ಕುಂದಗೋಳ : ಇಂದಿನ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನೃತ್ಯ, ಗಾಯನ, ವಿವಿಧ ಮನರಂ ಜನೆ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿರುವುದು ಕಂಡು, ಇಲ್ಲೊಂದು ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ದಿನಂ ಪ್ರತಿ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿವೆ.
ಹೌದು.! ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ 12 ನೇ ವರ್ಷದ ಗ್ರಾಮದೇವತೆ ಹಾಗೂ ಉಡಚಮ್ಮ ದೇವೆ ಜಾತ್ರೆ ಮಹೋತ್ಸವ ನಿಮಿತ್ತ, ಬರಗಾಲದ ಬಂಟ, ಬಂಜೆತನ ನಿವಾರಕ, ಎಂದೇ ಖ್ಯಾತಿ ಪಡೆದ ಮಹಾ ಪುರುಷ ಕಲಬುರಗಿ ಶ್ರೀ ಶರಣ ಬಸವೇಶ್ವರ ಪ್ರವಚನ, ವಿವಿಧ ಕಾರ್ಯಕ್ರಮಗಳಿಗೆ ಯರಗುಪ್ಪಿ ಗ್ರಾಮ ದೇವತೆ ದೇವಸ್ಥಾನದ ಆವರಣ ಸಾಕ್ಷಿಯಾಗಿತ್ತು.
ಒಂದು ತಿಂಗಳು ಪ್ರವಚನ ನಡೆಯುವುದರಿಂದ ಊರಿನ ಹಿರಿಯರ ಮಾರ್ಗದರ್ಶನದಂತೆ ಯುವಕರು ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸಿ ಯುವಕರಿಗೆ ಪೋತ್ಸಾಹ, ಹುರಿದುಂಬಿಸಲು, ಪ್ರತಿನಿತ್ಯ ಮನೋಲ್ಲಾಸಕ್ಕಾಗಿ ಕಾರ್ಯಕ್ರಮಗಳು ನಡೆಸುತ್ತಾ ಇರುವುದು ಗಮನಾರ್ಹವಾಗಿದೆ.
ಪ್ರತಿದಿನ ಪ್ರವಚನ ಮಹಾಮಂಗಲ ಆಗಿದ ತಕ್ಷಣ ಮೂಸಿಕಲ್ ಚೇರ್, ಮಹಿಳೆ ಭಾವಚಿತ್ರಕ್ಕೆ ಸಿಂಧೂರ ಇಡುವುದು, ಕಪ್ಪೆ ಕುಣಿತ, ಹಿಂದೆ ಕೈಕಟ್ಟಿ ಬಾಳೆಹಣ್ಣು ತಿನ್ನುವುದು, ಹೀಗೆ ಸಾಕಷ್ಟು ಕಾರ್ಯಕ್ರಮಗಳು ಜೊತೆಗೆ ಮಹಿಳೆಯರು ನಾವೇನು ಕಡಿಮೆ ಇಲ್ಲದಂತೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಕ್ತವಾಗಿ ಭಾಗವಹಿಸುತ್ತಿದಾರೆ. ಇನ್ನೂ ಯುವಕರ ಕೇಕೆ, ಶಿಳ್ಳೆ, ಅತಿ ಉತ್ಸಾಹಕ್ಕೆ ಈ ವರ್ಷದ ಹಬ್ಬ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ ಪ್ರತಿದಿನದ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಲು ಈ ಮನರಂಜನೆ ಕಾರ್ಯಕ್ರಮಗಳು ಸುಗ್ಗಿಯ ನಂತರ ಜನರನ್ನು ಒಂದೆಡೆ ಸೇರಿಸಿ ಸಂತೋಷದಿಂದ ಇರಲು ಸಾಕ್ಷಿಯಾಗಿದೆ.
ವರದಿ; ಶಾನು ಯಲಿಗಾರ
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…