ಮುಸಲ್ಮಾನ ಯುವತಿಯನ್ನು ವಿವಾಹವಾದ ಹರೀಶ ಹೆಸರಿನ ಯುವಕನನ್ನು ಯುವತಿಯ ಸಹೋದರರು ದೇವಸ್ಥಾನದ ಹತ್ತಿರ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತೇಲಂಗಾಣಾದ ಭಾಗ್ಯನಗರದಲ್ಲಿ ನಡೆದ್ದಿದೆ.
ದೇವರಕೊಂಡಾದಲ್ಲಿ ವಾಸಿಸುವ ಹರೀಶನು 7 ತಿಂಗಳ ಹಿಂದೆ ಭಾಗ್ಯನಗರದ ಎಲ್ಲಾರೆಡ್ಡಿಗುಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದನು. ಅಲ್ಲಿ ಅವನಿಗೆ ಮುಸಲ್ಮಾನ ಯುವತಿಯ ಪರಿಚಯವಾಗಿತ್ತು. ಅವರಲ್ಲಿ ಪ್ರೀತಿ ನಿರ್ಮಾಣವಾಗಿತ್ತು. ಆದರೆ, ಯುವತಿಯ ಕುಟುಂಬದವರಿಗೆ ಅದು ಒಪ್ಪಿಗೆಯಿರಲಿಲ್ಲ. ಯುವತಿಯ ಸಹೋದರರು ಹರೀಶನನ್ನು ಅವಳಿಂದ ದೂರವಿರುವಂತೆ ಹೇಳಿದ್ದರು ಮತ್ತು ಅವನ ಮೇಲೆ ಹಲ್ಲೆ ಮಾಡಿದ್ದರು. ತದನಂತರವೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು. 10 ದಿನಗಳ ಹಿಂದೆ ಅವರು ಕದ್ದುಮುಚ್ಚಿ ವಿವಾಹ ಮಾಡಿಕೊಂಡರು.
ಆದರೆ, ಅವರು ಪ್ರತ್ಯೇಕವಾಗಿಯೇ ಇರುತ್ತಿದ್ದರು. ಹರೀಶನ ಕುಟುಂಬದವರಿಗೆ ‘ಅವನು ಎಲ್ಲಿ ವಾಸಿಸುತ್ತಿದ್ದಾನೆ ?’ ಎನ್ನುವುದು ತಿಳಿದಿರಲಿಲ್ಲ. ಇನ್ನೊಂದೆಡೆ ಮುಸಲ್ಮಾನ ಯುವತಿಯೂ ನಾಪತ್ತೆಯಾಗಿದ್ದರಿಂದ ಅವಳ ಸಹೋದರರು ಹುಡುಕುತ್ತಿದ್ದರು. ಅವರು ಹರೀಶನ ಸ್ನೇಹಿತ ಶಿವನನ್ನು ಅಪಹರಿಸಿ ಅವನಿಂದ ಹರೀಶನ ಮಾಹಿತಿಯನ್ನು ಪಡೆದುಕೊಂಡರು.
ಯುವತಿಯ ಸಹೋದರರಿಗೆ ದುಲಪಲ್ಲಿ ಪ್ರದೇಶದಲ್ಲಿ ಹರೀಶ ಇದ್ದಾನೆಂದು ತಿಳಿದಾಗ ಅವನನ್ನು ಭೇಟಿಯಾಗಲು ಹೋದನು. ಅವನನ್ನು ಅಲ್ಲಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಭೇಟಿಯಾದಾಗ ಯುವತಿಯ ಸಹೋದರರು ಹರೀಶನ ಮೇಲೆ ಹಲ್ಲೆ ಮಾಡುತ್ತಾ ಚೂರಿಯಿಂದ ಇರದಿದ್ದಾನೆ. ಆ ಸಮಯದಲ್ಲಿ ಯುವತಿಯೂ ಅಲ್ಲಿ ಉಪಸ್ಥಿತಳಿದ್ದಳು. ಆಕೆಯ ಸಹೋದರನು ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಿದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, 5 ಜನರನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ…
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದಿಲ್ಲ ಎಂಬ ಮಾತು ಹಳೆಯದು. ಆದರೆ ಇದೀಗ ಈ ಹಿನ್ನೆಲೆಯಲ್ಲಿಯೇ ಭಾರೀ…
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…