Latest

ಸರಣಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಬಂಧಿತ, ಆಭರಣ ವಶ”

ಹುಬ್ಬಳ್ಳಿ: ನಗರದ ಎಪಿಎಂಸಿ ಈಶ್ವರನಗರ, ಸಮೃದ್ಧಿ ಬಡಾವಣೆ, ಎಸ್.ಆರ್ ನಗರ, ಅಂಕೋಲೆಕರ್ ಲೇಔಟ್ ಮತ್ತು ಎಂ.ಐ.ಜಿ ಕಾಲನಿಗಳಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣದಲ್ಲಿ ಮೂವರನ್ನು ಬಂಧಿಸಿ, ಓರ್ವ ಅಪ್ರಾಪ್ತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಕಳ್ಳತನ ಹಾಗೂ ವಶಪಡಿಸಿಕೊಂಡ ಸರಕುಗಳು

2024ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈ ಭಾಗದಲ್ಲಿ ಸರಣಿ ಕಳ್ಳತನಗಳು ನಡೆದಿದ್ದವು. ತನಿಖೆ ನಡೆಸಿದ ಎಪಿಎಂಸಿ ನವನಗರ ಠಾಣೆ ಪೊಲೀಸರು ಸಿದ್ದಪ್ಪ ಅಂಬಿಗೇರ, ವಿಷ್ಣು ಅಂಬಿಗೇರ ಮತ್ತು ಕುನಾಲಸಿಂಗ್ ಎಂಬುವವರನ್ನು ಬಂಧಿಸಿದ್ದಾರೆ. ಈಚೆಗೆ ಬಂಧಿತರಿಂದ 60 ಗ್ರಾಂ ತೂಕದ ಬಂಗಾರ (ರೂ. 4,50,000 ಮೌಲ್ಯ), 360 ಗ್ರಾಂ ತೂಕದ ಬೆಳ್ಳಿ ಆಭರಣ (ರೂ. 37,000 ಮೌಲ್ಯ) ಮತ್ತು ಕಳ್ಳತನಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಕಾರ್ಯಾಚರಣೆ

ಈ ಕಾರ್ಯಾಚರಣೆಯನ್ನು ಎಪಿಎಂಸಿ ನವನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಮಿವುಲ್ಲಾ ಕೆ. ಅವರ ನೇತೃತ್ವದಲ್ಲಿ ಪಿಎಸ್‌ಐ ದೇವೇಂದ್ರ ಮಾವಿನಿಂಡಿ, ಎಂ.ಬಿ ಈಟಿ ಹಾಗೂ ಸಿಬ್ಬಂದಿಗಳಾದ ರವಿ ಆರ್. ಹೊಸಮನಿ, ಬೀರನೂರ, ಸಿ.ವೈ. ಬಕ್ಕಸದ, ಬಿ.ಎಸ್. ಮನ್ನೂರ ಮತ್ತು ತಾಂತ್ರಿಕ ವಿಭಾಗದ ಎಂ.ಎಸ್. ಚಿಕ್ಕಮಠ, ಆರ್.ಕೆ. ಭಡಂಕರ, ರವಿ ಗೋಮಪ್ಪನವರ ನಡೆಸಿದರು.

ಪೊಲೀಸರ ಕಾರ್ಯಚರಣೆ ಯಶಸ್ವಿಯಾಗಿದ್ದು, ಸ್ಥಳೀಯ ನಿವಾಸಿಗಳು ತೋಂದರೆಮುಕ್ತರಾಗಿದ್ದಾರೆ.

nazeer ahamad

Recent Posts

ಪೊಲೀಸ್ ಠಾಣೆಯಲ್ಲೇ ಕ್ಲರ್ಕ್ ಜೊತೆ ಲೇಡಿ ಕಾನ್ಸ್ಟೇಬಲ್ ರೋಮ್ಯಾನ್ಸ್: ವೈರಲ್ ವಿಡಿಯೋ ಬಳಿಕ ಕಾನ್ಸ್‌ಟೇಬಲ್ ಅಮಾನತು

ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಒರೈ ಪೊಲೀಸ್ ಠಾಣೆಯಲ್ಲಿ ನಡೆದಿರುವ ಎನ್ನಲಾದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.…

4 hours ago

ಶಾಮೀರ್‌ಪೇಟ ತಹಶೀಲ್ದಾರ್ ಸುಚಾರಿತಾ ಮನೆ ಮೇಲೆ ಎಸಿಬಿ ದಾಳಿ – ₹5.05 ಕೋಟಿ ಮೌಲ್ಯದ ಆಸ್ತಿಗಳ ಪತ್ತೆ

ಶಾಮೀರ್‌ಪೇಟ ವ್ಯಾಪ್ತಿಯ ತಹಶೀಲ್ದಾರ್ ತುಮ್ಮಕೋಮ್ಮ ಸುಚಾರಿತಾ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ…

4 hours ago

ಅಂಗನವಾಡಿಯಲ್ಲೇ ಅಮಾನವೀಯ ಕೃತ್ಯ: ಮಗುವಿನ ಎದೆಗೆ ಕಾಲಿನಿಂದ ಒದ್ದ ಕಾರ್ಯಕರ್ತೆ, ವಿಡಿಯೋ ವೈರಲ್

ಮಕ್ಕಳ ಆರೈಕೆ ಮತ್ತು ಸುರಕ್ಷತೆಗೆ ಮೀಸಲಾಗಿರುವ ಅಂಗನವಾಡಿ ಕೇಂದ್ರದಲ್ಲೇ ಪುಟ್ಟ ಮಗುವಿನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ…

4 hours ago

ಲಿವ್-ಇನ್ ಸಂಬಂಧದ ದುರಂತ ಅಂತ್ಯ: ಲವ್ ಜಿಹಾದ್ ಗೆ ಮತ್ತೊಂದು ಬಲಿ, ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣ ಚರ್ಚೆಗೆ ಗ್ರಾಸ

ಗುಜರಾತಿನ ರಾಜ್‌ಕೋಟ್‌ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…

22 hours ago

ಸದಾ ಶೀಲ ಶಂಕಿಸುತ್ತಿದ್ದವನು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ..!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…

22 hours ago

ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದ ನಿವೃತ್ತ ಸೈನಿಕ; ₹4 ಕೋಟಿ ಆಸ್ತಿಯನ್ನು ತಿರುಪತಿ ದೇವರಿಗೆ ದಾನ ಮಾಡಿದ ಹೃದಯವಿದ್ರಾವಕ ನಿರ್ಧಾರ

ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…

22 hours ago