ಮುಂಡಗೋಡ: ತಾಲೂಕಿನ ಕಾತೂರು ವಲಯ ಅರಣ್ಯಾಧಿಕಾರಿಗಳ ಸರಹದ್ದಿನಲ್ಲಿ ಬರುವ ಚಿಗಳ್ಳಿ ಗ್ರಾಮದ ಚಿಗಳ್ಳಿ ಜಲಾಶಯಕ್ಕೆ ಹೋಗುವ ರಸ್ತೆಯ ಪಕ್ಕದಲ್ಲೇ ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆದು ಸಾಗಿಸಿದ್ದಾರೆ ಮತ್ತು ಚಿಗಳ್ಳಿ ಜಲಾಶಯದ ಉಬ್ಬುಗಡೆ ಪ್ರದೇಶದಲ್ಲಿ ಮೊಹರಂ (ಗೊಚ್ಚು) ಅನ್ನು ತೆಗೆದು ಸಾಗಿಸಿದ್ದಾರೆ.
ಹೌದು, ಅಂದ ಹಾಗೆ ಈ ಮಣ್ಣನ್ನು ಅಕ್ರಮವಾಗಿ ಕಳೆದ 15 ದಿನಗಳ ಹಿಂದೆಯೇ ಸಾಗಿಸಿದ್ದಾರೆನ್ನಲಾಗಿದೆ.ಈ ವಿಷಯವಾಗಿ ಕೆಲವರು ಕೇಳಿದಾಗ ಜೋಗೇಶ್ವರ ಹಳ್ಳದ ಹತ್ತಿರ ಇರುವ ಅರಣ್ಯ ಇಲಾಖೆಯ ನರ್ಸರಿಗೆ ಮಣ್ಣನ್ನು ಸಾಗಿಸಲಾಗಿದೆ ಎಂದು ಹೇಳಿದ್ದಾರೆ.ಆದರೆ ಅರಣ್ಯ ಇಲಾಖೆಯ ಈ ನರ್ಸರಿಗೆ ಮಣ್ಣು ಹೋಗಿಯೇ ಇಲ್ಲ.
ವಿಷಯ ಗೊತ್ತಿದ್ದರೂ ಸುಮ್ಮನಿದ್ದಾರಾ? ಹೌದು ,ಈ ವಿಷಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಅನಿಸುತ್ತದೆ ಏಕೆಂದರೆ ರಸ್ತೆಯ ಪಕ್ಕದಲ್ಲಿ ಈ ಅಕ್ರಮ ನಡೆದರು ಇದುವರೆಗೂ ಈ ವಿಷಯದ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಅಕ್ರಮ ಇಟ್ಟಿಗೆ ತಯಾರಿಕೆಗೆ ಸಾಗಾಣಿಕೆಯಾಗಿದೆಯಾ?ಅಕ್ರಮವಾಗಿ 30 ರಿಂದ 40 ಟಿಪ್ಪರ್ ಗಳಷ್ಟು ಮಣ್ಣು ಹೋಗಿರುವುದಾದರೂ ಎಲ್ಲಿಗೆ?ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಕ್ರಮವಾಗಿ ತಯಾರಾಗುವ ಇಟ್ಟಿಗೆ ತಯಾರಕರೊಂದಿಗೆ ಶಾಮಿಲಾಗಿ ಮಣ್ಣು ಸಾಗಾಣಿಕೆ ಆಗಲು ಅನುವು ಮಾಡಿಕೊಟ್ಟಿದ್ದಾರಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಏನೇ ಆಗಲಿ ಹೀಗೆ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಿಸಿದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವವರೇ ಎಂದು ಕಾಯ್ದು ನೋಡಬೇಕಾಗಿದೆ.
ವಲಯ ಅರಣ್ಯ ಅಧಿಕಾರಿಗಳು ಹೇಳೋದೇನು: ಈ ಬಗ್ಗೆ ಕಾತೂರು ವಲಯ ಅರಣ್ಯ ಅಧಿಕಾರಿಗಳನ್ನು ಕೇಳಿದಾಗ ನಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ಮಂಜುನಾಥ ಹರಿಜನ
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ…
ದಾವಣಗೆರೆ: ಜಿಲ್ಲಾಧಿಕಾರಿಗೆ ವಿರುದ್ಧವೇ ಅವಾಜ್ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಒನ್ವೇ ರಸ್ತೆ ಉಲ್ಲಂಘಿಸಿ ಬಂದ…
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…