Corruption

ಜನನ ಪ್ರಮಾಣ ಪತ್ರ ನೀಡಲು 3 ತಿಂಗಳ ಅವಧಿ ಪಡೆದ ನಂತರವೂ ಹಣ ಕೇಳಿದ ಭ್ರಷರು!

ಕುಂದಗೋಳ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ತಂದಿದ್ದೇವೆ ಓದುಗರೆ…!
ಈ ಕಾರ್ಯಾಲಯದಲ್ಲಿ ಪ್ರಮಾಣ ಪತ್ರಗಳಿಗೆ ರೈತರು, ಸಾರ್ವಜನಿಕರು ದುಡ್ಡು ಕೊಟ್ಟರೆ ಮಾತ್ರ ಇಲ್ಲಿ ಅರ್ಜಿಗಳು ವಿಲೇವಾರಿ ಹೊಂದುತ್ತವೆ. ಇಲ್ಲವಾದಲ್ಲಿ ನಾಳೆ ಬಾ ಅಂತ ಹೇಳಿ ಕಳಸುತ್ತಾರೆ. ಇಷ್ಟು ದಿನಗಳವಳಿಗೆ ಅರ್ಜಿ ವಿಲೇವಾರಿ ಹೊಂದಬೇಕು ಎಂದು ತಹಶೀಲ್ದಾರ್ ಕಛೇರಿಯ ಒಳಾಂಗಣ ದಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಹಣ ಕೊಟ್ಟರೆ ಸಾಕು ಬೇಗನೆ ಪ್ರಮಾಣ ಪತ್ರಗಳನ್ನು ವಿತರಸುತ್ತಾರೆ. ಹಾಗಾದರೆ ಬಡವರ ಪಾಡು…?

ಕುಂದಗೋಳ ಮೂಲದ ಪೋಷಕರು ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು 2022ರ ಜೂನ್ ತಿಂಗಳಿನಲ್ಲಿ ಜನನ ಪ್ರಮಾಣತಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸದು ಮೂರು ತಿಂಗಳ ನಂತರ ಅಂದರೇ ಸೆಪ್ಟಂಬರ್ 2022 ರಲ್ಲಿ ಜನನ ಪ್ರಮಾಣ ಪತ್ರವನ್ನು ಸರಕಾರಿ ಕಛೇರಿ ಸಿಬ್ಬಂದಿ ನೀಡಿದ ನಂತರ ಐವತ್ತು ರೂಪಾಯಿ ನೀಡುವಂತೆ ಹೇಳಿರುತ್ತಾನೆ. ಜನನ ಪ್ರಮಾಣ ಪತ್ರ ನೀಡಲು ಮೂರು ತಿಂಗಳ ಕಾಲ ಸಮಯವನ್ನು ತೆಗದುಕೂಂಡಿದ್ದಾರೆ ಎಂದರೇ ಎಷ್ಟರಮಟ್ಟಿಗೆ ಸರಕಾರಿ ಕಛೇರಿಗಳಲ್ಲಿ ಕೆಲಸ ಬೇಗ ಸಾಗುತ್ತದೆ? ಮೂರು ತಿಂಗಳ ಅವದಿ ಪಡೆದ ನಂತರವೂ ಹಣ ಕೇಳುತ್ತಿದ್ದಾರೆ ಎಂದರೇ ಇವರುಗಳು ಎಂತ ಲಂಚ ಬಾಕರೀರಾಬೇಕು?

ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಛೇರಿ ಒಳಾಂಗಣದ ನಾಮಫಲಕ ದಲ್ಲಿ ಜನನ ಮತ್ತು ಮರಣ ಪತ್ರದಲ್ಲಿ ಏಳು ದಿನಗಳಿಂದ ಹದಿನೈದು ದಿನಗಳವಳಿಗೆ ಕೊಟ್ಟಿರುವ ಅರ್ಜಿಯನ್ನು ವಿಲೇವಾರಿ ಮಾಡಿ ತಕ್ಷಣ ಪ್ರಮಾಣ ಪತ್ರ ನೀಡಬೇಕು ಎಂದು ನಾಮಫಲಕದಲ್ಲಿ ಗೋಡೆಗೆ ನೇತು ಹಾಕಿದ್ದಾರೆ. ಆದರೆ ಹೆಸರಿಗೆ ಮಾತ್ರ ಅನ್ನಬಹುದು. ಈ ನಾಮಫಲಕ.
ಕುಂದಗೋಳ ತಾಲೂಕಿನ ದಂಡಾಧಿಕಾರಿ ಕಛೇರಿಯಲ್ಲಿ ಸಾಕಷ್ಟು ಪ್ರಮಾಣ ಪತ್ರಗಳು ದೊರೆಯುತ್ತೇವೆ ಅಂತ ಸೇವೆಗಳ ಪಟ್ಟಿ ನಾಮಫಲಕದಲ್ಲಿ ಅಳವಡಿಸಿದ್ದಾರೆ. ಅದರಂತೆ ಈ ಪ್ರಮಾಣ ಪತ್ರಕ್ಕೆ ಇಷ್ಟು ಸರಕಾರಿ ಶುಲ್ಕ ಅಂತ ಹಾಕದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಭ್ರಷ್ಟಾಚಾರಕ್ಕೆ ಇದೊಂದು ಕಾರಣವಾದರೆ ಅಧಿಕಾರಿಗಳು ನಾವು ಕೆಲಸ ಮಾಡಿರುತ್ತೇವೆ ಸ್ವಲ್ಪ ಹಣ ಕೊಡಿ ಅಂತ ಬಾಯಿಬಿಟ್ಟು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅಧಿಕಾರಿಗಳಿಗೆ ಸರಕಾರ ವೇತನ ನೀಡುವುದಿಲ್ಲವ? ಎಂಬ ಪ್ರಶ್ನೆ ಉಳಿದಿದೆ. ಜನಸಾಮಾನ್ಯರ ಪರಿಸ್ಥಿತಿ ಏನು? ಸಾರ್ವಜನಿಕರು ಸರಕಾರಕ್ಕೆ ತೆರಿಗೆ ಹಣ ಪಾವತಿಸುತ್ತಾರೆ. ಅದೇ ತೆರಿಗೆ ಹಣದಿಂದ ಸರಕಾರಿ ಅಧಿಕಾರಿಗಳಿಗೆ ವೇತನ ನೀಡುತ್ತದೆ. ಅಷ್ಟೇಲ್ಲದೆ ಸಂಬಳಗಿಂತ ಗಿಂಬಳಕ್ಕೆ ಕೈ ಚಾಚುತ್ತಾರೆ. ಇಲ್ಲಿನ ಅಧಿಕಾರಿಗಳು. ಜಿಲ್ಲಾಧಿಕಾರಿ ಇತ್ತ ಕಡೆ ಗಮನ ಕೋಡದೇ ಇರುವುದೂಂದು ಕಾರಣ ಅಂತ ಹೇಳಬಹುದು.
ಇದಕ್ಕೆ ಅನುಸಾರವಾಗಿ ದೇಶದ ಪ್ರಧಾನ ಮಂತ್ರಿ “ಮೈ ನಹೀ ಕಾಹೋಂಗ್ ಕಾಣೇ ನೈ ದೇವೋಂಗ್” ಅಂತ ಅಬ್ಬರದ ಭಾಷಣದಲ್ಲಿ ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಜನರು ಪಾಡು ನಿಮ್ಮ ಗಮನಕ್ಕೆ ಬಂದಿಲವ್ವಾ ಅನ್ನೋದು ಒಂದು ಕಡೆಯಾದರೆ, ಭಂಡ ಅಧಿಕಾರಿಗಳ ಲಂಚಾವತಾರ ಬ್ರೇಕ್ ಬಿಳವುದು ಯಾವಾಗ ಇದೊಂದು ಕಡೆ.
ಒಟ್ಟನಲ್ಲಿ ಅಧಿಕಾರಿಗಳು ಹಗಲು ದರೋಡೆಗೆ ಇಳಿದುಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಭ್ರಷ್ಟ ಅಧಿಕಾರಿಗಳ ಅಮಾನತು ಮಾಡಿ ಸೂಕ್ತವಾದ ಕ್ರಮ ಜರುಗಿಸಬೇಕು.

ವರದಿ: ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

8 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

9 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

21 hours ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

21 hours ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

21 hours ago

ಕೊನೆಗೂ 21 ದಿನಗಳ ಬಳಿಕ ಅಣುಸ್ಥಾವರದ ಮೇಲೆ ಅಮೆರಿಕ ದಾಳಿ! ಇರಾನ್ ಅಣು ಕೇಂದ್ರ ವಿಕಿರಣ ಸೋರಿಕೆ ಭೀತಿ ಹೆಚ್ಚಳ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…

21 hours ago