Corruption

ಜನನ ಪ್ರಮಾಣ ಪತ್ರ ನೀಡಲು 3 ತಿಂಗಳ ಅವಧಿ ಪಡೆದ ನಂತರವೂ ಹಣ ಕೇಳಿದ ಭ್ರಷರು!

ಕುಂದಗೋಳ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ತಂದಿದ್ದೇವೆ ಓದುಗರೆ…!
ಈ ಕಾರ್ಯಾಲಯದಲ್ಲಿ ಪ್ರಮಾಣ ಪತ್ರಗಳಿಗೆ ರೈತರು, ಸಾರ್ವಜನಿಕರು ದುಡ್ಡು ಕೊಟ್ಟರೆ ಮಾತ್ರ ಇಲ್ಲಿ ಅರ್ಜಿಗಳು ವಿಲೇವಾರಿ ಹೊಂದುತ್ತವೆ. ಇಲ್ಲವಾದಲ್ಲಿ ನಾಳೆ ಬಾ ಅಂತ ಹೇಳಿ ಕಳಸುತ್ತಾರೆ. ಇಷ್ಟು ದಿನಗಳವಳಿಗೆ ಅರ್ಜಿ ವಿಲೇವಾರಿ ಹೊಂದಬೇಕು ಎಂದು ತಹಶೀಲ್ದಾರ್ ಕಛೇರಿಯ ಒಳಾಂಗಣ ದಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಹಣ ಕೊಟ್ಟರೆ ಸಾಕು ಬೇಗನೆ ಪ್ರಮಾಣ ಪತ್ರಗಳನ್ನು ವಿತರಸುತ್ತಾರೆ. ಹಾಗಾದರೆ ಬಡವರ ಪಾಡು…?

ಕುಂದಗೋಳ ಮೂಲದ ಪೋಷಕರು ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು 2022ರ ಜೂನ್ ತಿಂಗಳಿನಲ್ಲಿ ಜನನ ಪ್ರಮಾಣತಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸದು ಮೂರು ತಿಂಗಳ ನಂತರ ಅಂದರೇ ಸೆಪ್ಟಂಬರ್ 2022 ರಲ್ಲಿ ಜನನ ಪ್ರಮಾಣ ಪತ್ರವನ್ನು ಸರಕಾರಿ ಕಛೇರಿ ಸಿಬ್ಬಂದಿ ನೀಡಿದ ನಂತರ ಐವತ್ತು ರೂಪಾಯಿ ನೀಡುವಂತೆ ಹೇಳಿರುತ್ತಾನೆ. ಜನನ ಪ್ರಮಾಣ ಪತ್ರ ನೀಡಲು ಮೂರು ತಿಂಗಳ ಕಾಲ ಸಮಯವನ್ನು ತೆಗದುಕೂಂಡಿದ್ದಾರೆ ಎಂದರೇ ಎಷ್ಟರಮಟ್ಟಿಗೆ ಸರಕಾರಿ ಕಛೇರಿಗಳಲ್ಲಿ ಕೆಲಸ ಬೇಗ ಸಾಗುತ್ತದೆ? ಮೂರು ತಿಂಗಳ ಅವದಿ ಪಡೆದ ನಂತರವೂ ಹಣ ಕೇಳುತ್ತಿದ್ದಾರೆ ಎಂದರೇ ಇವರುಗಳು ಎಂತ ಲಂಚ ಬಾಕರೀರಾಬೇಕು?

ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಛೇರಿ ಒಳಾಂಗಣದ ನಾಮಫಲಕ ದಲ್ಲಿ ಜನನ ಮತ್ತು ಮರಣ ಪತ್ರದಲ್ಲಿ ಏಳು ದಿನಗಳಿಂದ ಹದಿನೈದು ದಿನಗಳವಳಿಗೆ ಕೊಟ್ಟಿರುವ ಅರ್ಜಿಯನ್ನು ವಿಲೇವಾರಿ ಮಾಡಿ ತಕ್ಷಣ ಪ್ರಮಾಣ ಪತ್ರ ನೀಡಬೇಕು ಎಂದು ನಾಮಫಲಕದಲ್ಲಿ ಗೋಡೆಗೆ ನೇತು ಹಾಕಿದ್ದಾರೆ. ಆದರೆ ಹೆಸರಿಗೆ ಮಾತ್ರ ಅನ್ನಬಹುದು. ಈ ನಾಮಫಲಕ.
ಕುಂದಗೋಳ ತಾಲೂಕಿನ ದಂಡಾಧಿಕಾರಿ ಕಛೇರಿಯಲ್ಲಿ ಸಾಕಷ್ಟು ಪ್ರಮಾಣ ಪತ್ರಗಳು ದೊರೆಯುತ್ತೇವೆ ಅಂತ ಸೇವೆಗಳ ಪಟ್ಟಿ ನಾಮಫಲಕದಲ್ಲಿ ಅಳವಡಿಸಿದ್ದಾರೆ. ಅದರಂತೆ ಈ ಪ್ರಮಾಣ ಪತ್ರಕ್ಕೆ ಇಷ್ಟು ಸರಕಾರಿ ಶುಲ್ಕ ಅಂತ ಹಾಕದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಭ್ರಷ್ಟಾಚಾರಕ್ಕೆ ಇದೊಂದು ಕಾರಣವಾದರೆ ಅಧಿಕಾರಿಗಳು ನಾವು ಕೆಲಸ ಮಾಡಿರುತ್ತೇವೆ ಸ್ವಲ್ಪ ಹಣ ಕೊಡಿ ಅಂತ ಬಾಯಿಬಿಟ್ಟು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅಧಿಕಾರಿಗಳಿಗೆ ಸರಕಾರ ವೇತನ ನೀಡುವುದಿಲ್ಲವ? ಎಂಬ ಪ್ರಶ್ನೆ ಉಳಿದಿದೆ. ಜನಸಾಮಾನ್ಯರ ಪರಿಸ್ಥಿತಿ ಏನು? ಸಾರ್ವಜನಿಕರು ಸರಕಾರಕ್ಕೆ ತೆರಿಗೆ ಹಣ ಪಾವತಿಸುತ್ತಾರೆ. ಅದೇ ತೆರಿಗೆ ಹಣದಿಂದ ಸರಕಾರಿ ಅಧಿಕಾರಿಗಳಿಗೆ ವೇತನ ನೀಡುತ್ತದೆ. ಅಷ್ಟೇಲ್ಲದೆ ಸಂಬಳಗಿಂತ ಗಿಂಬಳಕ್ಕೆ ಕೈ ಚಾಚುತ್ತಾರೆ. ಇಲ್ಲಿನ ಅಧಿಕಾರಿಗಳು. ಜಿಲ್ಲಾಧಿಕಾರಿ ಇತ್ತ ಕಡೆ ಗಮನ ಕೋಡದೇ ಇರುವುದೂಂದು ಕಾರಣ ಅಂತ ಹೇಳಬಹುದು.
ಇದಕ್ಕೆ ಅನುಸಾರವಾಗಿ ದೇಶದ ಪ್ರಧಾನ ಮಂತ್ರಿ “ಮೈ ನಹೀ ಕಾಹೋಂಗ್ ಕಾಣೇ ನೈ ದೇವೋಂಗ್” ಅಂತ ಅಬ್ಬರದ ಭಾಷಣದಲ್ಲಿ ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಜನರು ಪಾಡು ನಿಮ್ಮ ಗಮನಕ್ಕೆ ಬಂದಿಲವ್ವಾ ಅನ್ನೋದು ಒಂದು ಕಡೆಯಾದರೆ, ಭಂಡ ಅಧಿಕಾರಿಗಳ ಲಂಚಾವತಾರ ಬ್ರೇಕ್ ಬಿಳವುದು ಯಾವಾಗ ಇದೊಂದು ಕಡೆ.
ಒಟ್ಟನಲ್ಲಿ ಅಧಿಕಾರಿಗಳು ಹಗಲು ದರೋಡೆಗೆ ಇಳಿದುಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಭ್ರಷ್ಟ ಅಧಿಕಾರಿಗಳ ಅಮಾನತು ಮಾಡಿ ಸೂಕ್ತವಾದ ಕ್ರಮ ಜರುಗಿಸಬೇಕು.

ವರದಿ: ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago