Latest

ಮೂರನೇ ಮದುವೆ; ಗ್ರಾಮ ಆಡಳಿತ ಅಧಿಕಾರಿಯಿಂದ 5 ಲಕ್ಷ ವರದಕ್ಷಿಣೆ ಬೇಡಿಕೆ: ಪ್ರಕರಣ ದಾಖಲು

ಕೊಟ್ಟೂರು:- ನನಗೆ ನಿನ್ನ ಜೊತೆ ಜೀವನ ನಡೆಸಲು ತುಂಬಾ ಕಷ್ಟ ಆಗುತ್ತಿದೆ ನೀನು ನನ್ನ ಜೊತೆ ಇರಬೇಕೆಂದರೆ 5 ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಜೀವನ ಮುಂದುವರೆಯುತ್ತದೆ ಇಲ್ಲವಾದರೆ ವಿಚ್ಛೇದನ ನೀಡಬೇಕೆಂದು ಪ್ರತಿ ದಿನ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆಂದು ಪತ್ನಿ ಜ್ಯೋತಿ ತನ್ನ ಆರೋಪಿ ಪತಿ ಸಣ್ಣ ಮಾರೆಣ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ :
ಸಣ್ಣ ಮಾರೆಣ್ಣ ಎಂಬುವ ವ್ಯಕ್ತಿ ಮೂಲ ಹೊಸಪೇಟೆ ನಿವಾಸಿ ಈತನು ಕೂಡ್ಲಿಗಿ ತಾಲೂಕಿನ ಗುಂಡ ಮುಣುಗು ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ(VA)ಯಾಗಿ ಕೆಲಸ ನಿರ್ವಸುತ್ತಿದ್ದಾನೆ ಈತನು 13 ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದ ನಿವಾಸಿ ಜ್ಯೋತಿ ಎಂಬ ಮಹಿಳೆ ಜೊತೆ ವಿವಾಹ ಆಗಿದ್ದನು ಈ ವಿವಾಹ ಆಗಿ ಮೂರೇ ವರ್ಷಕ್ಕೆ ಗುಟ್ಟಾಗಿ ಮತ್ತೊಂದು ವಿವಾಹ ಆಗಿದ್ದಾನೆ ಎಂದು ತಿಳಿದ ಪತ್ನಿಯು ವಿಚಾರಿಸಿದಾಗ ಹೌದು ಇದು ನನ್ನ ಜೀವನ ನನ್ನ ಇಷ್ಟ ನಾನು ಎಷ್ಟು ಮದುವೆ ಬೇಕಾದರು ಆಗುತ್ತೇನೆ ನನ್ನ ವೈಯುಕ್ತಿಕ ವಿಚಾರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಹಾಗೂ ನನಗೆ ಮದುವೆಗೆ ನೀಡಿದ ವರದಕ್ಷಿಣೆ ಸಾಲದು ಇನ್ನು 5 ಲಕ್ಷ ನೀಡಿದರೆ ಮಾತ್ರ ನಿನ್ನ ಜೊತೆ ಇರುತ್ತೇನೆ ಇಲ್ಲವಾದರೆ ಗುಟ್ಟಾಗಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹಲವಾರು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ ಇದರಿಂದಾಗಿ ನಾನು ಕಿರುಕುಳಕ್ಕೆ ಒಳಗಾಗಿ ಪತ್ನಿ ಜ್ಯೋತಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನನ್ನ ವಿವಾಹ ಆಗುವ ಮೊದಲೇ ಈತನಿಗೆ ಬೇರೆ ವಿವಾಹವಾಗಿತ್ತು ಆ ಹುಡಿಗಿಯ ಜೊತೆ ಹೊಂದಾಣಿಕೆ ಇಲ್ಲದ ಕಾರಣ ಮೊದಲನೇ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ನಂತರ ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ನನ್ನ ತಾಯಿಯ ಹತ್ತಿರ ಬಂದು ಕಣ್ಣೀರು ಹಾಕಿ ರಕ್ತ ಸಂಬಂಧದ ನಾಟಕ ಮಾಡಿ ನನ್ನನು ವಿವಾಹ ಆಗಿ ನನಗೆ ಸಹ ಮೋಸ ಮಾಡುತ್ತಿದ್ದಾನೆ. ನನ್ನ ಕೊಲೆ ಮಾಡುವ ಉದ್ದೇಶದಿಂದ ಊಟದಲ್ಲಿ ವಿಷ ಹಾಕುವುದು, ಮಜ್ಜಿಗೆಯಲ್ಲಿ ವಿಷದ ಪೌಡರ್ ಹಾಕುವುದು, ನೀರಿನ ಟ್ಯಾಂಕರ್ ನಲ್ಲಿ ವಿಷ ಸೇರಿಸುವುದು ಹೀಗೆ ಹಲವಾರು ಬಾರಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ಪತ್ನಿ ಜ್ಯೋತಿ ತಿಳಿಸಿದ್ದಾರೆ.

ವರದಿ: ಮಣಿಕಂಠ. ಬಿ

ಭ್ರಷ್ಟರ ಬೇಟೆ

Recent Posts

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

2 weeks ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

3 weeks ago

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

3 months ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

3 months ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

5 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

5 months ago