ವಿಜಯನಗರ: ಇನ್ಸ್ಟಾಗ್ರಾಂನಲ್ಲಿ ಶುರುವಾಯಿಸಿದ ಪರಿಚಯ ಪ್ರೀತಿಯಾಗಿ ಬೆಳೆದಿದ್ದು, ಕೊನೆಗೆ ಸಾವು ಎಂಬ ಕರಾಳ ಅಂತ್ಯಕ್ಕೆ ಕಾರಣ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂಬ ವಿವಾಹಿತ ಮಹಿಳೆ, ಪ್ರೇಮಿ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದ್ದು, ಇದನ್ನು ದೃಢಪಡಿಸುವ ಡೆತ್ ನೋಟ್ ಕೂಡ ಸಿಕ್ಕಿದೆ.
ಪ್ರೇಮದ ಆರಂಭ ಇನ್ಸ್ಟಾಗ್ರಾಂನಲ್ಲಿ:
ಅಕ್ಟೋಬರ್ 2024ರಲ್ಲಿ ಜ್ಯೋತಿ ಮತ್ತು ಶಿವಮೊಗ್ಗ ಜಿಲ್ಲೆಯ ಸುಗೂರು ಮೂಲದ ಬಸವರಾಜ್ ಎಂಬ ಯುವಕನಿಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದದ್ದು, ನಂತರ ಪ್ರೀತಿಯಾಗಿ ರೂಪಾಂತರಗೊಂಡಿತ್ತು. ಮೊದಲಿಗೆ ಬಸವರಾಜ್ ಸ್ವತಃ ಮೆಸೇಜ್ ಮೂಲಕ ಸಂಪರ್ಕ ಸಾಧಿಸಿದ್ದ. ಪ್ರಾರಂಭದಲ್ಲಿ ಜ್ಯೋತಿ ಆಸಕ್ತಿಯಿಲ್ಲದಿದ್ದರೂ, ಆಸಕ್ತಿಯಿಂದ ಮೆಸೇಜ್ ಮಾಡುವ ಮೂಲಕ ತನ್ನ ಹೃದಯ ಗೆದ್ದಿದ್ದ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ.
ವಿಶ್ವಾಸಘಾತ ಮತ್ತು ನೋವಿನ ನಿಜಕಥೆ:
ಬಸವರಾಜ್, ಜ್ಯೋತಿಯೊಂದಿಗೆ ಒಡನಾಟ ಮುಂದುವರೆಸಿದ್ದರೂ, ಇತರ ಯುವತಿಯರ ಜೊತೆಗೂ ಸಂಪರ್ಕದಲ್ಲಿದ್ದ ಎಂಬ ವಿಚಾರ ತಿಳಿದ ಜ್ಯೋತಿ, ಆತನ ವಾಟ್ಸಾಪ್, ಇನ್ಸ್ಟಾಗ್ರಾಂ, ಜಿಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದ್ದಳು. ಈತನಿಗೆ ನಂಬಿ, ಲಾಡ್ಜ್ಗಳಿಗೆ ಹೋಗಿ ಪೋಟೋಸ್, ಸೆಕ್ಸ್ ಮಾಡಿದ್ದು ಕೂಡ ನನ್ನ ಪೋನ್ ನಲ್ಲಿ, ರೆಕಾರ್ಡಿಂಗ್ಗಳು ತನ್ನ ಮೊಬೈಲ್ನಲ್ಲಿ ಇವೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.
ಮದುವೆ ವಾಗ್ದಾನ ವಿಫಲ – ಆತ್ಮಹತ್ಯೆ:
ಬಸವರಾಜ್ ಮದುವೆಯಾಗುವುದಾಗಿ ಮಾತುಕತೆ ನಡೆಸಿದ್ದರೂ, ನಂತರ ಅವಳನ್ನು ದೂರ ಮಾಡುತ್ತಾ ಶುರುವಿಟ್ಟಿದ್ದ. ಇದರಿಂದ ತೀವ್ರ ಮನೋನೊಂದಿಗೊಳಗಾದ ಜ್ಯೋತಿ, ತನ್ನ ಬದುಕಿಗೆ ಅಂತ್ಯ ಹಾಕಿಕೊಳ್ಳಲು ನಿರ್ಧರಿಸಿದ್ದಳು. ಜುಲೈ 26ರಂದು ತುಂಗಭದ್ರಾ ನದಿಯ ಸೇತುವೆಯಿಂದ ಜಂಪ್ ಮಾಡಿದ ಘಟನೆಯನ್ನು ದೃಷ್ಟಿಪಥದಲ್ಲಿ ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಶವವನ್ನೇ ದೋರಿ ಹೊರತೆಗೆಯಲಾಗಿದೆ.
ಡೆತ್ ನೋಟ್ನಲ್ಲಿರುವ ಭಾರಿ ಆರೋಪ:
ಡೆತ್ ನೋಟ್ನಲ್ಲಿ ಜ್ಯೋತಿ, “ನನ್ನ ಸಾವಿಗೆ ಸುಗೂರು ಶಿವಮೂರ್ತಿ ಗಾಣಿಗನ ಮಗ ಬಸವರಾಜ್ ಕಾರಣ. ಈತ ನನಗೆ ಮದುವೆ ಆಗ್ತೀನಿ ಅಂತ ಸುಳ್ಳು ಹೇಳಿ, ನನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ. ನನ್ನ ಗಂಡನನ್ನೂ ಸಾಯಿಸಿ ನಿನ್ನ ಹೆಸರಿಗೆ ಆಸ್ತಿ ಮಾಡಿಸಿಕೊಳ್ಳೋಕೆ ತಯಾರಿ ತೋರಿಸಿದ್ದ. ಇವನಿಗೂ ಮರಣದಂಡನೆ ಆಗಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ:
ಪೊಲೀಸರು ಈಗಾಗಲೇ ಡೆತ್ ನೋಟ್ ಮತ್ತು ಮೊಬೈಲ್ ಡೇಟಾವನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ತಯಾರಿ ನಡೆಯುತ್ತಿದೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…