
ಬೆಂಗಳೂರು ನಗರದಲ್ಲಿ ನಕಲಿ ಸಿಗರೇಟು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ದುಬೈನಿಂದ ಅಕ್ರಮವಾಗಿ ಸಿಗರೇಟು ತರಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ಕಣ್ಣೂರು ಮೂಲದ ಮೊಹಮ್ಮದ್ ಸಾಹೀರ್ ಮತ್ತು ಅಬ್ದುಲ್ ರಜಾಕ್ ಎಂದು ಗುರುತಿಸಲಾಗಿದೆ. ಈ ದುಬೈನಿಂದ ಕಡಿಮೆ ಬೆಲೆಯಲ್ಲಿ ನಕಲಿ ಸಿಗರೇಟು ಖರೀದಿಸಿ, ಬೃಹತ್ ಲಾಭಕ್ಕಾಗಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು.
ಸೂಟ್ಕೇಸ್ಗಳ ಮೂಲಕ ಕೆ.ಜಿ. ಲೆಕ್ಕದಲ್ಲಿ ಸಿಗರೇಟುಗಳನ್ನು ಬೆಂಗಳೂರಿಗೆ ತಂದು, ಸ್ಥಳೀಯ ಮಟ್ಟದಲ್ಲಿ ವಿವಿಧ ಮಾರ್ಗಗಳಿಂದ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದರು. ಪ್ರತಿ ಪ್ಯಾಕೆಟ್ನ್ನು ₹70ಕ್ಕೆ ಖರೀದಿಸಿ ₹175ಕ್ಕೆ ಮಾರಾಟ ಮಾಡುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ದಾಳಿಯಲ್ಲಿ ಸುಮಾರು ₹11 ಲಕ್ಷ ಮೌಲ್ಯದ 62 ಸಾವಿರ ನಕಲಿ ಸಿಗರೇಟು ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲಾಸಿಪಾಳ್ಯ ಪ್ರದೇಶದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ರೂಮ್ ಮಾಡಿಕೊಂಡು ಈ ವ್ಯವಹಾರ ನಡೆಸುತ್ತಿದ್ದರೆಂದು ತನಿಖೆಯಿಂದ ಬಹಿರಂಗವಾಗಿದೆ.
ಕಲಾಸಿಪಾಳ್ಯ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನಗರದಾದ್ಯಂತ ನಕಲಿ ಸಿಗರೇಟ್ ತರುವ ಜಾಲವಿದ್ದರೆ ಎಂಬುದು ತನಿಖೆಯಲ್ಲಿ ಇನ್ನು ಮುಂದೆ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.