ಧಾರವಾಡ ಜಿಲ್ಲೆಯಲ್ಲಿ ಲಾರಿ ಚಾಲಕನ ಹಣವನ್ನು ಪೋಲಿಸ್ ಅಧಿಕಾರಿ ಜೇಬಿಗೆ ಹಾಕಿಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆ ಕುಂದಗೋಳ ಪೋಲಿಸ್ ಠಾಣೆಯ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡಿ ನಿಯಮ ಉಲ್ಲಂಘಿಸುವವರಿಗೇ ದಂಡ ವಿಧಿಸಲು ಕಾರ್ಯಾಚರಣೆ ನಡೆಸುವ ವೇಳೆ ಕರ್ತವ್ಯ ನಿರತ ಎ ಎಸ್ ಐ ಭೂದೇಶ್ ಮಡಿವಾಳರ ಮರಳು ಸಾಗಾಟದ ಲಾರಿ ಒಂದು ಬಂದಿದೆ ಆಗ ಕುಂದಗೋಳ ಪೋಲಿಸ್ ಠಾಣೆಯ ಪೊಲೀಸರು ಈ ಲಾರಿಯನ್ನು ತಡೆದು ತಪಾಸಣೆ ಮಾಡಿ ಚಾಲಕನಿಗೆ ದಂಡ ಹಾಕುವಾಗ ಲಾರಿ ಚಾಲಕ ಸರ್ ದಂಡ ಏನೂ ಬೇಡ ನನ್ನ ಬಳಿ ಇರುವ ಹಣವನ್ನು ಕೊಟ್ಟುಬಿಡುತ್ತೇನೆ ತಗೊಂಡು ಬಿಟ್ಟುಬಿಡಿ ಎಂದಾಗ ಎ ಎಸ್ ಐ ಮಡಿವಾಳರ ಲಾರಿ ಚಾಲಕನ ಬಳಿ ಇದ್ದ ಹಣವನ್ನು ಪಡೆದುಕೊಂಡು ಜೇಬಿಗೆ ಹಾಕಿಕೊಂಡಿದ್ದಾರೆ ಲಾರಿ ಹಾಗೂ ಚಾಲಕನನ್ನು ಸುಮ್ಮನೇ ಕಳುಹಿಸಿದ್ದಾರೆ.
ಪ್ರತಿದಿನ ಗದಗ ಜಿಲ್ಲೆ ಲಕ್ಷ್ಮೇಶ್ವರ ಕಡೆಯಿಂದ ಮರಳು ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ನೂರಾರು ಲಾರಿಗಳು ಓಡಾಡುತ್ತವೆ ಈ ಎಲ್ಲಾ ಮರಳು ತುಂಬಿದ ಲಾರಿಗಳು ಧಾರವಾಡ ಜಿಲ್ಲೆಯ ಕುಂದಗೋಳ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಓಡಾಡುತ್ತವೆ ಅದಕ್ಕೆ ಹೀಗೆ ಆಗುತ್ತಿರುವುದು ಸಾಮನ್ಯವಾಗಿಬಿಟ್ಟಿದೆ ಎಂಬುದು ಈ ಪ್ರಕರಣಕ್ಕೆ ಸಾಕ್ಷಿ.
ಆದರೂ ಸರಕಾರಿ ಸೇವೆಯಲ್ಲಿ ಪೋಲಿಸ್ ಅಧಿಕಾರಿ ಆಗೀ ಸರ್ಕಾರದಿಂದ ಸಂಬಳ ಪಡೆದೂ ಈ ರೀತಿಯಲ್ಲಿ ಲಂಚದ ರೂಪದಲ್ಲಿ ಚಾಲಕರ ಕಡೆಯಿಂದ ಹಣ ಪಡೆದ ಕುಂದಗೋಳ ಪೋಲಿಸ್ ಠಾಣೆಯ ಎ ಎಸ್ ಐ ಭೂದೆಶ್ ಮಡಿವಾಳರ ಮೇಲೆ ಧಾರವಾಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಲೋಕೇಶ್ ಜಗಲಾಸುರ್ ಯಾವ ಕ್ರಮವನ್ನು ಜರುಗಿಸುತ್ತಾರೋ ಗೊತ್ತಿಲ್ಲ. ಜಿಲ್ಲೆಯಲ್ಲಿರುವ ಇಂತಹ ಲಂಚಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕಾಗಿದೆ.
ವರದಿ : ಶಿವು ಹುಬ್ಬಳ್ಳಿ
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ…
ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್ನಲ್ಲಿ…
ಉನ್ನತ ವ್ಯಾಸಂಗದ ಕನಸು ಹೊತ್ತು ವಿದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನ ಜೀವನ ಇದೀಗ ಸಂಪೂರ್ಣ ಬದಲಾಗಿದೆ. ಎಂಬಿಬಿಎಸ್ ಓದಲು…
ದೆಹಲಿಯ ಉತ್ತಮ್ ನಗರದಲ್ಲಿ 24 ವರ್ಷದ ಯುವಕನೊಬ್ಬನನ್ನು ಸ್ಥಳೀಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ, ಆತನ ಮೊಬೈಲ್ನಲ್ಲಿ ಪತ್ತೆಯಾದ…
ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣವನ್ನು ಕಿತ್ತೂರು ಪೊಲೀಸರು ಭೇದಿಸಿದ್ದು, ರಾಜಸ್ಥಾನ ಮೂಲದ ನಾಲ್ವರು ಹಾಗೂ…
ಬೆಳಗಾವಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು)…