Latest

ನೀರಿಲ್ಲದೇ ಗ್ರಾಮಸ್ಥರು ಪರದಾಟ!

ಕುಂದಗೋಳ; ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಸಗೆ ಬೇಗುದಿಗೆ ಕುಡಿಯಲು ನೀರು ಇಲ್ಲದೆ ಗ್ರಾಮಸ್ಥರು ನೀರಿನ ಬವಣೆಗೆ ರೋಸಿ ಹೊಗಿದ್ದಾರೆ.

ಹೌದು..! ಕಳೆದ ಬಾರಿ ಹಿಂದೆ ಕುಡಿಯುವ ನೀರು ಸ್ಥಗತಿಗೊಂಡಿತ್ತು, ಇವಾಗ ಮತ್ತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೋಟರ್ ಕೆಟ್ಟ ಪರಿಣಾಮ ನೀರು ಸರಬರಾಜು ಸ್ಥಗತಿಗೊಂಡಿದೆ. ಇತ್ತ ಶುದ್ದ ನೀರಿಗಾಗಿ ಹಳ್ಳಿಗರು ಪಟ್ಟಣದ ಅತ್ತ ಮುಖ ಮಾಡಿದ್ದಾರೆ, ಕೆಲವೊಂದು ಗ್ರಾಮಸ್ಥರು ಗ್ರಾಮದ ಕೆರೆಗಳಿಗೆ, ರೈತರ ಜಮೀನುಗಳ ಕೃಷಿಹೊಂಡಕ್ಕೆ ತೆರಳಿ ಕೆರೆ ನೀರು ತರುತ್ತಿದ್ದಾರೆ. ಹೀಗಾಗಿ ನೀರಿನ ಸಮಸ್ಯೆಯ ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ? ಅನ್ನುವುದು ಜನಸಾಮಾನ್ಯರ ಪ್ರಶ್ನೆ.

ಕುಡಿಯುವ ನೀರಿನ ಕೊರತೆ ವಿವಿಧ ಗ್ರಾಮಗಳಿಗೆ ನೀರಿನ ಸಮಸ್ಯೆ ತೆಲೆದೂರಿದೆ. ಗ್ರಾಮ ಗಳಾದ ಯರೇನಾರಾಯಣಪೂರ, ಯರಗುಪ್ಪಿ, ಚಿಕ್ಕನರ್ತಿ, ಹೀರೆನರ್ತಿ, ಬೆನಕನ ಹಳ್ಳಿ, ಕಡಪಟ್ಟ, ಅಲ್ಲಾಪೂರ, ರೊಟ್ಟಿಗವಾಡ, ಕೊಂಕಣ್ಣಕುರಹಟ್ಟಿ, ಚಾಕಲಬ್ಬಿ, ಸೇರಿದಂತೆ ಇತರೆ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳೂ ಏನು ಮಾಡುತ್ತಿದ್ದಾರೆ? ಅಂತ ಜನರು ಪ್ರಶ್ನೆ ಮಾಡ್ತಾ ಇದ್ದಾರೆ? ಇದ್ಯಾವುದೂಕ್ಕೂ ಉತ್ತರ ನೀಡದ ಅಧಿಕಾರಿಗಳು? ಜನ ನೀರಿಗಾಗಿ ತತ್ತಿರಿಸಿವಂತೆ ಮಾಡಿದೆ.

ಸರಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಾ ಬಂದಿದೆ. ಅದರಂತೆ ಕಳೆದ ತಿಂಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ, ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆ ಕುಂದಗೋಳ ವಿಭಾಗದ ದಲ್ಲಿ ಈಗಾಗಲೇ ಯರೇನಾರಾಯಣಪೂರ ಇತರೆ 13 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ದುರಸ್ತಿಗೆ 4 ಲಕ್ಷ ರೂಪಾಯಿ ಅಂದಾಜು ವೆಚ್ಚ ಎಸ್ ಡಿ ಪಿ ಯೋಜನೆಡಿಯಲ್ಲಿ ದಿನಾಂಕ; 10/03/2023 ರಂದು ಭರಸಿಲಾಗಿದೆ. ಪುನಃ ಪುನಃ ಸಮಸ್ಯೆ ತೆಲೆದೊರಿದರು, ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೊರುತ್ತಿದ್ದಾರೆ. ಸರಕಾರ ಕುಡಿಯುವ ನೀರಿಗೆ ಕೊರತೆ ಉಂಟಾಗಬಾರದೆಂದು ಶಾಸನಬದ್ದ ಅನುದಾನದಡಿ ಯಲ್ಲಿ ಹಣ ಇರಿಸಲಾಗುತ್ತದೆ, ಆದರೆ ಸಮರ್ಪಕ ಬಳಿಕೆ ಏಕೆ ಆಗುತ್ತಿಲ್ಲ? ಯಾವಾಗ ನೋಡಿದರೂ ರಿಪೇರಿ ಅಂತ ಅಧಿಕಾರಿಗಳು ಹೇಳ್ತಾ ಮುಂದುವರೆಯುತ್ತ ಇದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನ ಸಂಪರ್ಕಸಿದಾಗ ಕುಂದಗೋಳ ಜಲ ಮಂಡಳಿಯಿಂದ ಟ್ಯಾಂಕರ್ ಮೂಲಕ ಶುದ್ದ ಘಟಕಕ್ಕೆ ನೀರು ಶೇಖರಿಸಿ, ತದನಂತರ ಶುದ್ದ ನೀರು ಪೂರೈಸುತ್ತವೆ. ಬಹುಗ್ರಾಮ ನೀರಿನ ಯೋಜನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
-ಆರ್ ಟಿ ರತ್ನಾಕರ
ಯರಗುಪ್ಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ದುರಸ್ತಿಗೊಳಿಸಿಲಾಗಿದೆ. ಇನ್ನೇನು ಎರಡು ದಿನಗಳಲ್ಲಿ ನೀರು ಸರಬರಾಜು ಮಾಡುತ್ತೇವೆ.
– ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಆಕಾಶ ವಂದೇ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಕುಂದಗೋಳ

ಒಟ್ಟಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಗ್ರಾಮಸ್ಥರ ಪರದಾಟ ಹೇಳತೀರದೂ ಕೂಡಲೇ ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆ ಜನರ ದಾಹ ನೀಗಸುತ್ತಾರ ಇಲ್ಲ ಕಾದು ನೋಡಬೇಕು

ವರದಿ; ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಕೆರೆಗೆ ಬಿದ್ದು ಜೀವ ಕಳೆದುಕೊಂಡ ಮೂರು ವರ್ಷದ ಅವಳಿ ಮಕ್ಕಳು: ಯರಿ ನಾರಾಯಣಪುರದಲ್ಲಿ ದುರ್ಘಟನೆ, ಗ್ರಾಮದಲ್ಲಿ ಆಕ್ರಂದನ

ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ಮಗುಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಮನೆಯ…

19 minutes ago

ಪ್ರಚಾರ ವಿವಾದಕ್ಕೆ ರಚಿತಾ ರಾಮ್ ಗಟ್ಟಿ ಪ್ರತಿಕ್ರಿಯೆ: ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ!

ಬೆಂಗಳೂರು: 'ಸಂಜು ವೆಡ್ಸ್ ಗೀತಾ-2' ಸಿನಿಮಾ ತಂಡ ಮತ್ತು ನಟಿ ರಚಿತಾ ರಾಮ್ ನಡುವಿನ ವೈಮನಸ್ಸು ಬಹಿರಂಗಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಿಂದ…

32 minutes ago

ಭಟ್ಕಳದಲ್ಲಿ ಜೂಜಾಟದ ಕ್ಲಬ್ ಮೇಲೆ ದಾಳಿ : 25 ಮಂದಿ ವಿರುದ್ಧ ಪೊಲೀಸ್ ಕ್ರಮ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಕಲ್ಬಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ಖಾಸಗಿ ಕ್ಲಬ್‌ನಲ್ಲಿ ಜೂಜಾಟ ನಡೆಯುತ್ತಿತ್ತು ಎಂಬ…

1 hour ago

30 ವರ್ಷದ ಹಿಂದಿನ ಲಂಚ ಪ್ರಕರಣ: ನಿವೃತ್ತಿಗೆ 10 ವರ್ಷವಾದ ಮೇಲೆ ಗ್ರಾಮ ಲೆಕ್ಕಾಧಿಕಾರಿಗೆ ಜೈಲುದಂಡ

ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ…

5 hours ago

“ಶೇ.100ಫಲಿತಾಂಶದ ನಾಟಕದ ಹಿಂದೆ ಸುಳ್ಳು ಆಟ: ಖಾಸಗಿ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳ ದುರ್ಬಳಕೆ”

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…

11 hours ago

ಕೋಲಾರದಲ್ಲಿ ಮಾವು ಬೆಲೆ ಕುಸಿತದ ದುಃಖ: ಹೃದಯಾಘಾತದಿಂದ ವ್ಯಾಪಾರಿ ಸಾವು

ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…

1 day ago