ಕ್ರಿಕೆಟ್ ಅಭಿಮಾನಿಗಳು “ಕ್ಯಾಪ್ಟನ್ ಕೂಲ್” ಎಂದು ಪ್ರೀತಿಯಿಂದ ಕರೆಯುವ ಮಹೇಂದ್ರ ಸಿಂಗ್ ಧೋನಿ, ಇದೀಗ ತಮ್ಮ ಈ ಪ್ರಸಿದ್ಧ ಅಡ್ಡಹೆಸರನ್ನು ಕಾನೂನು ಬದ್ಧವಾಗಿ ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಮೈದಾನದಲ್ಲಿ ತಾಳ್ಮೆ, ಶಾಂತಿ ಹಾಗೂ ಷಾಟ್ ತೀರ್ಮಾನಗಳಿಂದ ದಿಟ್ಟ ನಾಯಕತ್ವ ತೋರಿಸಿದ್ದ ಧೋನಿಗೆ ಈ ಬಿರುದು ತಮ್ಮದೇ ಆದ ವೈಯಕ್ತಿಕ ಗುರುತಾಗಿ ಪರಿಣಮಿಸಿದ್ದು, ಇದೀಗ ಅದನ್ನು ಅಧಿಕೃತವಾಗಿ ಟ್ರೇಡ್ಮಾರ್ಕ್ ಆಗಿ ನೋಂದಾಯಿಸಲು ಮೊದಲ ಹೆಜ್ಜೆ ಇಟ್ಟಿದ್ದಾರೆ.
ಜೂನ್ 16, 2025ರಂದು ಟ್ರೇಡ್ಮಾರ್ಕ್ ಜರ್ನಲ್ನಲ್ಲಿ ಧೋನಿಯ “ಕ್ಯಾಪ್ಟನ್ ಕೂಲ್” ಅರ್ಜಿಯ ಪ್ರಕಟಣೆ ನಡೆಯಿತು. ಟ್ರೇಡ್ಮಾರ್ಕ್ ಪೋರ್ಟಲ್ ಈ ಅರ್ಜಿಯನ್ನು ಮಂಜೂರಾಗಿಸಿದ್ದು, ಈ ಹೆಸರನ್ನು ಇನ್ನು ಮುಂದೆ ಧೋನಿ ಹೊರತುಪಡಿಸಿ ಯಾರು ಬಳಸಲು ಸಾಧ್ಯವಿಲ್ಲ.
ಆದರೆ ಈ ಅರ್ಜಿ ಮೊದಲ ಬಾರಿಗೆ ಸಲ್ಲಿಸಿದಾಗಲೇ, ಇದಕ್ಕೆ ವಿರೋಧದ ಧ್ವನಿ ಕೇಳಿಬಂದಿತ್ತು. ಟ್ರೇಡ್ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಈ ಹೆಸರಿನಂತೆ ಇದ್ದ ಗುರುತುಗಳು ಜನರಲ್ಲಿ ಗೊಂದಲ ಉಂಟುಮಾಡಬಹುದು ಎಂಬ ಆಕ್ಷೇಪಣೆ ವ್ಯಕ್ತವಾಗಿತ್ತು. ಆದರೆ ಧೋನಿ ಪರ ವಕೀಲರು ಮಂಡಿಸಿದ ಅರ್ಥಪೂರ್ಣ ವಾದಗಳು ನಿರ್ಣಾಯಕವಾದವು.
ವಕೀಲರ ಪ್ರಕಾರ, “ಕ್ಯಾಪ್ಟನ್ ಕೂಲ್” ಎಂಬ ಪದ ಧೋನಿಯ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಅವಿಭಾಜ್ಯ ಭಾಗವಾಗಿದೆ. ಕ್ರಿಕೆಟ್ ಅಭಿಮಾನಿಗಳು, ಮಾಧ್ಯಮಗಳು ಈ ಪದವನ್ನು ವರ್ಷಗಳಿನಿಂದ ಧೋನಿಗೆ ಸಾಂಕೇತಿಕವಾಗಿ ಬಳಸುತ್ತಿದ್ದು, ಇದು ಇತರರಿಗಿಂತ ಧೋನಿಗೆ ವಿಶಿಷ್ಟವಾದ ಸಂಬಂಧವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಈ ವಾದಗಳನ್ನು ಪರಿಗಣಿಸಿದ ಟ್ರೇಡ್ಮಾರ್ಕ್ ಅಧಿಕಾರಿಗಳು ಧೋನಿಗೆ ಈ ಹೆಸರನ್ನು ಟ್ರೇಡ್ಮಾರ್ಕ್ ರೂಪದಲ್ಲಿ ಮಂಜೂರು ಮಾಡಿದ್ದಾರೆ. ಇದೀಗ ಧೋನಿಗೆ ಮಾತ್ರ ಈ ಬಿರುದನ್ನು ಬಳಸುವ ಕಾನೂನು ಹಕ್ಕು ಲಭಿಸಿದೆ.
ಇದಾದ ಮೇಲೆ, ಧೋನಿಯ ಈ ಹೆಸರನ್ನು ಕಮರ್ಶಿಯಲ್ ಗಾಗಿ ಬಳಸಲು ಇತರರು ಮುಂದೆ ಬರುವುದು ಕಠಿಣ. ಅವರು ಅನಧಿಕೃತವಾಗಿ ಈ ಹೆಸರನ್ನು ಉಪಯೋಗಿಸಿದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಸದ್ದು ಭಾರತದ ಬಾಕ್ಸ್ ಆಫೀಸ್ನಲ್ಲಿ ಕೇಳಿಬರುತ್ತಿರುವಂತೆಯೇ, ಅದರ ಪ್ರಭಾವ…
ಉತ್ತರ ಪ್ರದೇಶದ ಸುಮೇರ್ಪುರ್ ಗ್ರಾಮದ ಮಾಜಿ ಅಧ್ಯಕ್ಷ ಮುಸ್ತಾಕ್ ಗುಲ್ಶನ್ ಅಲಿಯಾಸ್ ಮುನ್ನಾ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಪ್ರಕರಣ…
ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…
ಕರ್ನಾಟಕ ಹೈಕೋರ್ಟ್ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…