Latest

ಪೊಲೀಸ್ ಜೀಪ್ ನೋಡಿ ಎಸ್ಕೇಪ್ ಆಗಲು ಹೋದ ಇಬ್ಬರು ಖದೀಮರು; 7,55,000/-ರೂ. ಮೌಲ್ಯದ 08 ದ್ವಿಚಕ್ರ ವಾಹನಗಳು ಪೊಲೀಸ್ ವಶಕ್ಕೆ.

ಮಾಲೂರು : ದಿನಾಂಕ:28-01-2025 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮಾಲೂರು ಠಾಣಾ ಪಿ.ಎಸ್.ಐ. ಶ್ರೀಮತಿ ಗೀತಮ್ಮ, ಮತ್ತು ಅವರ ತಂಡದವರದ ಕೋದಂಡಪಾಣಿ, ಅನಂತಮೂರ್ತಿ ರವರು ಮಾಲೂರು ಟೌನ್ ನ ಹೊಸೂರು ರಸ್ತೆಯ ಇಂದಿರಾನಗರದ ಕ್ರಾಸ್ ನ ಬಳಿ ಗಸ್ತಿನಲ್ಲಿದ್ದಾಗ ಯಾರೋ ಇಬ್ಬರು ಆಸಾಮಿಗಳು ಹೊಸೂರು ರಸ್ತೆಯಿಂದ ಮಾಲೂರು ಟೌನ್ ಕಡೆಗೆ ಒಂದು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಪೊಲೀಸ್ ಜೀಪ್ ಅನ್ನು ನೋಡಿ ಪುನಃ ವಾಪಸ್ಸು ಹೋಗಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದಾಗ ಅನುಮಾನ ಬಂದು ಸದರಿ ಆಸಾಮಿಗಳಿಬ್ಬರನ್ನು ಮತ್ತು ಪಲ್ಸರ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಕೂಲಂಕುಶವಾಗಿ ಆಸಾಮಿಗಳನ್ನು ಅವರ ಹೆಸರು ಮತ್ತು ವಿಳಾಸದ ಬಗ್ಗೆ ಹಾಗೂ ಅವರ ವಶದಲ್ಲಿದ್ದ ಪಲ್ಸರ್ ದ್ವಿಚಕ್ರ ವಾಹನದ ಬಗ್ಗೆ ವಿಚಾರಣೆ ಮಾಡಲಾಗಿ

1) ಅಜಯ್ ಜಿ, ಬಿನ್. ಲೇಟ್ ಗೋಪಾಲ್, 21 ವರ್ಷ, ಟ್ರೋಲೇಕ್ಸ್ ಎಂಬ ಖಾಸಗಿ ಕಂಪನಿಯಲ್ಲಿಕೆಲಸ, ವಾಸ:2ನೇ ಮಹಡಿ, ಮಾರೆಮ್ಮ ದೇವಾಲಯದ ಬಳಿ, 2ನೇ ಬೀದಿ, ಪಾರ್ವತಿನಗರ, ಹೆಬ್ಬಗೋಡಿ, ಬೆಂಗಳೂರು ನಗರ.

2) ಕೊನೇಟಿ ಪೌಲು ರಾಜ್ @ ಪೌಲ್ ರಾಜ್ @ ರಾಜು ಬಿನ್. ಲೇಟ್ ನಾರಾಯಣ, 27 ವರ್ಷ, ಗಾರೆ ಕೆಲಸ, ಹಾಲಿ ವಾಸ: 5ನೇ ಮನೆ, 3ನೇ ಲೈನ್, ರೈಲ್ ಪೇಟೆ, ಕದಿರಿ ಟೌನ್, (ಶ್ರೀ ಸತ್ಯಸಾಯಿ)ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ ರಾಜ್ಯ. ಸ್ವಂತ ವಿಳಾಸ:ನಂ-131, ರಾಮ್ ನಗರ್, ಪಿರಾಲಾ, ಚಿರಾಲಾ ಟೌನ್, ಪ್ರಕಾಶಂ ಜಿಲ್ಲೆ, ಆಂದ್ರಪ್ರದೇಶ. ಆಗಿದ್ದು ಆರೋಫಿತರು ನೀಡಿದ ಮಾಹಿತಿಯ ಮೇರೆಗೆ ಆರೋಪಿತರು ಮಾಲೂರು, ಬೆಂಗಳೂರು, ಬೇರಕಿ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿ ಅವರ ವಶದಲ್ಲಿದ್ದ ಒಟ್ಟು 8 ವಿವಿಧ ರೀತಿಯ

1) KA-08 Y-0616 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
2) TN.-24 AB-7845 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
3) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್
4) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಆರ್.ಎಕ್ಸ್ .ಜಡ್ ಯಮಹಾ ಕಂಪನಿಯ ಬೈಕ್
5 )KA 51 EZ-1150 ಟಿ.ವಿ.ಎಸ್. ವಿಕ್ಟರ್ ದ್ವಿಚಕ್ರ ವಾಹನ
6) KA 05 EZ-4116 ಟಿ.ವಿ.ಎಸ್. ಎಕ್ಸ್. ಎಲ್. ದ್ವಿಚಕ್ರ ವಾಹನ
7) KA-51 JC-2883
8) KA – 08 V-7306 ಬಜಾಜ್ ಪಲ್ಸರ್ 150 ಡಿ.ಟಿ.ಎಸ್. ದ್ವಿಚಕ್ರ ವಾಹನ ಸೇರಿ ಒಟ್ಟು 755000/-ರೂಗಳ ಮೌಲ್ಯದ ಬೆಲೆ ಬಾಳುವ ಮೇಲ್ಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಸಿ.ಆರ್. ಮತ್ತು ಹೆಚ್.ಸಿ. ಜಗದೀಶ್ ಹಾಗೂ ಎಂ. ಹೆಚ್. ನಾಗ್ಲೆ, ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೀತಮ್ಮ, ವರಲಕ್ಷ್ಮಮ್ಮ, ಮತ್ತು ಎ.ಎಸ್.ಐ. ಮುನೇಗೌಡ, ವೆಂಕಟೇಶ್, ಅಪರಾಧ ವಿಭಾಗದ ಸಿಬ್ಬಂದಿ ಕೋದಂಡಪಾಣಿ, ಅನಂತಮೂರ್ತಿ, ಅಶೋಕ್, ಅನಂತ್, ಕಾನ್ಸ್ ಟೇಬಲ್ ಮೋಹನ್, ವೆಂಕಟೇಶಪ್ಪ, ರಾಜೇಂದ್ರಪ್ರಸಾದ್, ಮಾಂತೇಶ್ ಮಡಿಕೇಶ್ವರ, ಮುನಿಕೃಷ್ಣಪ್ಪ, ನವೀನ್, ನವೀನ್ ಕುಮಾರ್ ಹಾಗೂ ಗೃಹರಕ್ಷಕ ಸಿಬ್ಬಂದಿಯವರಾದ ಕುಮಾರ್ ಹಾಗೂ ಹನುಮಂತಪ್ಪ ರವರ ತಂಡ ಭಾಗವಹಿಸಿದ್ದಾರೆ.

ಈ ಕಾರ್ಯಾಚರಣೆ ಮಾಡಿರುವ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

7 hours ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

7 hours ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

8 hours ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

1 day ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

1 day ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

1 day ago