Latest

ಕ್ಯಾಪ್ಟನ್ ಕೂಲ್” ಎಂಬ ಹೆಸರು ಈಗ ಧೋನಿಗೆ ಮಾತ್ರ.! ಟ್ರೇಡ್‌ಮಾರ್ಕ್ ಮಂಜೂರು.

ಕ್ರಿಕೆಟ್ ಅಭಿಮಾನಿಗಳು “ಕ್ಯಾಪ್ಟನ್ ಕೂಲ್” ಎಂದು ಪ್ರೀತಿಯಿಂದ ಕರೆಯುವ ಮಹೇಂದ್ರ ಸಿಂಗ್ ಧೋನಿ, ಇದೀಗ ತಮ್ಮ ಈ ಪ್ರಸಿದ್ಧ ಅಡ್ಡಹೆಸರನ್ನು ಕಾನೂನು ಬದ್ಧವಾಗಿ ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಮೈದಾನದಲ್ಲಿ ತಾಳ್ಮೆ, ಶಾಂತಿ ಹಾಗೂ ಷಾಟ್ ತೀರ್ಮಾನಗಳಿಂದ ದಿಟ್ಟ ನಾಯಕತ್ವ ತೋರಿಸಿದ್ದ ಧೋನಿಗೆ ಈ ಬಿರುದು ತಮ್ಮದೇ ಆದ ವೈಯಕ್ತಿಕ ಗುರುತಾಗಿ ಪರಿಣಮಿಸಿದ್ದು, ಇದೀಗ ಅದನ್ನು ಅಧಿಕೃತವಾಗಿ ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಲು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಜೂನ್ 16, 2025ರಂದು ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ ಧೋನಿಯ “ಕ್ಯಾಪ್ಟನ್ ಕೂಲ್” ಅರ್ಜಿಯ ಪ್ರಕಟಣೆ ನಡೆಯಿತು. ಟ್ರೇಡ್‌ಮಾರ್ಕ್ ಪೋರ್ಟಲ್ ಈ ಅರ್ಜಿಯನ್ನು ಮಂಜೂರಾಗಿಸಿದ್ದು, ಈ ಹೆಸರನ್ನು ಇನ್ನು ಮುಂದೆ ಧೋನಿ ಹೊರತುಪಡಿಸಿ ಯಾರು ಬಳಸಲು ಸಾಧ್ಯವಿಲ್ಲ.

ಆದರೆ ಈ ಅರ್ಜಿ ಮೊದಲ ಬಾರಿಗೆ ಸಲ್ಲಿಸಿದಾಗಲೇ, ಇದಕ್ಕೆ ವಿರೋಧದ ಧ್ವನಿ ಕೇಳಿಬಂದಿತ್ತು. ಟ್ರೇಡ್‌ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಈ ಹೆಸರಿನಂತೆ ಇದ್ದ ಗುರುತುಗಳು ಜನರಲ್ಲಿ ಗೊಂದಲ ಉಂಟುಮಾಡಬಹುದು ಎಂಬ ಆಕ್ಷೇಪಣೆ ವ್ಯಕ್ತವಾಗಿತ್ತು. ಆದರೆ ಧೋನಿ ಪರ ವಕೀಲರು ಮಂಡಿಸಿದ ಅರ್ಥಪೂರ್ಣ ವಾದಗಳು ನಿರ್ಣಾಯಕವಾದವು.

ವಕೀಲರ ಪ್ರಕಾರ, “ಕ್ಯಾಪ್ಟನ್ ಕೂಲ್” ಎಂಬ ಪದ ಧೋನಿಯ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಅವಿಭಾಜ್ಯ ಭಾಗವಾಗಿದೆ. ಕ್ರಿಕೆಟ್ ಅಭಿಮಾನಿಗಳು, ಮಾಧ್ಯಮಗಳು ಈ ಪದವನ್ನು ವರ್ಷಗಳಿನಿಂದ ಧೋನಿಗೆ ಸಾಂಕೇತಿಕವಾಗಿ ಬಳಸುತ್ತಿದ್ದು, ಇದು ಇತರರಿಗಿಂತ ಧೋನಿಗೆ ವಿಶಿಷ್ಟವಾದ ಸಂಬಂಧವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಈ ವಾದಗಳನ್ನು ಪರಿಗಣಿಸಿದ ಟ್ರೇಡ್‌ಮಾರ್ಕ್ ಅಧಿಕಾರಿಗಳು ಧೋನಿಗೆ ಈ ಹೆಸರನ್ನು ಟ್ರೇಡ್‌ಮಾರ್ಕ್ ರೂಪದಲ್ಲಿ ಮಂಜೂರು ಮಾಡಿದ್ದಾರೆ. ಇದೀಗ ಧೋನಿಗೆ ಮಾತ್ರ ಈ ಬಿರುದನ್ನು ಬಳಸುವ ಕಾನೂನು ಹಕ್ಕು ಲಭಿಸಿದೆ.

ಇದಾದ ಮೇಲೆ, ಧೋನಿಯ ಈ ಹೆಸರನ್ನು ಕಮರ್ಶಿಯಲ್ ಗಾಗಿ ಬಳಸಲು ಇತರರು ಮುಂದೆ ಬರುವುದು ಕಠಿಣ. ಅವರು ಅನಧಿಕೃತವಾಗಿ ಈ ಹೆಸರನ್ನು ಉಪಯೋಗಿಸಿದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ.

nazeer ahamad

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago