ಮುಸಲ್ಮಾನ ಯುವತಿಯನ್ನು ವಿವಾಹವಾದ ಹರೀಶ ಹೆಸರಿನ ಯುವಕನನ್ನು ಯುವತಿಯ ಸಹೋದರರು ದೇವಸ್ಥಾನದ ಹತ್ತಿರ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತೇಲಂಗಾಣಾದ ಭಾಗ್ಯನಗರದಲ್ಲಿ ನಡೆದ್ದಿದೆ.
ದೇವರಕೊಂಡಾದಲ್ಲಿ ವಾಸಿಸುವ ಹರೀಶನು 7 ತಿಂಗಳ ಹಿಂದೆ ಭಾಗ್ಯನಗರದ ಎಲ್ಲಾರೆಡ್ಡಿಗುಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದನು. ಅಲ್ಲಿ ಅವನಿಗೆ ಮುಸಲ್ಮಾನ ಯುವತಿಯ ಪರಿಚಯವಾಗಿತ್ತು. ಅವರಲ್ಲಿ ಪ್ರೀತಿ ನಿರ್ಮಾಣವಾಗಿತ್ತು. ಆದರೆ, ಯುವತಿಯ ಕುಟುಂಬದವರಿಗೆ ಅದು ಒಪ್ಪಿಗೆಯಿರಲಿಲ್ಲ. ಯುವತಿಯ ಸಹೋದರರು ಹರೀಶನನ್ನು ಅವಳಿಂದ ದೂರವಿರುವಂತೆ ಹೇಳಿದ್ದರು ಮತ್ತು ಅವನ ಮೇಲೆ ಹಲ್ಲೆ ಮಾಡಿದ್ದರು. ತದನಂತರವೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು. 10 ದಿನಗಳ ಹಿಂದೆ ಅವರು ಕದ್ದುಮುಚ್ಚಿ ವಿವಾಹ ಮಾಡಿಕೊಂಡರು.
ಆದರೆ, ಅವರು ಪ್ರತ್ಯೇಕವಾಗಿಯೇ ಇರುತ್ತಿದ್ದರು. ಹರೀಶನ ಕುಟುಂಬದವರಿಗೆ ‘ಅವನು ಎಲ್ಲಿ ವಾಸಿಸುತ್ತಿದ್ದಾನೆ ?’ ಎನ್ನುವುದು ತಿಳಿದಿರಲಿಲ್ಲ. ಇನ್ನೊಂದೆಡೆ ಮುಸಲ್ಮಾನ ಯುವತಿಯೂ ನಾಪತ್ತೆಯಾಗಿದ್ದರಿಂದ ಅವಳ ಸಹೋದರರು ಹುಡುಕುತ್ತಿದ್ದರು. ಅವರು ಹರೀಶನ ಸ್ನೇಹಿತ ಶಿವನನ್ನು ಅಪಹರಿಸಿ ಅವನಿಂದ ಹರೀಶನ ಮಾಹಿತಿಯನ್ನು ಪಡೆದುಕೊಂಡರು.
ಯುವತಿಯ ಸಹೋದರರಿಗೆ ದುಲಪಲ್ಲಿ ಪ್ರದೇಶದಲ್ಲಿ ಹರೀಶ ಇದ್ದಾನೆಂದು ತಿಳಿದಾಗ ಅವನನ್ನು ಭೇಟಿಯಾಗಲು ಹೋದನು. ಅವನನ್ನು ಅಲ್ಲಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಭೇಟಿಯಾದಾಗ ಯುವತಿಯ ಸಹೋದರರು ಹರೀಶನ ಮೇಲೆ ಹಲ್ಲೆ ಮಾಡುತ್ತಾ ಚೂರಿಯಿಂದ ಇರದಿದ್ದಾನೆ. ಆ ಸಮಯದಲ್ಲಿ ಯುವತಿಯೂ ಅಲ್ಲಿ ಉಪಸ್ಥಿತಳಿದ್ದಳು. ಆಕೆಯ ಸಹೋದರನು ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಿದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, 5 ಜನರನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ…
ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್ನಲ್ಲಿ…
ಉನ್ನತ ವ್ಯಾಸಂಗದ ಕನಸು ಹೊತ್ತು ವಿದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನ ಜೀವನ ಇದೀಗ ಸಂಪೂರ್ಣ ಬದಲಾಗಿದೆ. ಎಂಬಿಬಿಎಸ್ ಓದಲು…
ದೆಹಲಿಯ ಉತ್ತಮ್ ನಗರದಲ್ಲಿ 24 ವರ್ಷದ ಯುವಕನೊಬ್ಬನನ್ನು ಸ್ಥಳೀಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ, ಆತನ ಮೊಬೈಲ್ನಲ್ಲಿ ಪತ್ತೆಯಾದ…
ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣವನ್ನು ಕಿತ್ತೂರು ಪೊಲೀಸರು ಭೇದಿಸಿದ್ದು, ರಾಜಸ್ಥಾನ ಮೂಲದ ನಾಲ್ವರು ಹಾಗೂ…
ಬೆಳಗಾವಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು)…