Corruption

ಜನನ ಪ್ರಮಾಣ ಪತ್ರ ನೀಡಲು 3 ತಿಂಗಳ ಅವಧಿ ಪಡೆದ ನಂತರವೂ ಹಣ ಕೇಳಿದ ಭ್ರಷರು!

ಕುಂದಗೋಳ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ತಂದಿದ್ದೇವೆ ಓದುಗರೆ…!
ಈ ಕಾರ್ಯಾಲಯದಲ್ಲಿ ಪ್ರಮಾಣ ಪತ್ರಗಳಿಗೆ ರೈತರು, ಸಾರ್ವಜನಿಕರು ದುಡ್ಡು ಕೊಟ್ಟರೆ ಮಾತ್ರ ಇಲ್ಲಿ ಅರ್ಜಿಗಳು ವಿಲೇವಾರಿ ಹೊಂದುತ್ತವೆ. ಇಲ್ಲವಾದಲ್ಲಿ ನಾಳೆ ಬಾ ಅಂತ ಹೇಳಿ ಕಳಸುತ್ತಾರೆ. ಇಷ್ಟು ದಿನಗಳವಳಿಗೆ ಅರ್ಜಿ ವಿಲೇವಾರಿ ಹೊಂದಬೇಕು ಎಂದು ತಹಶೀಲ್ದಾರ್ ಕಛೇರಿಯ ಒಳಾಂಗಣ ದಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಹಣ ಕೊಟ್ಟರೆ ಸಾಕು ಬೇಗನೆ ಪ್ರಮಾಣ ಪತ್ರಗಳನ್ನು ವಿತರಸುತ್ತಾರೆ. ಹಾಗಾದರೆ ಬಡವರ ಪಾಡು…?

ಕುಂದಗೋಳ ಮೂಲದ ಪೋಷಕರು ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು 2022ರ ಜೂನ್ ತಿಂಗಳಿನಲ್ಲಿ ಜನನ ಪ್ರಮಾಣತಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸದು ಮೂರು ತಿಂಗಳ ನಂತರ ಅಂದರೇ ಸೆಪ್ಟಂಬರ್ 2022 ರಲ್ಲಿ ಜನನ ಪ್ರಮಾಣ ಪತ್ರವನ್ನು ಸರಕಾರಿ ಕಛೇರಿ ಸಿಬ್ಬಂದಿ ನೀಡಿದ ನಂತರ ಐವತ್ತು ರೂಪಾಯಿ ನೀಡುವಂತೆ ಹೇಳಿರುತ್ತಾನೆ. ಜನನ ಪ್ರಮಾಣ ಪತ್ರ ನೀಡಲು ಮೂರು ತಿಂಗಳ ಕಾಲ ಸಮಯವನ್ನು ತೆಗದುಕೂಂಡಿದ್ದಾರೆ ಎಂದರೇ ಎಷ್ಟರಮಟ್ಟಿಗೆ ಸರಕಾರಿ ಕಛೇರಿಗಳಲ್ಲಿ ಕೆಲಸ ಬೇಗ ಸಾಗುತ್ತದೆ? ಮೂರು ತಿಂಗಳ ಅವದಿ ಪಡೆದ ನಂತರವೂ ಹಣ ಕೇಳುತ್ತಿದ್ದಾರೆ ಎಂದರೇ ಇವರುಗಳು ಎಂತ ಲಂಚ ಬಾಕರೀರಾಬೇಕು?

ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಛೇರಿ ಒಳಾಂಗಣದ ನಾಮಫಲಕ ದಲ್ಲಿ ಜನನ ಮತ್ತು ಮರಣ ಪತ್ರದಲ್ಲಿ ಏಳು ದಿನಗಳಿಂದ ಹದಿನೈದು ದಿನಗಳವಳಿಗೆ ಕೊಟ್ಟಿರುವ ಅರ್ಜಿಯನ್ನು ವಿಲೇವಾರಿ ಮಾಡಿ ತಕ್ಷಣ ಪ್ರಮಾಣ ಪತ್ರ ನೀಡಬೇಕು ಎಂದು ನಾಮಫಲಕದಲ್ಲಿ ಗೋಡೆಗೆ ನೇತು ಹಾಕಿದ್ದಾರೆ. ಆದರೆ ಹೆಸರಿಗೆ ಮಾತ್ರ ಅನ್ನಬಹುದು. ಈ ನಾಮಫಲಕ.
ಕುಂದಗೋಳ ತಾಲೂಕಿನ ದಂಡಾಧಿಕಾರಿ ಕಛೇರಿಯಲ್ಲಿ ಸಾಕಷ್ಟು ಪ್ರಮಾಣ ಪತ್ರಗಳು ದೊರೆಯುತ್ತೇವೆ ಅಂತ ಸೇವೆಗಳ ಪಟ್ಟಿ ನಾಮಫಲಕದಲ್ಲಿ ಅಳವಡಿಸಿದ್ದಾರೆ. ಅದರಂತೆ ಈ ಪ್ರಮಾಣ ಪತ್ರಕ್ಕೆ ಇಷ್ಟು ಸರಕಾರಿ ಶುಲ್ಕ ಅಂತ ಹಾಕದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಭ್ರಷ್ಟಾಚಾರಕ್ಕೆ ಇದೊಂದು ಕಾರಣವಾದರೆ ಅಧಿಕಾರಿಗಳು ನಾವು ಕೆಲಸ ಮಾಡಿರುತ್ತೇವೆ ಸ್ವಲ್ಪ ಹಣ ಕೊಡಿ ಅಂತ ಬಾಯಿಬಿಟ್ಟು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅಧಿಕಾರಿಗಳಿಗೆ ಸರಕಾರ ವೇತನ ನೀಡುವುದಿಲ್ಲವ? ಎಂಬ ಪ್ರಶ್ನೆ ಉಳಿದಿದೆ. ಜನಸಾಮಾನ್ಯರ ಪರಿಸ್ಥಿತಿ ಏನು? ಸಾರ್ವಜನಿಕರು ಸರಕಾರಕ್ಕೆ ತೆರಿಗೆ ಹಣ ಪಾವತಿಸುತ್ತಾರೆ. ಅದೇ ತೆರಿಗೆ ಹಣದಿಂದ ಸರಕಾರಿ ಅಧಿಕಾರಿಗಳಿಗೆ ವೇತನ ನೀಡುತ್ತದೆ. ಅಷ್ಟೇಲ್ಲದೆ ಸಂಬಳಗಿಂತ ಗಿಂಬಳಕ್ಕೆ ಕೈ ಚಾಚುತ್ತಾರೆ. ಇಲ್ಲಿನ ಅಧಿಕಾರಿಗಳು. ಜಿಲ್ಲಾಧಿಕಾರಿ ಇತ್ತ ಕಡೆ ಗಮನ ಕೋಡದೇ ಇರುವುದೂಂದು ಕಾರಣ ಅಂತ ಹೇಳಬಹುದು.
ಇದಕ್ಕೆ ಅನುಸಾರವಾಗಿ ದೇಶದ ಪ್ರಧಾನ ಮಂತ್ರಿ “ಮೈ ನಹೀ ಕಾಹೋಂಗ್ ಕಾಣೇ ನೈ ದೇವೋಂಗ್” ಅಂತ ಅಬ್ಬರದ ಭಾಷಣದಲ್ಲಿ ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಜನರು ಪಾಡು ನಿಮ್ಮ ಗಮನಕ್ಕೆ ಬಂದಿಲವ್ವಾ ಅನ್ನೋದು ಒಂದು ಕಡೆಯಾದರೆ, ಭಂಡ ಅಧಿಕಾರಿಗಳ ಲಂಚಾವತಾರ ಬ್ರೇಕ್ ಬಿಳವುದು ಯಾವಾಗ ಇದೊಂದು ಕಡೆ.
ಒಟ್ಟನಲ್ಲಿ ಅಧಿಕಾರಿಗಳು ಹಗಲು ದರೋಡೆಗೆ ಇಳಿದುಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಭ್ರಷ್ಟ ಅಧಿಕಾರಿಗಳ ಅಮಾನತು ಮಾಡಿ ಸೂಕ್ತವಾದ ಕ್ರಮ ಜರುಗಿಸಬೇಕು.

ವರದಿ: ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

6 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

6 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

1 day ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

1 day ago

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು: ಖಾಸಗಿ ಆಸ್ಪತ್ರೆ ಸಿಬ್ಬಂದಿ ವಶಕ್ಕೆ

ಬೆಂಗಳೂರು: ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು…

2 days ago