Latest

“ಐಟಿಐ ಕಾಲೇಜಿನಲ್ಲಿ ನಿರ್ಲಕ್ಷ್ಯದ ಛಾಯೆ: ವಿದ್ಯಾರ್ಥಿಗಳಿಗೆ ತಲುಪದೆ ಗೋದಾಮಿನಲ್ಲಿ ಹಾಳಾಗುತ್ತಿರುವ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು”

ಗೌರಿಬಿದನೂರು: ಸರ್ಕಾರ ಎಸ್‌ಸಿ, ಎಸ್‌ಟಿ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ, ಶೂ, ಬ್ಯಾಗ್, ಪುಸ್ತಕಗಳು ಮತ್ತು ತರಬೇತಿ ಪರಿಕರಗಳನ್ನು ಒದಗಿಸುತ್ತಿದೆ. ಆದರೆ ಈ ಉಪಕರಣಗಳು ವಿದ್ಯಾರ್ಥಿಗಳಿಗೆ ತಲುಪುವುದಕ್ಕೆ ಮುನ್ನವೇ ಗೋದಾಮಿನಲ್ಲಿ ಹಾಳಾಗಿ ಬಿದ್ದಿದ್ದರಿಂದ ತುಕ್ಕು ಹಿಡಿದು ನಾಶವಾಗುತ್ತಿವೆ. ಈ ಶೋಚನೀಯ ದೃಶ್ಯವು ಗೌರಿಬಿದನೂರು ನಗರದ ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

ಕೋಟೆ ಪ್ರದೇಶದಲ್ಲಿರುವ ಈ ಐಟಿಐ ಕಾಲೇಜಿನಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಕಟಿಂಗ್ & ಸೊಯಿಂಗ್ ಕೋರ್ಸ್‌ಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅವರ ಕಲಿಕೆಗೆ ಬೇಕಾದ ಮೂಲಭೂತವಾದ ಸಾಮಗ್ರಿಗಳೇ ಹಾಗೆ ಬಿದ್ದಿರುವುದು ಈ ಶಿಕ್ಷಣ ವ್ಯವಸ್ಥೆಯ ಅಡಚಣೆಗೇನು ಎಂಬ ಪ್ರಶ್ನೆ ಮೂಡಿಸುತ್ತಿದೆ.

ಕಾಲೇಜಿಗೆ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ನೂತನ ಕಟ್ಟಡದಲ್ಲಿ ತರಬೇತಿ ನಡೆಯುತ್ತಿದ್ದರೂ, ಹಳೆಯ ಕಟ್ಟಡವನ್ನು ಕಚೇರಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇದೇ ಕಟ್ಟಡದ ಕೊಠಡಿಗಳಲ್ಲಿ ಸರ್ಕಾರದಿಂದ ಬಂದ ಸಮವಸ್ತ್ರಗಳು, ಶೂಗಳು, ಬ್ಯಾಗ್‌ಗಳು, ತರಬೇತಿ ಉಪಕರಣಗಳು, ಬುಕ್ಸ್ ಹಾಗೂ ಸಿಬ್ಬಂದಿಗೆ ಬೇಕಾದ ಮೇಜು-ಕುರ್ಚಿಗಳು ವರ್ಷಗಳಿಂದ ಬೀಗ ಹಾಕಿದ ಕೊಠಡಿಗಳಲ್ಲೇ ಧೂಳು ಹಿಡಿದು ಬಿದ್ದಿವೆ.

ಸ್ಥಳೀಯರ ಆಕ್ರೋಶವನ್ನೂ ಇದರತ್ತ ಸೆಳೆಯುತ್ತಿದೆ. “ಇವೆಲ್ಲವನ್ನೂ ವಿದ್ಯಾರ್ಥಿಗಳಿಗೆ ನೀಡಬೇಕಾದ್ದಾಗಿತ್ತು. ಆದರೆ ಇವು ದೊರೆಯದೆ ವಿದ್ಯಾರ್ಥಿಗಳು ಹಳೆಯವನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ರೂಪಾಯಿಗಳ ಸರಕಸರು ಗೋದಾಮಿನಲ್ಲಿ ಹಾಳಾಗುತ್ತಿರುವುದು ದುಃಖಕರ.

ಹಳೆಯ ಕಟ್ಟಡದ ಇತರ ಭಾಗಗಳ ಸ್ಥಿತಿಯೂ ನೋವಿಗೆ ಕಾರಣವಾಗಿದ್ದು, ಕೊಠಡಿಗಳು ಪಾಳು ಬಿದ್ದಂತಾಗಿವೆ, ಶೌಚಾಲಯಗಳು ನಿರ್ಲಕ್ಷ್ಯದಿಂದ ಕೆಸರುವಣಿಯಾಗಿ ಮಾರ್ಪಟ್ಟಿವೆ. ಗೋಡೆಗಳಲ್ಲಿ ಗುಟ್ಕಾ ಕಲೆಗಳು ಕಣ್ಣಿಗೆ ಬೀಳುತ್ತವೆ. ಕಿಟಕಿಗಳಿಗೆ ಕೋತಿಗಳಿಂದ ರಕ್ಷಣೆಗಾಗಿ ಮುಳ್ಳಿನ ಕಡ್ಡಿಗಳು ಅಳವಡಿಸಲಾಗಿದೆ. ಕೆಲವರು ಈ ಕಟ್ಟಡ ಅಕ್ರಮ ಚಟುವಟಿಕೆಗಳಿಗೆ ಸ್ಥಳವಾಗಿರಬಹುದೆಂಬ ಅನುಮಾನವೂ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ಚಂದ್ರು ಅವರು, “ಇತ್ತೀಚೆಗೆ ಸರ್ಕಾರದಿಂದ ವಿತರಣೆಗೆ ಅನುಮತಿ ಲಭ್ಯವಾಗಿದೆ. ತಾಲ್ಲೂಕಿನ ಇತರ ಐಟಿಐಗಳಿಗೆ ಸಹ ಇವು ವಿತರಿಸಲಾಗಬೇಕು. ಶೀಘ್ರದಲ್ಲೇ ಈ ಸಾಮಗ್ರಿಗಳ ವಿತರಣೆಯನ್ನು ಆರಂಭಿಸುತ್ತೇವೆ,” ಎಂದು ಹೇಳಿದ್ದಾರೆ.

ಆದರೆ ಇಲ್ಲಿ ಎತ್ತಲಾಗುತ್ತಿರುವ ಪ್ರಶ್ನೆ ಏನಂದರೆ — ಈ ಸಾಮಗ್ರಿಗಳು ವರ್ಷಗಳ ಕಾಲ ವಿದ್ಯಾರ್ಥಿಗಳಿಂದ ದೂರವಿದ್ದೇನು? ಅದನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳ ಜವಾಬ್ದಾರಿಯೇನು? ಸರಕಾರದ ಯೋಜನೆಗಳು ಜಾರಿಗೆ ಬರದೆ ಕಾಗದದಲ್ಲೇ ಉಳಿದರೆ, ವಿದ್ಯಾರ್ಥಿಗಳ ಗುರಿ ಹೇಗೆ ಸಾದ್ಯ?

ಸಮಯಕ್ಕೆ ಮುನ್ನ ನೆರವಿನ ವಸ್ತುಗಳು ತಲುಪದಿದ್ದರೆ, ಸಹಾಯವೀಗ ಸಾಧ್ಯವಲ್ಲ. ಈ ಪ್ರಕರಣ ಸಂಬಂಧಿತ ಇಲಾಖೆಯು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಎಲ್ಲರ ಆಶಯ. ವರದಿ:ಅವಿನಾಶ್

nazeer ahamad

Recent Posts

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

2 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

2 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

2 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

3 hours ago

ಗೌರಿಬಿದನೂರಿನಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಬಳಕೆ ವಿರುದ್ಧ ದಾಳಿ – 36 ಸಿಲಿಂಡರ್‌ಗಳು ಜಪ್ತಿ

ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…

3 hours ago