ಇಳಕಲ್ ತಾಲೂಕಿನ ಕೆಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಳ್ಳಿಕೆರೆ ಗ್ರಾಮದ ದಲಿತ ಕಾಲೊನಿಯ ದುಸ್ಥಿತಿ ಇದು. ಸುಮಾರು ಎರಡು ವರ್ಷಗಳಿಂದ ರಸ್ತೆಯೆಲ್ಲಾ ಚರಂಡಿಮಯ ಆಗಿರುತ್ತದೆ, ಅತ್ತ ಕಡೆಗೆ ಅಧಿಕಾರಿಗಳು ಹೋಗೋದು ನೋಡೋದು ಬಿಟ್ಟರೆ ಸ್ವಚ್ಛತೆ ಮಾಡಿಸುವ ಕೆಲಸ ಇಲ್ಲ. ದಲಿತ ಕಾಲೊನಿ ಸ್ಥಿತಿಗತಿ ನೋಡಿದಾಗ ಚರಂಡಿಗಳೆಲ್ಲಾ ಗಬ್ಬೆದ್ದು ನಾರುತ್ತಿದ್ದು ಅದರ ವಾಸನೆಗೆ ಸರಿಯಾಗಿ ಊಟ ಮಾಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಚಿಕ್ಕ ಪುಟ್ಟ ಮಕ್ಕಳು ಆಡ್ಡಾಡುವ ಜಾಗದಲ್ಲಿ ಕೆಲಸ ಕಾರ್ಯ ಬಿಟ್ಟು ಮಕ್ಕಳನ್ನು ಕಾಯುತ್ತಾ ಜೀವ ಕೈಯಲ್ಲಿ ಇಟ್ಟುಕೊಂಡು ಜೀವನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಾಲೂ ಜನ ಓಡಾಡುವ ರಸ್ತೆ ಇದಾಗಿದ್ದು, ರಸ್ತೆಯಲ್ಲಿಯೇ ಸಂಪೂರ್ಣ ನೀರು ನಿಂತು ಗಬ್ಬೆದ್ದು ನಾರುತಿದ್ದು, ಈ ಅವ್ಯವಸ್ಥೆಯಿಂದ ಗ್ರಾಮದ ಜನರಿಗೆ ಹಲವು ರೋಗಗಳ ಭೀತಿ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಅದೇ ರಸ್ತೆಯಲ್ಲಿಯೇ ದಿನಾಲೂ ಸೈಕಲ್ ಮೋಟಾರ್ ಗಳಿಂದ ಗ್ರಾಮದ ರೈತರು ಮನೆಗೆ ಹಾಗೂ ಹೊಲಗಳಿಗೆ ಈ ದಾರಿಯಲ್ಲಿಯೇ ಹೋಗಬೇಕು. ರಸ್ತೆಯ ಮೇಲೆ ಇರುವ ಈ ಕೊಳಚೆಯ ಪರಿಸ್ಥಿತಿ ನೋಡಿದರೆ ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಸರಿಯಾಗಿ ಇರದೇ ಇರುವುದು ಕಂಡುಬರುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮನಾ ಬಾವಲತ್ತಿ ಗಮನಹರಿಸದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಪಂಚಾಯಿತಿ ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸುತ್ತಿದ್ದು ವರದಿ ಕಂಡ ಮೇಲಾದರೂ ಅಧಿಕಾರಿಗಳು ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ ಅಥವಾ ಘರ್ಸು(ಮರಂ) ಹಾಕುವ ಮೂಲಕ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕು.

Related News

error: Content is protected !!