Corruption

ಜನನ ಪ್ರಮಾಣ ಪತ್ರ ನೀಡಲು 3 ತಿಂಗಳ ಅವಧಿ ಪಡೆದ ನಂತರವೂ ಹಣ ಕೇಳಿದ ಭ್ರಷರು!

ಕುಂದಗೋಳ: ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ತಂದಿದ್ದೇವೆ ಓದುಗರೆ…!
ಈ ಕಾರ್ಯಾಲಯದಲ್ಲಿ ಪ್ರಮಾಣ ಪತ್ರಗಳಿಗೆ ರೈತರು, ಸಾರ್ವಜನಿಕರು ದುಡ್ಡು ಕೊಟ್ಟರೆ ಮಾತ್ರ ಇಲ್ಲಿ ಅರ್ಜಿಗಳು ವಿಲೇವಾರಿ ಹೊಂದುತ್ತವೆ. ಇಲ್ಲವಾದಲ್ಲಿ ನಾಳೆ ಬಾ ಅಂತ ಹೇಳಿ ಕಳಸುತ್ತಾರೆ. ಇಷ್ಟು ದಿನಗಳವಳಿಗೆ ಅರ್ಜಿ ವಿಲೇವಾರಿ ಹೊಂದಬೇಕು ಎಂದು ತಹಶೀಲ್ದಾರ್ ಕಛೇರಿಯ ಒಳಾಂಗಣ ದಲ್ಲಿ ನಾಮಫಲಕ ಅಳವಡಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಹಣ ಕೊಟ್ಟರೆ ಸಾಕು ಬೇಗನೆ ಪ್ರಮಾಣ ಪತ್ರಗಳನ್ನು ವಿತರಸುತ್ತಾರೆ. ಹಾಗಾದರೆ ಬಡವರ ಪಾಡು…?

ಕುಂದಗೋಳ ಮೂಲದ ಪೋಷಕರು ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು 2022ರ ಜೂನ್ ತಿಂಗಳಿನಲ್ಲಿ ಜನನ ಪ್ರಮಾಣತಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸದು ಮೂರು ತಿಂಗಳ ನಂತರ ಅಂದರೇ ಸೆಪ್ಟಂಬರ್ 2022 ರಲ್ಲಿ ಜನನ ಪ್ರಮಾಣ ಪತ್ರವನ್ನು ಸರಕಾರಿ ಕಛೇರಿ ಸಿಬ್ಬಂದಿ ನೀಡಿದ ನಂತರ ಐವತ್ತು ರೂಪಾಯಿ ನೀಡುವಂತೆ ಹೇಳಿರುತ್ತಾನೆ. ಜನನ ಪ್ರಮಾಣ ಪತ್ರ ನೀಡಲು ಮೂರು ತಿಂಗಳ ಕಾಲ ಸಮಯವನ್ನು ತೆಗದುಕೂಂಡಿದ್ದಾರೆ ಎಂದರೇ ಎಷ್ಟರಮಟ್ಟಿಗೆ ಸರಕಾರಿ ಕಛೇರಿಗಳಲ್ಲಿ ಕೆಲಸ ಬೇಗ ಸಾಗುತ್ತದೆ? ಮೂರು ತಿಂಗಳ ಅವದಿ ಪಡೆದ ನಂತರವೂ ಹಣ ಕೇಳುತ್ತಿದ್ದಾರೆ ಎಂದರೇ ಇವರುಗಳು ಎಂತ ಲಂಚ ಬಾಕರೀರಾಬೇಕು?

ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಛೇರಿ ಒಳಾಂಗಣದ ನಾಮಫಲಕ ದಲ್ಲಿ ಜನನ ಮತ್ತು ಮರಣ ಪತ್ರದಲ್ಲಿ ಏಳು ದಿನಗಳಿಂದ ಹದಿನೈದು ದಿನಗಳವಳಿಗೆ ಕೊಟ್ಟಿರುವ ಅರ್ಜಿಯನ್ನು ವಿಲೇವಾರಿ ಮಾಡಿ ತಕ್ಷಣ ಪ್ರಮಾಣ ಪತ್ರ ನೀಡಬೇಕು ಎಂದು ನಾಮಫಲಕದಲ್ಲಿ ಗೋಡೆಗೆ ನೇತು ಹಾಕಿದ್ದಾರೆ. ಆದರೆ ಹೆಸರಿಗೆ ಮಾತ್ರ ಅನ್ನಬಹುದು. ಈ ನಾಮಫಲಕ.
ಕುಂದಗೋಳ ತಾಲೂಕಿನ ದಂಡಾಧಿಕಾರಿ ಕಛೇರಿಯಲ್ಲಿ ಸಾಕಷ್ಟು ಪ್ರಮಾಣ ಪತ್ರಗಳು ದೊರೆಯುತ್ತೇವೆ ಅಂತ ಸೇವೆಗಳ ಪಟ್ಟಿ ನಾಮಫಲಕದಲ್ಲಿ ಅಳವಡಿಸಿದ್ದಾರೆ. ಅದರಂತೆ ಈ ಪ್ರಮಾಣ ಪತ್ರಕ್ಕೆ ಇಷ್ಟು ಸರಕಾರಿ ಶುಲ್ಕ ಅಂತ ಹಾಕದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಭ್ರಷ್ಟಾಚಾರಕ್ಕೆ ಇದೊಂದು ಕಾರಣವಾದರೆ ಅಧಿಕಾರಿಗಳು ನಾವು ಕೆಲಸ ಮಾಡಿರುತ್ತೇವೆ ಸ್ವಲ್ಪ ಹಣ ಕೊಡಿ ಅಂತ ಬಾಯಿಬಿಟ್ಟು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅಧಿಕಾರಿಗಳಿಗೆ ಸರಕಾರ ವೇತನ ನೀಡುವುದಿಲ್ಲವ? ಎಂಬ ಪ್ರಶ್ನೆ ಉಳಿದಿದೆ. ಜನಸಾಮಾನ್ಯರ ಪರಿಸ್ಥಿತಿ ಏನು? ಸಾರ್ವಜನಿಕರು ಸರಕಾರಕ್ಕೆ ತೆರಿಗೆ ಹಣ ಪಾವತಿಸುತ್ತಾರೆ. ಅದೇ ತೆರಿಗೆ ಹಣದಿಂದ ಸರಕಾರಿ ಅಧಿಕಾರಿಗಳಿಗೆ ವೇತನ ನೀಡುತ್ತದೆ. ಅಷ್ಟೇಲ್ಲದೆ ಸಂಬಳಗಿಂತ ಗಿಂಬಳಕ್ಕೆ ಕೈ ಚಾಚುತ್ತಾರೆ. ಇಲ್ಲಿನ ಅಧಿಕಾರಿಗಳು. ಜಿಲ್ಲಾಧಿಕಾರಿ ಇತ್ತ ಕಡೆ ಗಮನ ಕೋಡದೇ ಇರುವುದೂಂದು ಕಾರಣ ಅಂತ ಹೇಳಬಹುದು.
ಇದಕ್ಕೆ ಅನುಸಾರವಾಗಿ ದೇಶದ ಪ್ರಧಾನ ಮಂತ್ರಿ “ಮೈ ನಹೀ ಕಾಹೋಂಗ್ ಕಾಣೇ ನೈ ದೇವೋಂಗ್” ಅಂತ ಅಬ್ಬರದ ಭಾಷಣದಲ್ಲಿ ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಜನರು ಪಾಡು ನಿಮ್ಮ ಗಮನಕ್ಕೆ ಬಂದಿಲವ್ವಾ ಅನ್ನೋದು ಒಂದು ಕಡೆಯಾದರೆ, ಭಂಡ ಅಧಿಕಾರಿಗಳ ಲಂಚಾವತಾರ ಬ್ರೇಕ್ ಬಿಳವುದು ಯಾವಾಗ ಇದೊಂದು ಕಡೆ.
ಒಟ್ಟನಲ್ಲಿ ಅಧಿಕಾರಿಗಳು ಹಗಲು ದರೋಡೆಗೆ ಇಳಿದುಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಭ್ರಷ್ಟ ಅಧಿಕಾರಿಗಳ ಅಮಾನತು ಮಾಡಿ ಸೂಕ್ತವಾದ ಕ್ರಮ ಜರುಗಿಸಬೇಕು.

ವರದಿ: ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

15 hours ago

ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಮೇಲೆ ಆರ್‌ಟಿಒ ದಾಳಿ: ₹3 ಕೋಟಿ ದಂಡ, ₹15 ಕೋಟಿ ಮೌಲ್ಯದ ವಾಹನ ವಶ

ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…

15 hours ago

ಕೆ.ಆರ್.ಪೇಟೆ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ ವ್ಯಕ್ತಿ ಬಂಧನ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…

16 hours ago

ರ್‍ಯಾಶ್ ಡ್ರೈವಿಂಗ್ ಪ್ರಶ್ನಿಸಿದ ಮಹಿಳೆಗೆ ರ‍್ಯಾಪಿಡೋ ಬೈಕ್ ಚಾಲಕನಿಂದ ಹಲ್ಲೆ: ಪ್ರಕರಣ ದಾಖಲು

ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ…

18 hours ago

ಪುತ್ತೂರಿನಲ್ಲಿ ಆತ್ಮಹತ್ಯೆ ಆಘಾತ: ಏಳು ತಿಂಗಳ ಗರ್ಭಿಣಿ ನೇಣುಬಿಗಿದುಕೊಂಡು ಜೀವವಿಡುವ ದುರ್ಘಟನೆ

ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…

18 hours ago

ಕೋಲಾರ್ ಎಸ್‌ಬಿಐ ಎಟಿಎಂ ದರೋಡೆ: ಕಳ್ಳರು ₹27 ಲಕ್ಷ ನಗದು ದೋಚಿ ಪರಾರಿ.!

ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…

22 hours ago