ಮೈಸೂರು ನಗರದ ನಜರ್‌ಬಾದ್ ಠಾಣಾ ಪೊಲೀಸರು ಠಾಣೆಯಲ್ಲಿ ದಾಖಲಾಗಿದ್ದ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: ೨೦/೦೮/೨೦೨೨ ರಂದು ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಿಂದ ಮೈಸೂರು ನಗರದ ನಜರ್ ಮೊಹಲ್ಲಾದ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯ ವಸಂತ್ ಮಹಲ್‌ನಲ್ಲಿ ಕಳುವಾಗಿದ್ದ ರೂ ೧,೭೧,೦೦೦/- ಬೆಲೆ ಬಾಳುವ ೨ ವೀಡಿಯೋ ಕ್ಯಾಮಾರಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರಾದ ಶ್ರೀಮತಿ. ಗೀತ. ಎಂ.ಎಸ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ.ರವರಾದ ಶ್ರೀ ಶಶಿಧರ್.ಎಂ.ಎನ್ ರವರ ಉಸ್ತುವಾರಿಯಲ್ಲಿ ನಜರ್‌ಬಾದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಜೀವನ್.ಕೆ, ಪಿ.ಎಸ್.ಐಗಳಾದ ಕು: ವೈಶಾಲಿ ಎ ಬಿರಾದಾರ, ರಘು, ಪ್ರೋ.ಪಿ.ಎಸ್.ಐ ಗಳಾದ ಚಂದ್ರಶೇಖರ್ ಇಟಗಿ, ಮಾರುತಿ ಅಂತರಗಟ್ಟಿ ಹಾಗೂ ಸಿಬ್ಬಂದಿಯವರಾದ ಸತೀಶ್‌ಕುಮಾರ್.ಎಸ್, ಕಿರಣ್ ರಾಥೋಡ್, ಸಂತೋಷ್ ಕುಮಾರ್, ಸವಿತಾ ಬಸವರಾಜ ಮಾನಪ್ಪನವರ ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

Related News

error: Content is protected !!