Cinema

ಸಾಹಸ ದೃಶ್ಯ ವೇಳೆ ದುರ್ಘಟನೆ: ಸ್ಟಂಟ್ ಮಾಸ್ಟರ್ ರಾಜು ಅವಘಡದಲ್ಲಿ ಸಾವು

ಚೆನ್ನೈ: ಪಾ. ರಂಜಿತ್ ನಿರ್ದೇಶನದಲ್ಲಿ ನಟ ಆರ್ಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಹೊಸ ಚಿತ್ರವೊಂದರ ಚಿತ್ರೀಕರಣದ ವೇಳೆ ಭೀಕರ ದುರಂತ ಸಂಭವಿಸಿದ್ದು, ಪ್ರಸಿದ್ಧ ಸ್ಟಂಟ್ಮ್ಯಾನ್ ರಾಜು ಅವರು ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ಶೂಟಿಂಗ್ ಸೆಟ್ನಲ್ಲಿ ನಡೆದಿದೆ. ಚಿತ್ರೀಕರಣದ ಭಾಗವಾಗಿ ಕಾರು ಉರುಳಿಸುವ ಅಪಾಯಕಾರಿ ಸಾಹಸದ ದೃಶ್ಯವೊಂದನ್ನು ಚಿತ್ರಿಸಲು ನಿರ್ಧರಿಸಲಾಗಿತ್ತು. ಈ ದೃಶ್ಯದ ವೇಳೆ ಕೇವಲ ಸೆಕೆಂಡುಗಳ ವ್ಯತ್ಯಾನದಲ್ಲಿ ನಿಯಂತ್ರಣ ತಪ್ಪಿದ ಕಾರು ತೀವ್ರವಾಗಿ ಉರುಳಿ ರಾಜು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಅಸ್ಥಾನದಲ್ಲಿಯೇ ಕೊನೆಯುಸಿರೆಳೆದರು.

ಈ ದುಃಖದ ಸುದ್ದಿ ಹಿಂದೂ ಸಿನಿಮಾ ಇಂಡಸ್ಟ್ರಿಯಲ್ಲಿ ಆಘಾತ ತರಿಸಿದೆ. ನಟ ವಿಶಾಲ್ ಅವರು ತಮ್ಮ ಆಪ್ತರಾಗಿದ್ದ ರಾಜು ಅವರ ಸಾವು ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಇಂದು ಬೆಳಗ್ಗೆ ಈ ಸುದ್ದಿ ಕೇಳಿ ಶಾಕ್‌ನಲ್ಲಿದ್ದೇನೆ. ರಾಜು ನನ್ನ ಅನೇಕ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಮಾಡಿದ್ದರು. ಅವರು ಧೈರ್ಯವಂತರು, ನಿಷ್ಠಾವಂತರು ಮತ್ತು ತಮ್ಮ ಕೆಲಸದ ಬಗ್ಗೆ ಅಪಾರವಾದ ಬದ್ಧತೆ ಹೊಂದಿದ್ದರು. ಈ ನಷ್ಟವನ್ನು ಸಹಿಸಲಾರದೆ ಇದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ರಾಜು ಅವರು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಹಲವು ಪ್ರಮುಖ ಚಿತ್ರಗಳಿಗಾಗಿ ಸಾಹಸ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ, ಸಾಹಸ ಮತ್ತು ನಿಭಾಯಿಸಿದ ಅಪಾಯಕಾರಿ ದೃಶ್ಯಗಳು ಅವರಿಗೆ ವಿಶಿಷ್ಟ ಸ್ಥಾನವನ್ನು ನೀಡಿದವು.

ಚಿತ್ರರಂಗದಲ್ಲಿ ಸುರಕ್ಷತೆ ವಿಷಯವಾಗಿ ಮತ್ತೊಮ್ಮೆ ಚರ್ಚೆ ನಡೆಯುತ್ತಿರುವ ಈ ಘಟನೆ, ಸ್ಟಂಟ್ ಕಲಾವಿದರ ಜೀವದ ಅಪಾಯದ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ರಾಜು ಅವರ ನಿಧನವು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

nazeer ahamad

Recent Posts

ಅಭಿಮಾನಿಗಳ ಮಾತಿಗೆ ಸಂಯಮ ತರಲು ದರ್ಶನ್ ಜೊತೆ ಮಾತನಾಡುತ್ತೇನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ”

ಮಂಡ್ಯ, ಜುಲೈ 31: "ನಟ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿತನದ ಮೂಲಕ ಕೆಟ್ಟ ಕಾಮೆಂಟ್‌ಗಳು ಮಾಡುತ್ತಿರುವುದು ಅನಾವಶ್ಯಕ.…

1 hour ago

ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೃಹತ್ ನಿರ್ಲಕ್ಷ್ಯ: ಟಿಕೆಟ್ ನೀಡದೇ ಮೊಬೈಲ್ ಬಳಕೆ, ಸಿಬ್ಬಂದಿಗೆ ಅಮಾನತು

ಯಾದಗಿರಿ: ಪ್ರಯಾಣಿಕರ ಪಯಣಕ್ಕೆ ಅವಶ್ಯಕವಾದ ಟಿಕೆಟ್ ನೀಡದೆ, ಸಾರ್ವಜನಿಕ ಸೇವೆಯ ಹೊಣೆಗಾರಿಕೆಯನ್ನು ಕಡೆಗಣಿಸಿದ ಘಟನೆಯೊಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ…

2 hours ago

ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು.!

ಪಾಟ್ನಾ, ಜುಲೈ 31 – ಬಿಹಾರ ರಾಜಧಾನಿ ಪಾಟ್ನಾದ ಜಾನಿಪುರ ಪ್ರದೇಶದಲ್ಲಿ ನಡೆದಿರುವ ಒಂದು ಕ್ರೂರ ಮತ್ತು ಮನುಷ್ಯತ್ವವಿರೋಧಿ ಘಟನೆ…

3 hours ago

ಡೆಂಗ್ಯೂ ಸೋಂಕಿನಿಂದ ನಟಿ ರಾಧಿಕಾ ಶರತ್ ಕುಮಾರ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ?

ಚೆನ್ನೈ: ಕಲಾವಿದರ ಜಗತ್ತಿನಲ್ಲಿ ಒಂದು ದುಃಖದ ಸುದ್ದಿ – ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ರಾಧಿಕಾ ಶರತ್ ಕುಮಾರ್…

4 hours ago

“ತುಮಕೂರಿನಲ್ಲಿ ವಿದ್ಯಾರ್ಥಿಗೆ 10 ಸಾವಿರ ಆಮಿಷ ನೀಡಿ ಲೈಂಗಿಕ ಕಿರುಕುಳ: ಪ್ರಿನ್ಸಿಪಾಲ್‌ ಬಂಧನ”

ತುಮಕೂರು: ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್‌ ಎನ್ನುವವನು ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿ, “ನಾನು 10 ಸಾವಿರ ರೂಪಾಯಿ ಕೊಡ್ತೀನಿ, ಬಾ”…

4 hours ago

ಆರ್ಥಿಕ ಸಂಕಷ್ಟದಿಂದ ಆಘಾತಕರ ನಿರ್ಧಾರ: ಮಗುವಿಗೆ ಇಲಿ ಪಾಷಾಣವಿಲ್ಲಿ ಟೀ ಕುಡಿಸಿ ತಾಯಿಯ ಆತ್ಮಹತ್ಯೆ ಯತ್ನ”

ಬೆಂಗಳೂರು: ಮನೆಗೂಟದ ಕಲಹ, ಆರ್ಥಿಕ ಸಂಕಷ್ಟಗಳು ಇನ್ನೊಂದು ಭೀಕರ ಘಟನೆಗೆ ಕಾರಣವಾಗಿವೆ. ತಾಯಿಯೊಬ್ಬಳು ತನ್ನ ಮಗುಗೂ ಸಹ ಇಲಿ ಪಾಷಾಣ…

5 hours ago