವಕರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.…

2 hours ago

ಮಂಡ್ಯದಲ್ಲಿ ಲೋಕಾಯುಕ್ತ ದಾಳಿ: ಅಪ್ರಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್‌ – ಖಾಸಗಿ ಸೆಂಟರ್‌ಗಳ ನಿಯಮ ಉಲ್ಲಂಘನೆ ಬಯಲು

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಭಾಗದಲ್ಲಿನ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಗಂಭೀರ ನಿಯಮ ಉಲ್ಲಂಘನೆಗಳು ನಡೆದಿರುವುದು ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ಬೆಳಕಿಗೆ…

2 hours ago

ಮದ್ಯದ ದರ ಏರಿಕೆ ಶಾಕ್: ‘ಎಕಾನಮಿ’ ಬ್ರ್ಯಾಂಡ್‌ಗಳೇ ಹೆಚ್ಚು ದುಬಾರಿ

ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಲೇ ಸಂಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ಹೊರೆ ಹಾಕಲು ಮುಂದಾಗಿದೆ. ನೀರು…

15 hours ago

ಬೇಸಿಗೆ ಬಿಸಿಗೆ ಬೈಕ್ ಟೈರ್ ಬ್ಲಾಸ್ಟ್: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ದುರ್ಮರಣ

ನಂಜನಗೂಡು ತಾಲೂಕಿನ ಗಣೇಶಪುರ ಗ್ರಾಮದ ಬಳಿ ದಾರುಣ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದ ಟೈರ್ ಬ್ಲಾಸ್ಟ್ ಆಗಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ…

17 hours ago

ಶಿರಸಿ ವೈದ್ಯನ ಕೊಲೆ ರಹಸ್ಯ ಬಯಲು: ಮದುವೆ ಮುನ್ನವೇ ಸ್ನೇಹಿತನಿಂದ ಕ್ರೂರ ಹತ್ಯೆ.!

ಶಿರಸಿಯಲ್ಲಿ ನಡೆದಿದ್ದ ಆಯುರ್ವೇದ ವೈದ್ಯನ ಹತ್ಯೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ದಾರುಣ ಕೃತ್ಯದ ಹಿಂದೆ ಸ್ನೇಹಿತನೇ ಇದ್ದಿರುವುದು…

17 hours ago